ಕರ್ನಾಟಕ-ಗೋವಾ ಗಡಿಯ ಸಮೀಪ ಕ್ಯಾಸಲ್ ರಾಕ್ ಮತ್ತು ಕಾರಂಜೋಲ್ ರೈಲು ನಿಲ್ದಾಣಗಳ ನಡುವೆ ಭೂಕುಸಿತದಿಂದಾಗಿ ರೈಲು ಸೇವೆಗಳು ಸ್ಥಗಿತಗೊಂಡಿವೆ. 
ರಾಜ್ಯ

ಸತತ ಮಳೆ: ರಾಜ್ಯದ ಅಲ್ಲಲ್ಲಿ ಅವಘಡ, ಭೂ ಕುಸಿತ, ರೈಲು ಸಂಚಾರ ರದ್ದು

ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕರ್ನಾಟಕದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ದೂದ್ ಸಾಗರ ಬಳಿಯ ಕ್ಯಾಸಲ್ ಬಂಡೆಗಲ್ಲಿನಲ್ಲಿ ಮೊನ್ನೆ ಮಂಗಳವಾರ ಎರಡು ಭೂಕುಸಿತಗಳು ಸಂಭವಿಸಿವೆ. ಒಂದು ಜಲಪಾತದ ಬಳಿ ಸಂಭವಿಸಿದರೆ, ಇನ್ನೊಂದು ಸುರಂಗದ ಬಳಿ ಉಂಟಾಗಿದೆ. 

ಕಾರವಾರ: ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕರ್ನಾಟಕದಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ದೂದ್ ಸಾಗರ ಬಳಿಯ ಕ್ಯಾಸಲ್ ಬಂಡೆಗಲ್ಲಿನಲ್ಲಿ ಮೊನ್ನೆ ಮಂಗಳವಾರ ಎರಡು ಭೂಕುಸಿತಗಳು ಸಂಭವಿಸಿವೆ. ಒಂದು ಜಲಪಾತದ ಬಳಿ ಸಂಭವಿಸಿದರೆ, ಇನ್ನೊಂದು ಸುರಂಗದ ಬಳಿ ಉಂಟಾಗಿದೆ. 

ಕಳೆದ ವಾರ ಸಣ್ಣ ಪ್ರಮಾಣದ ಭೂಕುಸಿತ ವರದಿಯಾಗಿದ್ದು, ತಕ್ಷಣವೇ ತೆರವುಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಬೇರೆ ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ. ಕ್ಯಾಸಲ್ ರಾಕ್ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ 100 ಮಿ.ಮೀ ಗಿಂತಲೂ ಹೆಚ್ಚು ಮಳೆ ದಾಖಲಾಗುತ್ತಿದೆ.

ಚಿಕ್ಕಮಗಳೂರಿನಲ್ಲಿ ಮಹಿಳೆಯ ಶವ: ನೈರುತ್ಯ ರೈಲ್ವೆ SWR) ಪ್ರಕಾರ, ಹುಬ್ಬಳ್ಳಿ ವಿಭಾಗದ ಬ್ರಗಾಂಜಾ ಘಾಟ್ ವಿಭಾಗದಲ್ಲಿ ಕ್ಯಾಸಲ್ ರಾಕ್ ಮತ್ತು ಕಾರಂಜೋಲ್ ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದೆ. ಪರಿಣಾಮವಾಗಿ, ಹಲವಾರು ರೈಲುಗಳ ಸೇವೆಗಳನ್ನು ಭಾಗಶಃ ರದ್ದುಗೊಳಿಸಲಾಯಿತು. 

ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು: ಕಸ್ಬಾ ಬಜಾರ್ ಗ್ರಾಮದ ನೇತ್ರಾವತಿ ನದಿಯಲ್ಲಿ ಮಂಗಳವಾರ 32 ವರ್ಷದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ಮುಜಾಂಬಿಲ್ ಉಳ್ಳಾಲ ತಾಲೂಕಿನ ಹಳೆಕೋಟೆ ನಿವಾಸಿ. ಮುಜಾಂಬಿಲ್ ಕಾಲು ಜಾರಿ ನದಿಗೆ ಬಿದ್ದಿದ್ದಾನೆ.

ಅವರು ಪತ್ನಿ ಹಾಗೂ ಒಂದು ವರ್ಷದ ಮಗಳನ್ನು ಅಗಲಿದ್ದಾರೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಇಂದು ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.

ರಾಯಚೂರಿನಲ್ಲಿ ಕರ್ನಾಟಕ ಮತ್ತು ತೆಲಂಗಾಣ ಗಡಿಯಲ್ಲಿರುವ ಕುರುವಪುರಂನಲ್ಲಿರುವ ಕೃಷ್ಣಾ ನದಿ ಮತ್ತು ಅದರ ದಡದಲ್ಲಿ ಸುಮಾರು 30 ಮೊಸಳೆಗಳು ಕಾಣಿಸಿಕೊಂಡಿವೆ. ಕುರುವಪುರಂ ಶ್ರೀಪಾದ ವಲ್ಲಭ ದೇವರ ಪವಿತ್ರ ಕ್ಷೇತ್ರವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT