ರಾಜ್ಯ

ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದರೆ ರೈತರಿಗೆ ಅನುಕೂಲವಾಗಲಿದೆ: ವಿನಯ್ ಕುಲಕರ್ಣಿ

Ramyashree GN

ಬೆಳಗಾವಿ: ರಾಜ್ಯದಲ್ಲಿ ವಿವಾದಾತ್ಮಕ ಗೋಹತ್ಯೆ ನಿಷೇಧ ಕಾಯ್ದೆಯನ್ನು ಉಲ್ಲೇಖಿಸಿದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರು, ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ತಿದ್ದುಪಡಿ ಮಾಡುವಂತೆ ಭಾನುವಾರ ಕೋರಿದ್ದಾರೆ. 

ಕರ್ನಾಟಕದ ರೈತರಿಗೆ ಸಹಾಯ ಮಾಡಲು ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಮಾಜಿ ಸಚಿವರು ಒತ್ತಾಯಿಸಿದ್ದಾರೆ.

ಬೆಳಗಾವಿಯ ಸರ್ಕ್ಯೂಟ್ ಹೌಸ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಹೆಚ್ಚು ಮಾತನಾಡುವ ಬಿಜೆಪಿ ನಾಯಕರು ಮನೆಯಲ್ಲಿ ಗೋವನ್ನು ಸಾಕುವುದಿಲ್ಲ. ಆದರೆ, ರಾಜ್ಯದಲ್ಲಿ ಅತಿ ಹೆಚ್ಚು ಜಾನುವಾರುಗಳನ್ನು ಪೋಷಿಸಿದ್ದೇನೆ. ಜಾನುವಾರು ಸಾಕಣೆದಾರರ ಅಭಿಪ್ರಾಯವನ್ನು ಪರಿಗಣಿಸಿ ಮಸೂದೆಗೆ ತಿದ್ದುಪಡಿ ತರಬೇಕು ಎಂದರು.

ಸದ್ಯ, ಡೈರಿ ವ್ಯವಹಾರದಲ್ಲಿ ಯಂತ್ರೋಪಕರಣಗಳು ಸಾಮಾನ್ಯವಾಗಿದೆ. ಎತ್ತುಗಳ ಸ್ಥಾನಕ್ಕೆ ಯಂತ್ರಗಳು ಬಂದಿವೆ ಮತ್ತು ಹಾಲು ನೀಡಲು ಸಾಧ್ಯವಾಗದ ತಮ್ಮ ಹಳೆಯ ಜಾನುವಾರುಗಳನ್ನು ಏನು ಮಾಡಬೇಕೆಂದು ರೈತರು ತಿಳಿದಿಲ್ಲ. ಸ್ಥಳೀಯ ತಳಿಗಳ ಜಾನುವಾರುಗಳನ್ನು ಸಂರಕ್ಷಿಸುವ ಅವಶ್ಯಕತೆಯಿದೆ. ಆದರೆ, ವಯಸ್ಸಾದ ಪ್ರಾಣಿಗಳನ್ನು ನಿರ್ವಹಿಸಲು ಪರಿಹಾರಗಳು ಸಹ ಹೆಚ್ಚು ಅಗತ್ಯವಿದೆ. ಆದ್ದರಿಂದ ಈ ಮಸೂದೆಯು ರೈತರನ್ನು ಒಳಗೊಂಡಿರುವುದರಿಂದ ಈ ವಿಷಯವನ್ನು ರಾಜಕೀಯಗೊಳಿಸುವ ಬದಲು ತಿದ್ದುಪಡಿ ತರಬೇಕು ಎಂದು ಅವರು ಹೇಳಿದರು.

SCROLL FOR NEXT