ಸಾಂದರ್ಭಿಕ ಚಿತ್ರ 
ರಾಜ್ಯ

ತಮಿಳುನಾಡಿನ ಹೋಟೆಲ್ ಉದ್ಯಮಿ ಹತ್ಯೆ ಪ್ರಕರಣ; ಪತ್ನಿ, ಆಕೆಯ ಪ್ರಿಯಕರ ಸೇರಿದಂತೆ ಐವರ ಬಂಧನ

ಹೊಟೇಲ್ ಉದ್ಯಮಿ ಅರುಣ್ ಕುಮಾರ್ (34) ಅವರ ಹತ್ಯೆಯನ್ನು ಅವರ ಪತ್ನಿ ಮತ್ತು ಫೈನಾನ್ಷಿಯರ್ ಆಗಿರುವ ಆಕೆಯ ಪ್ರಿಯಕರ  ಸೇರಿದಂತೆ ಐವರನ್ನು ಬಂಧಿಸುವ ಮೂಲಕ ಪರಿಹರಿಸಲಾಗಿದೆ. 

ಬೆಂಗಳೂರು: ಹೊಟೇಲ್ ಉದ್ಯಮಿ ಅರುಣ್ ಕುಮಾರ್ (34) ಅವರ ಹತ್ಯೆಯನ್ನು ಅವರ ಪತ್ನಿ ಮತ್ತು ಫೈನಾನ್ಷಿಯರ್ ಆಗಿರುವ ಆಕೆಯ ಪ್ರಿಯಕರ  ಸೇರಿದಂತೆ ಐವರನ್ನು ಬಂಧಿಸುವ ಮೂಲಕ ಪರಿಹರಿಸಲಾಗಿದೆ. 

ಕಳೆದ ವಾರ ನೈಸ್ ರಸ್ತೆ ಬಳಿಯ ರಸ್ತೆ ಮೇಲ್ಸೇತುವೆಯ ಕೆಳಗೆ ಕುಮಾರ್ ಶವ ಪತ್ತೆಯಾಗಿತ್ತು. ಆರೋಪಿಗಳು ಮದ್ಯದ ಬಾಟಲಿಗಳಿಂದ ಹಲ್ಲೆ ನಡೆಸಿ, ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದರು. ಪೊಲೀಸ್ ಶ್ವಾನಗಳನ್ನು ದಾರಿತಪ್ಪಿಸಲು ಶವದ ಬಳಿಯೂ ಮೆಣಸಿನ ಪುಡಿಯನ್ನು ಚೆಲ್ಲಿದ್ದರು. ಫೈನಾನ್ಷಿಯರ್ ಮತ್ತು ಇತರ ಮೂವರು ವ್ಯಕ್ತಿಗಳು ಈ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಜೂನ್ 29 ರಂದು ಬೆಳಿಗ್ಗೆ 7.20ರ ಸುಮಾರಿಗೆ ಬನಶಂಕರಿ 6ನೇ ಹಂತದ ಸೋಂಪುರ-ಗಟ್ಟಿಗೆರೆಪಾಳ್ಯ ರಸ್ತೆಯ ನೈಸ್ ರಸ್ತೆಯ ಬಳಿ ಕುಮಾರ್ ಶವ ಪತ್ತೆಯಾಗಿತ್ತು. ದಾರಿಹೋಕರೊಬ್ಬರು ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ರಾಮನಗರ ಜಿಲ್ಲೆಯ ನನ್ನೂರು ಗ್ರಾಮದವರಾದ ಕುಮಾರ್, ಆರ್.ಆರ್. ನಗರದ ಉತ್ತರಹಳ್ಳಿ ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿದ್ದರು.

ಪ್ರಮುಖ ಆರೋಪಿ ಗಣೇಶ್ ಕುಮಾರ್ ಅವರ ಹೋಟೆಲ್‌ಗೆ ನೀರು ಸರಬರಾಜು ಮಾಡುತ್ತಿದ್ದ. ಸಂತ್ರಸ್ತ ಗಣೇಶ್ ಹಾಗೂ ಆತನ ಸ್ನೇಹಿತರ ಬಳಿ ಸಾಲ ಮಾಡಿಕೊಂಡಿದ್ದರು. ನಷ್ಟ ಅನುಭವಿಸಿದ ನಂತರ ಕುಮಾರ್ ಹೋಟೆಲ್ ಮುಚ್ಚಿದ್ದರು. ಇದೇ ವೇಳೆ ಗಣೇಶ್, ಕುಮಾರ್ ಅವರ ಪತ್ನಿ ರಂಜಿತಾರೊಂದಿಗೆ ಸ್ನೇಹ ಬೆಳೆಸಿದ್ದ. ಕುಮಾರ್ ಮತ್ತು ರಂಜಿತಾ ಮದುವೆಯಾಗಿ ಆರು ವರ್ಷವಾಗಿತ್ತು.

ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿದ ಕುಮಾರ್‌ ಆಕೆಗೆ ಹಾಗೂ ಗಣೇಶ್‌ಗೆ ಎಚ್ಚರಿಕೆ ನೀಡಿದ್ದರು. ಸಂಬಂಧ ಮುಂದುವರಿಸಿರುವುದನ್ನು ಕಂಡ ಕುಮಾರ್ ಪತ್ನಿ ಮೇಲೆ ಹಲ್ಲೆ ನಡೆಸಿದ್ದರು. ನಂತರ ರಂಜಿತಾ ಮತ್ತು ಗಣೇಶ್ ಸೇರಿ ಕುಮಾರ್ ಹತ್ಯೆಗೆ ಸಂಚು ರೂಪಿಸಿದ್ದರು.

ಹತ್ಯೆಯ ಹಿಂದಿನ ದಿನ ರಂಜಿತಾ ಅವರು ತಮ್ಮ ತವರೂರಾದ ಮಂಡ್ಯಕ್ಕೆ ತೆರಳಿದ್ದರು. ಕೊಲೆಯಾದ ದಿನ ರಾತ್ರಿ ಆರೋಪಿ ಗಣೇಶ್, ಸಂತ್ರಸ್ತ ಕುಮಾರ್‌ನನ್ನು ಪಾರ್ಟಿಗೆ ಆಹ್ವಾನಿಸಿದ್ದ ಮತ್ತು ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ. ಕುಮಾರ್ ಆ ಸ್ಥಳಕ್ಕೆ ಹೋದಾಗ ಆರೋಪಿಗಳು ಆತನ ಮುಖದ ಮೇಲೆ ಮೆಣಸಿನ ಪುಡಿ ಎರಚಿ ಕೊಲೆ ಮಾಡಿದ್ದಾರೆ. ಮದ್ಯದ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾರೆ.

ರಂಜಿತಾ, ಗಣೇಶ್, ಶಿವಾನಂದ, ದೀಪು ಮತ್ತು ಶರತ್ ಎಂಬುವರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ತಲಗಟ್ಟಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel