ಸಾಂದರ್ಭಿಕ ಚಿತ್ರ 
ರಾಜ್ಯ

ಗಗನ್ ಯಾನ್ ಮಿಷನ್ ಮೊದಲ ಪರೀಕ್ಷೆ ಆಗಸ್ಟ್‌ ತಿಂಗಳಲ್ಲಿ: ಇಸ್ರೊ ಅಧ್ಯಕ್ಷ

ಭಾರತದ ಮೊದಲ ಮಾನ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ ಸಿಬ್ಬಂದಿ ಮಾಡ್ಯೂಲ್ ಮಿಷನ್(Gaganyaan crew module mission)ನ ಮೊದಲ ಪರೀಕ್ಷೆ ಆಗಸ್ಟ್‌ನಲ್ಲಿ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ.

ಬೆಂಗಳೂರು: ಭಾರತದ ಮೊದಲ ಮಾನ ಸಹಿತ ಬಾಹ್ಯಾಕಾಶ ಮಿಷನ್ ಗಗನ್ ಯಾನ್ ಸಿಬ್ಬಂದಿ ಮಾಡ್ಯೂಲ್ ಮಿಷನ್(Gaganyaan crew module mission)ನ ಮೊದಲ ಪರೀಕ್ಷೆ ಆಗಸ್ಟ್‌ನಲ್ಲಿ ನಡೆಯಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಜುಲೈನಲ್ಲಿ ಪರೀಕ್ಷಾ ಕಾರ್ಯಾಚರಣೆಯನ್ನು ಕೈಗೊಳ್ಳಬೇಕಾಗಿದ್ದರೂ ಸಾಧ್ಯವಾಗುತ್ತಿಲ್ಲ ಎಂದರು. 

"ಮೊದಲ ಪರೀಕ್ಷಾ ಮಿಷನ್ ಆರಂಭದಲ್ಲಿ ಜುಲೈನಲ್ಲಿ ನಡೆಯಬೇಕಿತ್ತು, ಆದರೆ ಅಂದು ಮುಂದೂಡಲಾಗಿದ್ದು ಆಗಸ್ಟ್ ನಲ್ಲಿ ನಡೆಯಲಿದೆ. ಗಗನ್ಯಾನ್ ನ್ನು 2022 ರಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಕೋವಿಡ್ ಸಾಂಕ್ರಾಮಿಕದಿಂದಾಗಿ ಒಂದೂವರೆ ವರ್ಷ ವಿಳಂಬವಾಗಿದೆ. ಮಿಷನ್ ನ್ನು ಸಾವಧಾನದಿಂದ ಆರಂಭಿಸುವುದು ನಮ್ಮ ಗುರಿಯಾಗಿದೆ ಎಂದರು. 

ಮಾನವ ಬಾಹ್ಯಾಕಾಶ ಯಾನದ ಪ್ರಾಥಮಿಕ ಉದ್ದೇಶವೆಂದರೆ ಅದು ಖಚಿತವಾಗಿ ಸುರಕ್ಷಿತವಾಗಿ ನಿಗದಿತ ಗುರಿ ತಲುಪಬೇಕು. ಪರೀಕ್ಷೆ ಮತ್ತು ಪ್ರಾತ್ಯಕ್ಷಿಕೆ ಕಾರ್ಯಾಚರಣೆಗಳನ್ನು ಗಣನೀಯವಾಗಿ ಹೆಚ್ಚಿಸಿದ್ದೇವೆ, ಇದರಿಂದಾಗಿ ಹೆಚ್ಚುವರಿ ಸ್ಥಗಿತ ನಿರ್ದೇಶನಗಳನ್ನು ಒಳಗೊಂಡಿದೆ. ಯಾವುದೇ ತೊಂದರೆಯಾದರೆ, ಸಿಬ್ಬಂದಿಯನ್ನು ಉಳಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.

ಚಂದ್ರಯಾನ 3ರ ಮುಂಬರುವ ಉಡಾವಣೆಗೆ ಅಂತಿಮ ಸಿದ್ಧತೆಗಳು ನಡೆಯುತ್ತಿವೆ. ಇದು 2019 ರಲ್ಲಿ ಚಂದ್ರಯಾನ 2 ನಂತರ ಇಸ್ರೋ ಕೈಗೊಂಡ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾಗಿದೆ.

ಚಂದ್ರಯಾನ 2 ಉಡಾವಣೆ ಯಶಸ್ವಿಯಾಗಿದ್ದರೂ, ಲ್ಯಾಂಡರ್ ಕುಸಿತದಿಂದಾಗಿ ಅದರ ಲ್ಯಾಂಡರ್ ಮತ್ತು ರೋವರ್ ನಿಯೋಜನೆ ವಿಫಲವಾಗಿದೆ ಎಂದು ಪರಿಗಣಿಸಲಾಗಿದೆ. ಚಂದ್ರಯಾನ 3 ಈ ಬಾರಿ ಲ್ಯಾಂಡರ್ ನ್ನು ಬಲಪಡಿಸುವತ್ತ ಗಮನಹರಿಸಲಿದೆ ಎಂದರು, ಆದರೆ ಮೂರನೇ ಕಾರ್ಯಾಚರಣೆಯ ಆರ್ಬಿಟರ್ ಯಾವುದೇ ಪೇಲೋಡ್ ನ್ನು ಒಳಗೊಂಡಿರುವುದಿಲ್ಲ. ಚಂದ್ರಯಾನ 3 ಆರ್ಬಿಟರ್‌ಗೆ ಯಾವುದೇ ಪೇಲೋಡ್ ಅಗತ್ಯವಿಲ್ಲ ಎಂದರು. 

ಚಂದ್ರಯಾನ 2 ಆರ್ಬಿಟರ್ ಚಂದ್ರನನ್ನು ಅಧ್ಯಯನ ಮಾಡಲು ಉದ್ದೇಶಿಸಿರುವ ಹಲವಾರು ಪೇಲೋಡ್‌ಗಳನ್ನು ಹೊತ್ತೊಯ್ದಿದೆ. ಚಂದ್ರಯಾನ 2 ಆರ್ಬಿಟರ್ ಇನ್ನೂ ಕಾರ್ಯನಿರ್ವಹಿಸುತ್ತಿರುವುದರಿಂದ, ಚಂದ್ರಯಾನ 3 ಆರ್ಬಿಟರ್‌ಗೆ ಯಾವುದೇ ಪೇಲೋಡ್ ನ್ನು ಸಾಗಿಸುವ ಅಗತ್ಯವಿಲ್ಲ, ಆದ್ದರಿಂದ ಇದನ್ನು ಪ್ರೊಪಲ್ಷನ್ ಮಾಡ್ಯೂಲ್ ಎಂದು ಕರೆಯಲಾಗುತ್ತದೆ. ಆರ್ಬಿಟರ್‌ನಲ್ಲಿ ಪೇಲೋಡ್ ನ್ನು ಸೇರಿಸದೆ ನಾವು ಉಳಿಸಿದ ದ್ರವ್ಯರಾಶಿಯನ್ನು ಲ್ಯಾಂಡರ್‌ಗೆ ಸೇರಿಸಲಾಗಿದೆ.

ಉಪಗ್ರಹ ಮತ್ತು ರಾಕೆಟ್ - ಲಾಂಚ್ ವೆಹಿಕಲ್ ಮಾರ್ಕ್ 3 - ಪ್ರಸ್ತುತ ಪರೀಕ್ಷೆಯಲ್ಲಿದೆ. ಎರಡನ್ನೂ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಸಾಗಿಸಲಾಗಿದೆ ಎಂದು ಇಸ್ರೊ ಅಧ್ಯಕ್ಷರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT