ಪ್ರಾತಿನಿಧಿಕ ಚಿತ್ರ 
ರಾಜ್ಯ

ಅಪ್ರಾಪ್ತ ಬಾಲಕನಿಗೆ ಚಾಕು ತೋರಿಸಿ ದರೋಡೆ ಮಾಡಿದ್ದ ವ್ಯಕ್ತಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ನ್ಯಾಯಲಯ

ಬೆಂಗಳೂರು ನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಾಕು ತೋರಿಸಿ ಅಪ್ರಾಪ್ತ ಬಾಲಕನ ಸೆಲ್ ಫೋನ್ ಅನ್ನು ದೋಚಿದ್ದಕ್ಕಾಗಿ 29 ವರ್ಷದ ಯುವಕನಿಗೆ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಬೆಂಗಳೂರು: ನಗರದ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಾಕು ತೋರಿಸಿ ಅಪ್ರಾಪ್ತ ಬಾಲಕನ ಸೆಲ್ ಫೋನ್ ಅನ್ನು ದೋಚಿದ್ದಕ್ಕಾಗಿ 29 ವರ್ಷದ ಯುವಕನಿಗೆ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

ಆರೋಪಿ ಬಾಲಕನಿಗೆ ಚಾಕು ತೋರಿಸಿ ಬೆದರಿಸಿದ್ದಾನೆ. ಬಾಲಕ ತನ್ನ ಸೆಲ್ ಫೋನ್ ಮಾತ್ರವಲ್ಲದೆ ತನ್ನ ಆತ್ಮವಿಶ್ವಾಸ ಮತ್ತು ಧೈರ್ಯವನ್ನೂ ಕಳೆದುಕೊಂಡಿದ್ದಾನೆ. ಈ ಘಟನೆಯು ಆತನ ಮನಸ್ಸಿನಲ್ಲಿ ಶಾಶ್ವತ ಗಾಯವನ್ನು ಉಂಟುಮಾಡಬಹುದು ಎಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಸಿಬಿ ತಿಳಿಸಿದರು. 

ಆರೋಪಿ ಕುಮಾರಸ್ವಾಮಿ ಲೇಔಟ್ ನಿವಾಸಿ ಗೋವಿಂದರಾಜ್ ಅಲಿಯಾಸ್ ಪಾರಿವಾಳ ಪುಟ್ಟನಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಸಂತ್ರಸ್ತರ ಪರಿಹಾರ ಯೋಜನೆಯಡಿ ಬಾಲಕನಿಗೆ ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಂದೆ ತೀರ್ಪಿನ ಪ್ರತಿಯನ್ನು ಇರಿಸುವಂತೆ ನ್ಯಾಯಾಧೀಶರು ನಿರ್ದೇಶನ ನೀಡಿದರು. ಬೈಕಿನಲ್ಲಿ ಹೋಗುತ್ತಿದ್ದ ಆರೋಪಿ ಗೋವಿಂದರಾಜು ಮತ್ತು ಮತ್ತೊಬ್ಬರು ದೇವರಚಿಕ್ಕನಹಳ್ಳಿಯಲ್ಲಿ ತನ್ನನ್ನು ಮತ್ತು ತನ್ನ ಕಿರಿಯ ಸಹೋದರನನ್ನು ತಡೆದು ಮೇ 18, 2020 ರಂದು ತನ್ನ ಸೆಲ್ ಫೋನ್ ಕೊಡುವಂತೆ ಚಾಕುವಿನಿಂದ ಬೆದರಿಸಿದ್ದಾರೆ ಎಂದು 17 ವರ್ಷ ವಯಸ್ಸಿನ ಆರ್ಯ (ಹೆಸರು ಬದಲಾಯಿಸಲಾಗಿದೆ) ದೂರು ನೀಡಿದ್ದರು.

ಇಂತಹ ಅಪರಾಧವು ಸಾರ್ವಜನಿಕ ಅಭದ್ರತೆಗೆ ಕಾರಣವಾಗುತ್ತದೆ: ನ್ಯಾಯಾಲಯ

ಆತನು ಸೆಲ್‌ ಫೋನ್‌ ಕೊಡಲು ನಿರಾಕರಿಸಿದಾಗ ಆರೋಪಿಗಳು ಆತನಿಂದ ಮೊಬೈಲ್‌ ಕಸಿದುಕೊಂಡಿದ್ದರು. ಅಲ್ಲದೆ, ಆರೋಪಿ ಆತನಿಗೆ ಚಾಕುವಿನಿಂದ ಇರಿಯಲು ಪ್ರಯತ್ನಿಸಿದ್ದಾನೆ. ಆದರೆ, ತಾನು ಮತ್ತು ಅವನ ಸಹೋದರ ಸ್ಥಳದಿಂದ ಓಡಿಹೋಗಿದ್ದಾಗಿ ಎಂದು ಆರ್ಯ ತಿಳಿಸಿದ್ದಾರೆ. ಆರೋಪಿಯು ಮಾಡಿದ ಅಪರಾಧವು ಸ್ಥಾಪಿತ ನಾಗರಿಕ ಮಾನದಂಡಗಳಿಗೆ ವಿರುದ್ಧವಾಗಿದೆ. ಇಂತಹ ಘಟನೆಗಳು ಜನರಲ್ಲಿ ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಪೊಲೀಸರಿಗೆ ದೂರು ನೀಡಲು ಒಂದು ದಿನ ವಿಳಂಬವಾದ ಬಗ್ಗೆ ಆರೋಪಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, ಅಪರಿಚಿತ ವ್ಯಕ್ತಿಗಳು ಯಾವುದೇ ಕಾರಣವಿಲ್ಲದೆ ಯಾರನ್ನಾದರೂ ಭಯಭೀತಗೊಳಿಸಿ ಅವರ ಮೊಬೈಲ್ ಕಿತ್ತುಕೊಂಡರೆ ಸಂತ್ರಸ್ತರು ತೀವ್ರ ಆಘಾತಕ್ಕೆ ಒಳಗಾಗುತ್ತಾರೆ ಎಂಬುದು ಅರ್ಥವಾಗುವಂತಹದ್ದಾಗಿದೆ. ಪೋಲೀಸರ ಮೊರೆ ಹೋಗಬೇಕೋ ಬೇಡವೋ ಎಂಬ ಗೊಂದಲದ ಮನಸ್ಥಿತಿಯಲ್ಲಿರುತ್ತಾರೆ. ದೂರು ದಾಖಲಿಸಲು ಅವರು ಯೋಚಿಸಲು ಮತ್ತು ಆಘಾತದಿಂದ ಹೊರಬರಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT