ಎಲೆಕ್ಟ್ರಿಕ್ ಬಸ್ 
ರಾಜ್ಯ

ಜನವರಿ 16 ರಿಂದ ಬೆಂಗಳೂರು- ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್‌ ಸೇವೆ ಆರಂಭ

ಜನವರಿ 16 ರಿಂದ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣವು ತ್ವರಿತ, ಸುಗಮ ಮತ್ತು ಶೂನ್ಯ ಹೊರಸೂಸುವಿಕೆಯೊಂದಿಗೆ ಶಬ್ದರಹಿತವಾಗಿರುತ್ತದೆ. ಕೆಎಸ್ಆರ್‌ಟಿಸಿ ತನ್ನ ಮಹತ್ವಾಕಾಂಕ್ಷೆಯ ಎಲೆಕ್ಟ್ರಿಕ್ ಬಸ್ ಸೇವೆಯ ವಾಣಿಜ್ಯ ಕಾರ್ಯಾಚರಣೆಯನ್ನು ಬೆಂಗಳೂರಿನಿಂದ ಮೈಸೂರಿಗೆ 300 ರೂಪಾಯಿಗಳ ಟಿಕೆಟ್ ದರದೊಂದಿಗೆ ಪ್ರಾರಂಭಿಸಲಿದೆ.

ಬೆಂಗಳೂರು: ಜನವರಿ 16 ರಿಂದ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣವು ತ್ವರಿತ, ಸುಗಮ ಮತ್ತು ಶೂನ್ಯ ಹೊರಸೂಸುವಿಕೆಯೊಂದಿಗೆ ಶಬ್ದರಹಿತವಾಗಿರುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್‌ಟಿಸಿ) ತನ್ನ ಮಹತ್ವಾಕಾಂಕ್ಷೆಯ ಎಲೆಕ್ಟ್ರಿಕ್ ಬಸ್ ಸೇವೆಯ ವಾಣಿಜ್ಯ ಕಾರ್ಯಾಚರಣೆಯನ್ನು ಬೆಂಗಳೂರಿನಿಂದ ಮೈಸೂರಿಗೆ 300 ರೂಪಾಯಿಗಳ ಟಿಕೆಟ್ ದರದೊಂದಿಗೆ ಪ್ರಾರಂಭಿಸಲಿದೆ.

ಫೆಬ್ರುವರಿ ಅಂತ್ಯದ ವೇಳೆಗೆ ಬೆಂಗಳೂರಿನಿಂದ ಆರು ಮಾರ್ಗಗಳಲ್ಲಿ 50 ಇ-ಬಸ್‌ ಸೇವೆಯನ್ನು ಆರಂಭಿಸುವ ನಿರೀಕ್ಷೆಯಿದೆ. ಇ-ಬಸ್‌ಗಳು ಉತ್ತಮ ಸಸ್ಪೆನ್ಶನ್ ನೀಡುತ್ತವೆ ಮತ್ತು ದೂರದರ್ಶನ, ಪ್ರೀಮಿಯಂ ಸೀಟ್‌ಗಳು, ವೈಯಕ್ತಿಕ ಚಾರ್ಜಿಂಗ್ ಸಾಕೆಟ್‌ಗಳು, ಎಸಿ ವೆಂಟ್‌ಗಳು, ಓದುವ ದೀಪಗಳು ಮತ್ತು ಇತರ ಸೌಕರ್ಯಗಳೊಂದಿಗೆ ಬರುತ್ತವೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಂಡಿ ಅನ್ಬು ಕುಮಾರ್, 'ವಿವಿಧ ಕಾರಣಗಳಿಂದಾಗಿ ಇ-ಬಸ್ ಸೇವೆಯನ್ನು ಪ್ರಾರಂಭಿಸುವುದು ಮೂರು ತಿಂಗಳು ವಿಳಂಬವಾಗಿದೆ. ಈಗ, ಡಿಸೆಂಬರ್ 31 ರಂದು ನಮಗೆ ವಿತರಿಸಲಾದ ಇ-ಬಸ್ ಯಶಸ್ವಿಯಾಗಿ ಟ್ರಯಲ್ ರನ್‌ಗಳನ್ನು ಪೂರ್ಣಗೊಳಿಸಿದೆ ಮತ್ತು ಮೊದಲ ಇ-ಬಸ್ ಸೇವೆ ಜನವರಿ 16 ರಂದು ಬೆಂಗಳೂರಿನಿಂದ ಮೈಸೂರಿಗೆ ಪ್ರಾರಂಭವಾಗಲಿದೆ. ಬಸ್ ಬೆಂಗಳೂರಿನಿಂದ ಮೈಸೂರಿಗೆ ತಡೆರಹಿತವಾಗಿ ಚಲಿಸುತ್ತದೆ ಮತ್ತು ಇದು ಪ್ರೀಮಿಯಂ ಸೇವೆಯಾಗಿದೆ. ಸದ್ಯ ಪಾಸ್‌ಗಳ ಅನುಮತಿ ಇರುವುದಿಲ್ಲ' ಎಂದಿದ್ದಾರೆ.

ಒಂದೇ ಬಾರಿ ಚಾರ್ಜ್ ಮಾಡಿದರೆ ಬಸ್ಸುಗಳು 300 ಕಿಮೀ ಓಡುವ ನಿರೀಕ್ಷೆಯಿದೆ. 'ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗಕ್ಕೆ ಸೇವೆಯನ್ನು ಪ್ರಾರಂಭಿಸಲು ಫೆಬ್ರುವರಿ ವೇಳೆಗೆ 50 ಇ-ಬಸ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಮತ್ತು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಚಾರ್ಜಿಂಗ್ ಕೇಂದ್ರಗಳು ಜಾರಿಯಲ್ಲಿವೆ ಮತ್ತು ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಬಸ್ ನಿಲ್ದಾಣಗಳಲ್ಲಿ ಪ್ರಗತಿಯಲ್ಲಿದೆ ' ಎಂದು ಅನ್ಬು ಕುಮಾರ್ ಹೇಳಿದರು.

ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಅಡಿಯಲ್ಲಿ ಖಾಸಗಿ ಆಪರೇಟರ್ ಒಲೆಕ್ಟ್ರಾ ಬಸ್‌ಗಳನ್ನು ನಿರ್ವಹಿಸಲಿದೆ ಮತ್ತು ಕೆಎಸ್‌ಆರ್‌ಟಿಸಿ ಕಾರ್ಯಾಚರಣೆಯ ವೆಚ್ಚವಾಗಿ ಕಿಮೀಗೆ 55 ರೂಪಾಯಿಗಳನ್ನು ಪಾವತಿಸಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮುಂದಿನ ವಾರಗಳಲ್ಲಿ 650 ಸಾಮಾನ್ಯ ಬಸ್‌ಗಳು ಮತ್ತು 20 ವೋಲ್ವೋ ಬಸ್‌ಗಳನ್ನು ಸೇರಿಸುತ್ತಿದೆ ಮತ್ತು ಇದು ಗ್ರಾಮೀಣ ಪ್ರದೇಶಗಳಲ್ಲಿ ಬಸ್‌ಗಳ ಕೊರತೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT