ಸಾಂದರ್ಭಿಕ ಚಿತ್ರ 
ರಾಜ್ಯ

ಗ್ರಾಹಕರೇ... ಜೂನ್, ಜುಲೈ ವಿದ್ಯುತ್ ಬಿಲ್ ನಲ್ಲಿ ಕಾದಿದೆ ಹಲವು ಅಚ್ಚರಿ, ಗೊಂದಲ

ಜೂನ್ ಮತ್ತು ಜುಲೈ ತಿಂಗಳ ವಿದ್ಯುತ್ ದರವನ್ನು ಪಾವತಿಸಲು ಗ್ರಾಹಕರೇ ಸಾಕಷ್ಟು ಉಳಿತಾಯ ಮಾಡಿ. ಆಗಸ್ಟ್ ತಿಂಗಳಲ್ಲಿ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳುವ ಮೊದಲು ಹಲವು ಅಚ್ಚರಿಗಳು ನಿಮಗೆ ಎದುರಾಗಬಹುದು.

ಬೆಂಗಳೂರು: ಜೂನ್ ಮತ್ತು ಜುಲೈ ತಿಂಗಳ ವಿದ್ಯುತ್ ದರವನ್ನು ಪಾವತಿಸಲು ಗ್ರಾಹಕರೇ ಸಾಕಷ್ಟು ಉಳಿತಾಯ ಮಾಡಿ. ಆಗಸ್ಟ್ ತಿಂಗಳಲ್ಲಿ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಲಾಭ ಪಡೆದುಕೊಳ್ಳುವ ಮೊದಲು ಹಲವು ಅಚ್ಚರಿಗಳು ನಿಮಗೆ ಎದುರಾಗಬಹುದು.

ಜೂನ್‌ ತಿಂಗಳು ಆರಂಭವಾಗಿ ಒಂದು ವಾರವಾದರೂ ಗ್ರಾಹಕರಿಗೆ ಇನ್ನೂ ವಿದ್ಯುತ್ ಬಿಲ್‌ಗಳು ಬಂದಿಲ್ಲ, ಬಿಲ್ ಶೂನ್ಯವೇ ಅಥವಾ ಏನಾದರೂ ದೋಷವಿದೆಯೇ ಎಂದು ತಿಳಿಯಲು ಅನೇಕರು ವಿಚಾರಣೆ ನಡೆಸುತ್ತಿದ್ದಾರೆ. ಕೆಇಆರ್‌ಸಿ ಆದೇಶಗಳಲ್ಲಿನ ಪರಿಷ್ಕರಣೆ ಆಧರಿಸಿ ಇಲಾಖೆಯು ಮೊತ್ತವನ್ನು ಲೆಕ್ಕ ಹಾಕುತ್ತಿರುವುದರಿಂದ ಬಿಲ್ ಹೊರಡಿಸಲು ವಿಳಂಬವಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ.

ವಿದ್ಯುತ್ ದರದ ಆದೇಶದಂತೆ ಪರಿಷ್ಕರಣೆ ಮಾಡಿದ್ದರಿಂದ ಲೆಕ್ಕಾಚಾರ ವಿಳಂಬವಾಗಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ವಿವರಿಸಿದರು. ಗೃಹ ಜ್ಯೋತಿ ಯೋಜನೆ ಜಾರಿಯಾಗುವ ಮೊದಲು ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ಮತ್ತು ಆಗಸ್ಟ್ ಮೊದಲ ವಾರದವರೆಗೆ ವಿದ್ಯುತ್ ಬಿಲ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ, ಏಕೆಂದರೆ ಲೆಕ್ಕಾಚಾರಗಳು ನಡೆಯುತ್ತಿವೆ.

ಗ್ರಾಹಕರು ಉಚಿತ ವಿದ್ಯುತ್ ಯೋಜನೆಯನ್ನು ಪಡೆದುಕೊಳ್ಳಲು ಪ್ರಾರಂಭಿಸಿದಾಗ ಎಸ್ಕಾಮ್‌ಗಳು ಯಾವುದೇ ನಷ್ಟವನ್ನು ಭರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ದೋಷಗಳಿಗಾಗಿ ಬ್ಯಾಕ್-ಎಂಡ್ ಚೆಕ್ ನ್ನು ಸಹ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ತಡವಾಗಿ ಬಿಲ್‌ಗಳನ್ನು ಜನರೇಟ್ ಮಾಡಿದರೆ ಗ್ರಾಹಕರು ವಿಳಂಬ ಶುಲ್ಕವನ್ನು ಪಾವತಿಸಬೇಕೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಕೆಇಆರ್‌ಸಿ ಆದೇಶದಂತೆ ಇಂಧನ ಹೊಂದಾಣಿಕೆ ಶುಲ್ಕವನ್ನು ವಿಧಿಸುವ ಆಗಸ್ಟ್‌ನಲ್ಲಿ ವಿದ್ಯುತ್ ಬಿಲ್‌ಗಳಲ್ಲಿ ಎರಡನೇ ಸುತ್ತಿನ ಪರಿಷ್ಕರಣೆ ಮಾಡಲಾಗುತ್ತದೆ. ಈ ಪರಿಷ್ಕರಣೆಯು 200 ಯೂನಿಟ್‌ಗಳಿಗಿಂತ ಕಡಿಮೆ ಬಳಕೆಯನ್ನು ಹೊಂದಿರುವವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಆದರೆ ಹೆಚ್ಚು ವಿದ್ಯುತ್ ಬಳಸುವವರ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ.

RR ಸಂಖ್ಯೆಯನ್ನು ಆಧಾರ್‌ಗೆ ಲಿಂಕ್: ಸುಮಾರು ಶೇಕಡಾ 90ರಷ್ಟು RR ಸಂಖ್ಯೆಗಳು ಆಧಾರ್‌ಗೆ ಲಿಂಕ್ ಆಗಿಲ್ಲ. ಆಧಾರ್ ಪರಿಚಯಿಸಿದ ಒಂದೆರಡು ವರ್ಷಗಳ ನಂತರ, ಎಸ್ಕಾಮ್‌ಗಳು ಆರ್‌ಆರ್ ಸಂಖ್ಯೆಗಳೊಂದಿಗೆ ಆಧಾರ್ ನ್ನು ಲಿಂಕ್ ಮಾಡುವ ಕಾರ್ಯವನ್ನು ಪ್ರಾರಂಭಿಸಿದವು. ಇದನ್ನು ಹೊಸ ಸಂಪರ್ಕಗಳೊಂದಿಗೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಗರಿಕರು ತಮ್ಮ ಆರ್‌ಆರ್ ಸಂಖ್ಯೆ ಮತ್ತು ಆಧಾರ್ ನೀಡುವಂತೆ ನಾವು ಕೇಳುತ್ತಿದ್ದೇವೆ. ನಾವು ಅವುಗಳನ್ನು ಬ್ಯಾಕ್ ಎಂಡ್ ಹೊಂದಿಸುತ್ತೇವೆ. ಅವು ಹೊಂದಾಣಿಕೆಯಾದರೆ, ಯೋಜನೆಯನ್ನು ಗ್ರಾಹಕರಿಗೆ ನೀಡಲಾಗುವುದು. ಹೆಚ್ಚಿನ ಲಿಂಕ್ ಅನ್ನು ಬೆಸ್ಕಾಂ ಮಿತಿಗಳಲ್ಲಿ ಮಾಡಲಾಗಿದೆ, ಆದರೆ ಇತರ ಎಸ್ಕಾಂಗಳಲ್ಲಿ ಅಲ್ಲ ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT