ಪ್ರಾತಿನಿಧಿಕ ಚಿತ್ರ 
ರಾಜ್ಯ

ಹೊಸ ಫಲಾನುಭವಿಗಳಿಲ್ಲ, ಬಾಕಿ ಉಳಿದಿರುವ ಅರ್ಜಿ ತೆರವುಗೊಳಿಸುವುದೇ ಆದ್ಯತೆ: ಕರ್ನಾಟಕ ವಸತಿ ಇಲಾಖೆ

2014 ರಿಂದ 2021 ರವರೆಗೆ ಫಲಾನುಭವಿಗಳಿಗೆ 1.07 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ 60,250 ಮನೆಗಳು ಮಾತ್ರ ಪೂರ್ಣಗೊಂಡಿವೆ. 16,063 ಪ್ರಗತಿ ಮತ್ತು ನಿರ್ಮಾಣ ಹಂತದಲ್ಲಿ ಉಳಿದಿವೆ. 24,278 ಮನೆಗಳು ಟೇಕಾಫ್ ಆಗಿಲ್ಲ ಎಂದು ದೇವರಾಜ್ ಅರಸು ವಸತಿ ಯೋಜನೆಯ ಮಾಹಿತಿ ಬಹಿರಂಗಪಡಿಸಿದೆ.

ಬೆಂಗಳೂರು: ರಾಜ್ಯ ವಸತಿ ಇಲಾಖೆಯು ವಸತಿ ಯೋಜನೆಗಳ ಅಡಿಯಲ್ಲಿ ಬಾಕಿ ಉಳಿದಿದ್ದ ಅರ್ಜಿಗಳನ್ನು ತೆರವುಗೊಳಿಸುವಲ್ಲಿ ನಿರತವಾಗಿದೆ. ವಸತಿ ಯೋಜನೆಗಳಿಗೆ 2021ರಿಂದ ಯಾವುದೇ ಹೊಸ ಫಲಾನುಭವಿಗಳು ಮತ್ತು ಬಜೆಟ್ ಹಂಚಿಕೆಯನ್ನು ನಿಗದಿಪಡಿಸಿಲ್ಲ. ಈಗಾಗಲೇ ಗುರುತಿಸಲಾದ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲು ಗಮನಹರಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

2014 ರಿಂದ 2021 ರವರೆಗೆ ಫಲಾನುಭವಿಗಳಿಗೆ 1.07 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಅವುಗಳಲ್ಲಿ 60,250 ಮನೆಗಳು ಮಾತ್ರ ಪೂರ್ಣಗೊಂಡಿವೆ. 16,063 ಪ್ರಗತಿ ಮತ್ತು ನಿರ್ಮಾಣ ಹಂತದಲ್ಲಿ ಉಳಿದಿವೆ. 24,278 ಮನೆಗಳು ಟೇಕಾಫ್ ಆಗಿಲ್ಲ ಎಂದು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ (RGHCL) ದೇವರಾಜ್ ಅರಸು ಉಪ ಯೋಜನೆಯ ಮಾಹಿತಿ ಬಹಿರಂಗಪಡಿಸಿದೆ.

ಈ ಮನೆಗಳು ಬಾಕಿ ಇರುವ ಕಾರಣ, 2021 ರಿಂದ ಹೊಸ ಫಲಾನುಭವಿಗಳಿಗೆ ಇಲಾಖೆಯು ಬಜೆಟ್ ಅನ್ನು ನಿಗದಿಪಡಿಸಿಲ್ಲ ಎಂದು ಯೋಜನೆಯ ಅನುಷ್ಠಾನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಕಿ ಉಳಿದಿರುವವುಗಳನ್ನು ಮೊದಲು ತೆರವುಗೊಳಿಸುವುದು ನಮ್ಮ ಉದ್ದೇಶವಾಗಿದೆ. ಹೊಸ ಗುರಿಗಳನ್ನು ಹೊಂದಿಸುವುದು ಇಲಾಖೆಗೆ ಹೊರೆಯನ್ನು ಹೆಚ್ಚಿಸುತ್ತದೆ ಎಂದು ಅಧಿಕಾರಿ ಹೇಳಿದರು.

2000 ರಲ್ಲಿ ಪ್ರಾರಂಭವಾದ ಆರ್‌ಜಿಎಚ್‌ಸಿಎಲ್‌ ಅಡಿಯಲ್ಲಿನ ಎಲ್ಲಾ ಯೋಜನೆಗಳು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಿಗದಿಪಡಿಸಿದ '2022 ರ ವೇಳೆಗೆ ಎಲ್ಲರಿಗೂ ವಸತಿ' ಗುರಿಯನ್ನು ಪೂರೈಸುವಲ್ಲಿ ವಿಫಲವಾಗಿವೆ. ಬಸವ ವಸತಿ ಯೋಜನೆ, ಡಾ. ಬಿಆರ್ ಅಂಬೇಡ್ಕರ್ ನಿವಾಸ ಯೋಜನೆ ಮತ್ತು ಆಶ್ರಯ ವಸತಿ ಯೋಜನೆಗಳು ಸಮಾಜದ ವಿವಿಧ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ದುರ್ಬಲ ವರ್ಗಗಳನ್ನು ಗುರಿಯಾಗಿಸಿಕೊಂಡಿವೆ.

ಟ್ರಾನ್ಸ್‌ಜೆಂಡರ್‌ಗಳು, ಅಂಗವಿಕಲರು, ಎಚ್‌ಐವಿ ರೋಗಿಗಳು ಮತ್ತು ಇತರರು ಸೇರಿದಂತೆ ಸಮಾಜದ ವಿವಿಧ ವಿಭಾಗಗಳು ಯೋಜನೆಯಿಂದ ವಂಚಿತರಾಗಿದ್ದಾರೆ. ತೃತೀಯಲಿಂಗಿ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಮಾತನಾಡಿ, ಅಧಿಕಾರಿಗಳ ಸಮನ್ವಯ ಕೊರತೆ ಹಾಗೂ ನಿರ್ಲಕ್ಷ್ಯದಿಂದ ಎಲ್ಲರಿಗೂ ಅನುಕೂಲವಾಗುವಲ್ಲಿ ವಿಫಲವಾಗಿದೆ. ಯೋಜನೆಯಡಿ ನೋಂದಾಯಿಸಿಕೊಳ್ಳುವ ಕುರಿತು ವಿಚಾರಿಸಿದಾಗ ಜನರಿಗೆ ಕಹಿ ಅನುಭವವಾಗಿದೆ ಎಂದರು.

2022ರ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯು ಅಸಮರ್ಪಕ ಸಮೀಕ್ಷೆ, ಫಲಾನುಭವಿಗಳ ನಕಲು, ನಿಧಿ ಹಂಚಿಕೆಯಲ್ಲಿ ವಿಳಂಬ ಮತ್ತು ಉದ್ದೇಶಿತ ಫಲಾನುಭವಿಗಳ ನಿಧಾನಗತಿಯ ಗುರುತಿಸುವಿಕೆ ಸೇರಿದಂತೆ ಹಲವು ನ್ಯೂನತೆಗಳನ್ನು ಎತ್ತಿ ತೋರಿಸಿದೆ, ಇದು ಅರ್ಹ ಲಕ್ಷಾಂತರ ಜನರು ಯೋಜನೆಯಿಂದ ವಂಚಿತರಾಗುವಂತೆ ಮಾಡಿದೆ.

ಕರ್ನಾಟಕ ಕೈಗೆಟಕುವ ದರದ ವಸತಿ ನೀತಿಯಲ್ಲಿ 20.35 ಲಕ್ಷ ರೂ.ಗೆ 2021 ರವರೆಗೆ 13.72 ಲಕ್ಷ ಫಲಾನುಭವಿಗಳನ್ನು ಮಾತ್ರ ಗುರುತಿಸಿದೆ. ಸಿಎಜಿ ವರದಿಯು, ಕಾರ್ಯತಂತ್ರದ ವಾರ್ಷಿಕ ಯೋಜನೆಗಳನ್ನು ರೂಪಿಸಲು ಮತ್ತು ಅವುಗಳನ್ನು ಸಮಯಕ್ಕೆ ಸರಿಯಾಗಿ ಜಾರಿಗೆ ತರಲು ಶಿಫಾರಸು ಮಾಡಿದೆ. ಹಣ ತಡವಾಗಿ ಪ್ರಸಾರವಾಗುವುದನ್ನು ತಡೆಯಲು ರಾಜ್ಯ ಸರ್ಕಾರ ಎಲ್ಲಾ ಷರತ್ತುಗಳನ್ನು ಅನುಸರಿಸಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT