ರಾಮಲಿಂಗಾ ರೆಡ್ಡಿ 
ರಾಜ್ಯ

ಕಾಶಿ ದರ್ಶನಕ್ಕೆ ರಾಜ್ಯದ 600 ಯಾತ್ರಿಕರನ್ನು ಕಳುಹಿಸಲಾಗುವುದು: ರಾಮಲಿಂಗಾರೆಡ್ಡಿ

ಸರ್ಕಾರದ ಕಾಶಿ ಯಾತ್ರೆ ಯೋಜನೆಯಡಿ ಜುಲೈನಿಂದ ಕರ್ನಾಟಕದ ಯಾತ್ರಾರ್ಥಿಗಳನ್ನು ಕಾಶಿ ದರ್ಶನಕ್ಕೆ ಕಳುಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ಹೇಳಿದರು.

ಬೆಂಗಳೂರು: ಸರ್ಕಾರದ ಕಾಶಿ ಯಾತ್ರೆ ಯೋಜನೆಯಡಿ ಜುಲೈನಿಂದ ಕರ್ನಾಟಕದ ಯಾತ್ರಾರ್ಥಿಗಳನ್ನು ಕಾಶಿ ದರ್ಶನಕ್ಕೆ ಕಳುಹಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಗುರುವಾರ ಹೇಳಿದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಚಿವರು, ಜುಲೈ ಎರಡನೇ ವಾರದಿಂದ ಕಾಶಿಗೆ ಒಂದು ಸುತ್ತಿನ ಪ್ರವಾಸಕ್ಕೆ ರಾಜ್ಯದ 600 ಮಂದಿ ಭಕ್ತರನ್ನು ಕಳುಹಿಸಲು ಮುಜರಾಯಿ ಇಲಾಖೆ ಮುಖ್ಯಸ್ಥರು ರೈಲ್ವೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ಚುನಾವಣಾ ನೀತಿ ಸಂಹಿತೆಯಿಂದಾಗಿ ಏಪ್ರಿಲ್ 14ರಿಂದ ಪ್ರಯಾಗ್‌ರಾಜ್ ಮತ್ತು ಅಯೋಧ್ಯೆ ಒಳಗೊಂಡ ಕಾಶಿ ರೌಂಡ್ ಟ್ರಿಪ್ ಪ್ಯಾಕೇಜ್ ಅನ್ನು ಸರ್ಕಾರ ನಿಲ್ಲಿಸಬೇಕಾಯಿತು. ಇದೀಗ ಯೋಜನೆ ಮರಳಿ ಆರಂಭವಾಗಲಿದೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಟಿಕೆಟ್ ಕಾಯ್ದಿರಿಸಿದ್ಜ ಪ್ರತಿ ಯಾತ್ರಿಕರಿಗೆ ಇಲಾಖೆಯು 15,000 ರೂ. ಹಿಂದಿರುಗಿಸಿದೆ. ಯಾತ್ರೆಗೆ ಒಟ್ಟು ರೂ.20,000 ವೆಚ್ಚವಾಗಲಿದ್ದು, ಸರ್ಕಾರ ಪ್ರತಿ ಯಾತ್ರಾರ್ಥಿಗೆ ರೂ.5,000 ನೀಡುತ್ತಿದೆ. ಪ್ರವಾಸ ಕೈಗೊಳ್ಳುವ ಇಚ್ಛೆಯುಳ್ಳ ಯಾತ್ರಾರ್ಥಿಗಳು IRCTC ವೆಬ್'ಸೈಟ್'ಗೆ ಭೇಟಿ ನೀಡಿ ರೂ.15,000 ಪಾವತಿಸಿ ಟಿಕೆಟ್ ಬುಕ್ ಮಾಡಬಹುದು. ಮೆಜೆಸ್ಟಿಕ್ ನಿಂದ ರೈಲು ಹೊರಡಲಿದೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ಮುಳಬಾಗಿಲು ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಎಸ್.ವಿಶ್ವನಾಥ ದೀಕ್ಷಿತ್ ಅವರು ಕಾಂಗ್ರೆಸ್ ಸರ್ಕಾರವನ್ನು ಕೊಂಡಾಡಿದ್ದಾರೆ. ಸಾಮರ್ಥ್ಯವಿಲ್ಲದ ಸಾಕಷ್ಟು ಬಡವರಿದ್ದಾರೆ. ಯೋಜನೆ ಮೂಲಕ ಅವರು ಕಾಶಿ ಯಾತ್ರೆ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅನ್ನಭಾಗ್ಯ: 5 ಕೆಜಿ ಅಕ್ಕಿ ಬದಲು ಇಂದಿರಾ ಕಿಟ್ ವಿತರಣೆ: ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ

ಭಾರತವೇ ನಮಗೆ ಮಾದರಿ, ಅಕ್ರಮ ವಲಸೆ ತಡೆಗೂ ಸಹಕಾರಿ; ಬ್ರಿಟನ್ ನಲ್ಲೂ ಆಧಾರ್ ಜಾರಿಗೆ PM Keir Starmer ಉತ್ಸುಕ; Nandan Nilekani ಜೊತೆ ಸಭೆ!

Ranthambore: 'ಇದು ನನ್ನದು, ಇಲ್ಲ ನನ್ನದು' ; ದಟ್ಟ ಅರಣ್ಯದಲ್ಲಿ ಅಮ್ಮ- ಮಗಳ ಬಿಗ್ ಫೈಟ್! ದಂಗಾದ ಪ್ರವಾಸಿಗರು, ಅಪರೂಪದ Video

Exclusive: ಬಿಹಾರದಲ್ಲಿ ಕಾಂಗ್ರೆಸ್​ಗೆ 57 ಸ್ಥಾನ ಸಾಧ್ಯತೆ, ಹೊಸ ಮಿತ್ರಪಕ್ಷಕ್ಕೆ ಎರಡು ಸ್ಥಾನ

ಬೆಂಗಳೂರು: ನ್ಯಾಯಾಲಯದ 5ನೇ ಮಹಡಿಯಿಂದ ಜಿಗಿದು ಪೋಕ್ಸೋ ಪ್ರಕರಣದ ಆರೋಪಿ ಆತ್ಮಹತ್ಯೆ

SCROLL FOR NEXT