ದಿನೇಶ್ ಗುಂಡೂರಾವ್ 
ರಾಜ್ಯ

ಪ್ರತೀಕ್ ಗೌಡ ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಬಿಟ್ಟಾಗ ಬಿಜೆಪಿಯವರು ಎಲ್ಲಿದ್ದರು: ದಿನೇಶ್ ಗುಂಡೂರಾವ್

ಉಡುಪಿಯ ಕಾಲೇಜೊಂದರ ವೀಡಿಯೊ ಚಿತ್ರೀಕರಣ ಪ್ರಕರಣವನ್ನು ಬಿಜೆಪಿ ಉದ್ದೇಶ ಪೂರಕವಾಗಿ ರಾಜಕೀಯಗೊಳಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಆರೋಪಿಸಿದ್ದಾರೆ.

ಬೆಂಗಳೂರು: ಉಡುಪಿಯ ಕಾಲೇಜೊಂದರ ವೀಡಿಯೊ ಚಿತ್ರೀಕರಣ ಪ್ರಕರಣವನ್ನು ಬಿಜೆಪಿ ಉದ್ದೇಶ ಪೂರಕವಾಗಿ ರಾಜಕೀಯಗೊಳಿಸುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಆರೋಪಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಚಿವ ದಿನೇಶ್‌ ಗುಂಡೂರಾವ್, ಈ ಪ್ರಕರಣದಲ್ಲಿ ಹರಿದಾಡುತ್ತಿರುವ ವೀಡಿಯೊ ಕೂಡ ನಕಲಿ,ಪೊಲೀಸರು ವಿದ್ಯಾರ್ಥಿನಿಯರ ಮೊಬೈಲ್, ರಿಟ್ರೀವ್ ಮಾಡಿದ್ದಾರೆ. ಅಲ್ಲಿ ಯಾವುದೇ ವೀಡಿಯೋಗಳಿಲ್ಲ ಮತ್ಯಾಕೆ ಈ ರಾದ್ಧಾಂತ ಎಂದವರು ಪ್ರಶ್ನಿಸಿದ್ದಾರೆ.

ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಇಲಿ ಹೋಗಿದ್ದನ್ನೇ ಹುಲಿ ಹೋದಂತೆ ಎಂದು ಬಿಂಬಿಸುತ್ತಿದ್ದಾರೆ. ಉಡುಪಿ ಪ್ರಕರಣದಲ್ಲಿ ಇಷ್ಟು ಬಟ್ಟೆ ಹರಿದುಕೊಳ್ಳುತ್ತಿರುವ ಬಿಜೆಪಿ ನಾಯಕರು ಪ್ರತೀಕ್ ಗೌಡ ಎಂಬ ತೀರ್ಥಹಳ್ಳಿಯ ಎಬಿವಿಪಿ ಘಟಕದ ಅಧ್ಯಕ್ಷ ಹಿಂದೂ ಯುವತಿಯರ ಅಶ್ಲೀಲ ವೀಡಿಯೊ ಬಿಟ್ಟಾಗ ಎಲ್ಲಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಪ್ರಾಜ್ಞ್ಯರಾದ ಬೊಮ್ಮಾಯಿರವರು ಬಿಜೆಪಿಯ ಟೂಲ್‌ಕಿಟ್‌ನ ಭಾಗವಾಗಬಾರದು. ಉಡುಪಿ ಪ್ರಕರಣ ವಯೋಸಹಜ ಚೇಸ್ಟೆ ಮತ್ತು ಹುಡುಗಾಟ ಎಂಬುದು ಬೊಮ್ಮಾಯಿರವರಿಗೂ ತಿಳಿದಿದೆ. ಆದರೂ ಪಾಪ ಬಿಜೆಪಿಯಲ್ಲಿನ ಅಸ್ಥಿತ್ವಕ್ಕಾಗಿ ಬೊಮ್ಮಾಯಿರವರು ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಕುತೂಹವೆಂದರೆ ಮುಖ್ಯಮಂತ್ರಿಯಾದವರು ವಿಪಕ್ಷ ಸ್ಥಾನ ಪಡೆಯಲು ಇಷ್ಟೆಲ್ಲ ಮಾಡಬೇಕೇ ಎಂದು ದಿನೇಶ್‌ಗುಂಡೂರಾವ್ ಗೇಲಿ ಮಾಡಿದ್ದಾರೆ.

ಈ ಪ್ರಕರಣದಲ್ಲಿ ನಾವು ಪೊಲೀಸರಿಗೆ ಮುಕ್ತ ಹಸ್ತ ಕೊಟ್ಟಿದ್ದೇವೆ. ಹಿಂದೂ ಯುವತಿಕರ ಅಶ್ಲೀಲ ವಿಡಿಯೋ ಹರಿಬಿಟ್ಟ ಪ್ರತೀಕ್‌ಗೌಡ ಎಂಬಾತನನ್ನು ಪೊಲೀಸರು ಒದ್ದು ಹೊರಹಾಕಿದ್ದಾರೆ. ಬಹುಶಃ ಧರ್ಮ ರಕ್ಷಣೆಯ ಗ್ರಾಫ್ ನಿಮಗಿಂತ ನಮ್ಮದೇ ಜಾಸ್ತಿ ಇದೆ ಬೊಮ್ಮಾಯಿರವರೇ ಎಂದು ದಿನೇಶ್‌ಗುಂಡೂರಾವ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭೋಜಶಾಲಾ ಮಂದಿರಕ್ಕೆ ಸಂಬಂಧಿಸಿದ ವಿವಾದಕ್ಕೆ ಸುಪ್ರೀಂ ಎಂಟ್ರಿ; ಮುಸ್ಲಿಮರಿಗೂ ನಮಾಜ್ ಮಾಡಲು ಅವಕಾಶ

50 ಲಕ್ಷ ವರದಕ್ಷಿಣೆಗಾಗಿ ಕಿರುಕುಳ: ಪತ್ನಿಯನ್ನು ಕೊಲ್ಲಲು ಮಚ್ಚು ಹಿಡಿದು ಅಟ್ಟಾಡಿಸಿದ PSI ಭೈರಪ್ಪ ಕೊನೆಗೂ ಬಂಧನ!

ಒಮನ್ ಕರಾವಳಿಯಲ್ಲಿ ಹಡಗಿನ ಮೇಲೆ ದಾಳಿ; ಮಂಗಳೂರು ನಾವಿಕನ ರಕ್ಷಣೆ, ದಾಳಿಯ ಭೀಕರತೆ ಬಿಚ್ಚಿಟ್ಟ ಬಂಟ್ವಾಳದ ಯುವಕ!

ಅಪಾರ್ಟ್ ಮೆಂಟ್ ನಿರ್ವಹಣೆ -ಮಾಲೀಕತ್ವ ಕುರಿತು ಹೊಸ ಕಾಯ್ದೆ ಜಾರಿಗೆ ಸರ್ಕಾರ ಒಲವು: ಜು.15ಕ್ಕೆ CM ಡಿ ಕೆ ಶಿವಕುಮಾರ್ ಸಮಾಲೋಚನಾ ಸಭೆ-Video

'ಸಿದ್ದರಾಮಯ್ಯ ಕೆಳಗಿಳಿಸಿ CM ಆಗಲು ಹೈಕಮಾಂಡ್‌ಗೆ ಏನು ಮಾತು ಕೊಟ್ಟಿದ್ದೀರೋ ಗೊತ್ತಿಲ್ಲ: ಅದಕ್ಕಾಗಿ ರೈತರ ಬದುಕು ಬಲಿ ಕೊಡಬೇಡಿ'; ಡಿಕೆಶಿ ವಿರುದ್ಧ ದೇವೇಗೌಡ ವಾಗ್ದಾಳಿ