ವಂಶಿಕಾ, ನಿಶಾ ನರಸಪ್ಪ ಸಾಂದರ್ಭಿಕ ಚಿತ್ರ 
ರಾಜ್ಯ

ವಂಶಿಕಾ ಹೆಸರಲ್ಲಿ ವಂಚನೆ ಆರೋಪ ಸುಳ್ಳು, ನನ್ನ ವಿರುದ್ಧ ವ್ಯವಸ್ಥಿತ ಸಂಚು- ನಿಶಾ ನರಸಪ್ಪ

ಮಾಸ್ಟರ್ ಆನಂದ್ ಅವರ ಪುತ್ರಿ, ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ ಆರೋಪ ಸುಳ್ಳು, ಯಶಸ್ವಿನಿ ಸೇರಿದಂತೆ ಎಲ್ಲರೂ ಸೇರಿ ನನ್ನ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ಜೈಲಿಗೆ ಕಳುಹಿಸಿದರು ಎಂದು ಈ ಪ್ರಕರಣದಲ್ಲಿ ಆರೋಪಿ ಆಗಿರುವ ನಿಶಾ ನರಸಪ್ಪ ಹೇಳಿದ್ದಾರೆ.

ಬೆಂಗಳೂರು: ಮಾಸ್ಟರ್ ಆನಂದ್ ಅವರ ಪುತ್ರಿ, ಬಾಲನಟಿ ವಂಶಿಕಾ ಹೆಸರಿನಲ್ಲಿ ವಂಚನೆ ಆರೋಪ ಸುಳ್ಳು, ಯಶಸ್ವಿನಿ ಸೇರಿದಂತೆ ಎಲ್ಲರೂ ಸೇರಿ ನನ್ನ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ಜೈಲಿಗೆ ಕಳುಹಿಸಿದರು ಎಂದು ಈ ಪ್ರಕರಣದಲ್ಲಿ ಆರೋಪಿ ಆಗಿರುವ ನಿಶಾ ನರಸಪ್ಪ ಹೇಳಿದ್ದಾರೆ.

ಜೈಲಿನಿಂದ ಹೊರಬಂದ ಬಳಿಕ ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಏಳು ವರ್ಷಗಳಿಂದ ಎನ್.ಎನ್‌.ಪ್ರೊಡಕ್ಷನ್ ಅಂತ ಕಂಪನಿ ನಡೆಸುತ್ತಿದ್ದೇನೆ. ಅದರ ಮೂಲಕ ಸಾಕಷ್ಟು ಇವೆಂಟ್ ಮಾಡಿದ್ದು, ನನ್ನ ಕಂಪನಿಗೆ ಒಂದೂ ಕಪ್ಪುಚುಕ್ಕೆ ಇರಲಿಲ್ಲ. ಆದರೆ ಈಗ ಯಶಸ್ವಿನಿಯಿಂದ ಕಂಪನಿಗೆ ಕೆಟ್ಟ ಹೆಸರು ಬಂದಿದೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಆರೋಪಿಸಿದರು. 

ಒಂದು ವರ್ಷದಿಂದಲೂ ಯಶಸ್ವಿನಿ ಪರಿಚಯವಿತ್ತು. ಅವರು ಪ್ರಮೋಷನ್​​ಗಾಗಿ ಬರುತ್ತಿದ್ದರು. ಅವರು ಪುಗ್ಸಟ್ಟೆಯಾಗಿ ಯಾವುದೇ ಇವೆಂಟ್​ಗೆ ಬಂದಿರಲಿಲ್ಲ. ಪ್ರತಿಯೊಂದಕ್ಕೂ ಹಣ ಪಡೆದೇ ಬಂದಿದ್ದಾರೆ. ಎಲ್ಲಾ ವಾಹಿನಿಗಳಲ್ಲೂ ಸಂಭಾವನೆ ಪಡೆದೇ ಅವರು ಭಾಗವಹಿಸೋದು. ಅವರಿಗೆ  ರೂ. 20,000 ಹಣ ಮಾತ್ರ ಕೊಡಬೇಕಾಗಿತ್ತು. ಆದರೆ ಪೊಲೀಸ್ ಠಾಣೆಯಲ್ಲಿ ನಾನು ಅವರಿಗೆ ಪರಿಚಯ ಇಲ್ಲ ಅಂತಾ ಹೇಳಿದರು. ನನ್ನ ಪ್ರೊಡಕ್ಷನ್ ಕಂಪನಿಗೆ ಏಳು ವರ್ಷ, ವಂಶಿಕಾಗೆ ಐದು ವರ್ಷ. ನಾನು ಇವರ ಮಗಳಿಂದಲೇನಾ ಬದುಕಿರೋದು? ಅಂತಾ ಪ್ರಶ್ನಿಸಿದ ನಿಶಾ, ನನ್ನನ್ನು ಪರ್ಸನಲ್ ಆಗಿ ಟಾರ್ಗೆಟ್ ಮಾಡಿದವರಿಗೆ ಯಶಸ್ವಿನಿ ಸಹಾಯ ಮಾಡಿದ್ದಾರೆ ಎಂದರು.

ಹರ್ಷಿತಾ ಎಂಬ ಹುಡುಗಿ ಸುಮಾರು ಎರಡು ವರ್ಷ ನನ್ನ ಕಂಪನಿಯಲ್ಲಿ ಕೆಲಸ ಮಾಡಿದರು. ಅವರಿಗೆ ನನ್ನ ಎಲ್ಲ ಬ್ಯಾಂಕ್ ಡಿಟೇಲ್ಸ್​ ಗೊತ್ತಿತ್ತು. ಬಳಿಕ ಅವರು ನನ್ನ ಕಂಪನಿಯಲ್ಲಿ ಶೇರ್ ಕೇಳಿದ್ರು, ಅದಕ್ಕೆ ನಾನು ಒಪ್ಪಲಿಲ್ಲ. ಆಗ ಅವರ ಐಫೋನ್​​ನಲ್ಲಿ ನನ್ನ ಇನ್​ಸ್ಟಾಗ್ರಾಂ ಓಪನ್​ ಮಾಡಿದ್ರು, ಅದನ್ನು ಪ್ರಶ್ನೆ ಮಾಡಿದ ಬಳಿಕ ಕೆಲಸ ಬಿಟ್ಟರು. ಅಲ್ಲಿಂದ  ತೊಂದರೆ  ಶುರುವಾಯ್ತು. ಇವರೆಲ್ಲರೂ ಸೇರಿ ಆರು ತಿಂಗಳೂ ಕಂಪ್ಲೀಟ್ ಪ್ಲ್ಯಾನ್​ ಮಾಡಿ‌ ನನ್ನ ಮೇಲೆ‌ ವ್ಯವಸ್ಥಿತವಾಗಿ ಸಂಚು ಮಾಡಿದ್ದಾರೆ ಎಂದು ನಿಶಾ ಆರೋಪಿಸಿದರು. 

ಇದೇ ವೇಳೆ ಮಾತನಾಡಿದ ನಿಶಾ ನರಸಪ್ಪ ಪರ ವಕೀಲ ಗೋವರ್ಧನ್, ಕಂಪನಿ ಮುಚ್ಚಿಸಲು ಈ ರೀತಿಯ ಆರೋಪ ಮಾಡಲಾಗಿದ್ದು, ಯಶಸ್ವಿನಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT