ಗಾಂಧಿ ಪ್ರತಿಕೃತಿಯಲ್ಲಿ ಲೋಪ 
ರಾಜ್ಯ

ಗಾಂಧಿ ಪ್ರತಿಕೃತಿಯಲ್ಲಿ ಲೋಪ: ಹಾಸನದ ಗಾಂಧಿಭವನ ಉದ್ಘಾಟನೆ ಮುಂದೂಡಿಕೆ

ಹಾಸನದಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನದ ಉದ್ಘಾಟನೆ ಎಲ್ಲವೂ ಅಂದುಕೊಂಡಿದ್ದರೆ ಜ.26 ರಂದು ಆಗಬೇಕಿತ್ತು. ಆದರೆ ಗಾಂಧಿ ಪ್ರತಿಕೃತಿಯಲ್ಲಿನ ಲೋಪಗಳಿಂದಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.

ಹಾಸನ: ಹಾಸನದಲ್ಲಿ ನಿರ್ಮಿಸಲಾಗಿರುವ ಗಾಂಧಿ ಭವನದ ಉದ್ಘಾಟನೆ ಎಲ್ಲವೂ ಅಂದುಕೊಂಡಿದ್ದರೆ ಜ.26 ರಂದು ಆಗಬೇಕಿತ್ತು. ಆದರೆ ಗಾಂಧಿ ಪ್ರತಿಕೃತಿಯಲ್ಲಿನ ಲೋಪಗಳಿಂದಾಗಿ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.
 
ಗಣರಾಜ್ಯೋತ್ಸವದ ದಿನದಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರಿಂದ ಗಾಂಧಿ ಭವನ ಉದ್ಘಾಟನೆಗೆ ಸಕಲ ತಯಾರಿಗಳನ್ನೂ ಮಾಡಿಕೊಳ್ಳಲಾಗಿತ್ತು. ಆದರೆ ಸಾರ್ವಜನಿಕರು ಹಾಗೂ ಕಲಾವಿದರು ಗಾಂಧಿ ಭವನದಲ್ಲಿನ ಗಾಂಧಿ ಪ್ರತಿಕೃತಿಯ ಆಕಾರದಲ್ಲಿ ಲೋಪಗಳಿರುವುದನ್ನು ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅರ್ಚನ ಗಾಂಧಿ ಭವನವನ್ನು ನಿರ್ಮಿಸಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಪೊರೇಷನ್ (ಕೆಆರ್ ಐಡಿಸಿ) ಗೆ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡುವಂತೆ ಸೂಚಿಸಿದ್ದಾರೆ. ಮಹಾತ್ಮ ಗಾಂಧಿ ಅವರ ಲೋಪದೋಷಗಳಿರುವ ಪ್ರತಿಕೃತಿಗಳನ್ನು ಸರಿಪಡಿಸಿ ಮರು ನಿರ್ಮಿಸುವಂತೆ ಸೂಚಿಸಿದ್ದಾರೆ.   

ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿ 2.95 ಕೋಟಿ ರೂಪಾಯಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣವಾಗಿದ್ದು, 2018 ರಲ್ಲಿ ಎ ಮಂಜು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ಗಾಂಧಿ ಭವನ ಯೋಜನೆಯನ್ನು ಮಂಜೂರು ಮಾಡಿದ್ದರು. ಗಾಂಧಿ ಭವನ ನಿರ್ಮಾಣ ಹಲವು ಕಾರಣಗಳಿಂದಾಗಿ ಹಿಂದುಳಿದಿತ್ತು. ಬೆಂಗಳೂರಿನ ಶಿಲ್ಪಿ ತ್ರಿಭುವನ್ ಗಾಂಧಿ ಪ್ರತಿಕೃತಿಯನ್ನು ರಚಿಸುವುದಕ್ಕಾಗಿ ಅನುಭವಿ ಶಿಲ್ಪಿಗಳನ್ನು ನಿಯೋಜಿಸಲು ವಿಫಲರಾಗಿದ್ದರು.
 
ಕೆಆರ್ ಐಡಿಸಿ ಅಥವಾ ನಿರ್ಮಿತಿ ಕೇಂದ್ರಕ್ಕೆ ಸಂಬಂಧಪಟ್ಟ ಇಂಜಿನಿಯರ್ ಗಳು ಕಾಮಗಾರಿಗಳನ್ನು ಮೇಲ್ವಿಚಾರಣೆ ಮಾಡಲು ವಿಫಲವಾಗಿದ್ದರು. ಜಿಲ್ಲಾ ಅಧಿಕಾರಿಗಳ ನಿರ್ಲಕ್ಷ್ಯತನವನ್ನು  ಜನರು ಖಂಡಿಸಿದ್ದಾರೆ. ನಿರ್ಮಿತಿ ಕೇಂದ್ರದ ಸಹಾಯಕ ಇಂಜಿನಿಯರ್ ಸಿದ್ದೇಗೌಡ ಮಾತನಾಡಿದ್ದು, 23 ಲಕ್ಷ ರೂಪಾಯಿಗಳ ಪೈಕಿ ಶೇ.30 ರಷ್ಟು ಮಾತ್ರ ಶಿಲ್ಪಿಗಳಿಗೆ ಪಾವತಿ ಮಾಡಲಾಗಿದೆ. ಲೋಪಗಳನ್ನು ಸರಿಪಡಿಸಿದ ಬಳಿಕವಷ್ಟೇ ಉಳಿದ ಮೊತ್ತವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT