ನಾರಾಯಣಮೂರ್ತಿ 
ರಾಜ್ಯ

ರಾಜ್ಯದಲ್ಲಿ ಶಿಕ್ಷಕರ ತರಬೇತಿಗೆ ಒತ್ತು ನೀಡಬೇಕು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ

ರಾಜ್ಯದಲ್ಲಿ ಶಿಕ್ಷಕರ ತರಬೇತಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಇನ್ಫೋಸಿಸ್ ಅಧ್ಯಕ್ಷ ಮತ್ತು ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು.

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರ ತರಬೇತಿಗೆ ಒತ್ತು ನೀಡುವ ಅಗತ್ಯವಿದೆ ಎಂದು ಇನ್ಫೋಸಿಸ್ ಅಧ್ಯಕ್ಷ ಮತ್ತು ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು.

ಟೀಚ್ ಫಾರ್ ಇಂಡಿಯಾ ಆಯೋಜಿಸಿದ್ದ ಎರಡನೇ ವಾರ್ಷಿಕ ಇನ್ಸ್‌ಪೈರ್ಡ್ ಕಾನ್‌ಕ್ಲೇವ್‌ನಲ್ಲಿ ಶನಿವಾರ ಮಾತನಾಡಿದ ಅವರು, ಮಗುವಿಗೆ ಶಿಕ್ಷಣದ ಕೊಡುಗೆಯೇ ಪ್ರಮುಖ ಕೊಡುಗೆಯಾಗಿದ್ದು, ಶಿಕ್ಷಕರ ಸರಿಯಾದ ತರಬೇತಿಯ ಮೂಲಕ ಅದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಸರ್ಕಾರಿ ಶಿಕ್ಷಕರೂ ವಿನೂತನ ಬೋಧನಾ ವಿಧಾನಗಳನ್ನು ಬಳಸುವಂತಾಗಲು ಶಿಕ್ಷಕರ ತರಬೇತಿಗೆ ಒತ್ತು ನೀಡುವ ಅಗತ್ಯವಿದೆ. ಸರ್ಕಾರಿ ಶಾಲೆಗಳು ‘ಟೀಚ್ ಫಾರ್ ಇಂಡಿಯಾ’ ದಂತಹ ನಾಗರಿಕ ಸಮಾಜ ಸಂಸ್ಥೆಗಳ ಸಹಾಯ ಪಡೆಯಬೇಕು ಎಂದರು.

ಟೀಚ್ ಫಾರ್ ಇಂಡಿಯಾದ ನಗರ ನಿರ್ದೇಶಕಿ ತುಲಿಕಾ ವರ್ಮಾ ಮಾತನಾಡಿ, ತರಗತಿ ಕೊಠಡಿಗಳನ್ನು ಭಾರತದ ನಾಗರಿಕರು ನೋಡಲು ಇಷ್ಟಪಡುವ ಸಣ್ಣ ಆವೃತ್ತಿಗಳಾಗಿ ಅಥವಾ ಸೂಕ್ಷ್ಮರೂಪಗಳಾಗಿ ಪರಿವರ್ತಿಸಬೇಕು, ಅದು ದೇಶವನ್ನು ಬದಲಾಯಿಸಬಹುದು ಎಂದರು.

ಶಿಕ್ಷಣದ ಸಮಸ್ಯೆಯು ಸಂಕೀರ್ಣವಾಗಿದೆ ಮತ್ತು ಸರ್ಕಾರ, ಖಾಸಗಿ ಸಂಸ್ಥೆಗಳು ಮತ್ತು ನಾಗರಿಕ ಸಮಾಜವು ವಿದ್ಯಾರ್ಥಿಗಳ ಜೊತೆಯಲ್ಲಿ ಒಗ್ಗೂಡಿ ಸವಾಲುಗಳನ್ನು ಪರಿಹರಿಸುವ ಅಗತ್ಯವಿದೆ. ನಾವೆಲ್ಲರೂ ಸುರಕ್ಷಿತ, ಸಂತೋಷದಾಯಕ ಮತ್ತು ಅದೇ ಸಮಯದಲ್ಲಿ ಫಲಿತಾಂಶ-ಆಧಾರಿತ ಕಲಿಕೆಯ ವಾತಾವರಣವನ್ನು ನೋಡುವುದು, ಅನುಭವಿಸುವುದು ಮತ್ತು ನಂಬುವುದು ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT