ಸಾಂದರ್ಭಿಕ ಚಿತ್ರ 
ರಾಜ್ಯ

ಶಬ್-ಎ-ಬರಾತ್ ರಾತ್ರಿ ಬೈಕ್ ಸ್ಟಂಟ್ ಮಾಡಬೇಡಿ; ಯುವಕರಿಗೆ ಮುಸ್ಲಿಂ ಸಮುದಾಯದ ಹಿರಿಯರ ಕಿವಿಮಾತು 

ಮಂಗಳವಾರ ಮುಸ್ಲಿಮರ ಪ್ರಮುಖ ಆಚರಣೆಗಳಲ್ಲಿ ಒಂದಾದ ಶಬ್-ಎ-ಬರಾತ್ ಹಬ್ಬ ಆಗಿರುವುದರಿಂದ ಸಮುದಾಯದ ಹಿರಿಯರು ಮತ್ತು ಇಮಾಮ್‌ಗಳು ಸಾಮೂಹಿಕವಾಗಿ ಯುವಕರು ಸಮುದಾಯದ ಗೌರವವನ್ನು ಉಳಿಸಲು ಮತ್ತು ಬೈಕ್ ಸ್ಟಂಟ್‌ಗಳನ್ನು ಮಾಡುವ ಮೂಲಕ ಕಾನೂನು ತೊಂದರೆಗೆ ಸಿಲುಕದಂತೆ ಸಲಹೆ ನೀಡುತ್ತಿದ್ದಾರೆ. 

ಬೆಂಗಳೂರು: ಮಂಗಳವಾರ ಮುಸ್ಲಿಮರ ಪ್ರಮುಖ ಆಚರಣೆಗಳಲ್ಲಿ ಒಂದಾದ ಶಬ್-ಎ-ಬರಾತ್ ಹಬ್ಬ ಆಗಿರುವುದರಿಂದ ಸಮುದಾಯದ ಹಿರಿಯರು ಮತ್ತು ಇಮಾಮ್‌ಗಳು ಸಾಮೂಹಿಕವಾಗಿ ಯುವಕರು ಸಮುದಾಯದ ಗೌರವವನ್ನು ಉಳಿಸಲು ಮತ್ತು ಬೈಕ್ ಸ್ಟಂಟ್‌ಗಳನ್ನು ಮಾಡುವ ಮೂಲಕ ಕಾನೂನು ತೊಂದರೆಗೆ ಸಿಲುಕದಂತೆ ಸಲಹೆ ನೀಡುತ್ತಿದ್ದಾರೆ. 

ಈ ಹಿಂದೆ ಅಪಘಾತಗಳು ಮತ್ತು ಅಹಿತಕರ ಘಟನೆಗಳು ನಡೆದಿರುವುದರಿಂದ ಮಂಗಳವಾರ ರಾತ್ರಿ ಯುವಕರ ಮೇಲೆ ನಿಗಾ ಇಡುವಂತೆ ಇಮಾಮ್‌ಗಳು ಸಮುದಾಯದ ಮುಖಂಡರು ಮತ್ತು ಹಿರಿಯರಲ್ಲಿ ಮನವಿ ಮಾಡಿದ್ದಾರೆ. ಪವಿತ್ರ ರಂಜಾನ್ ಮಾಸಕ್ಕೆ 15 ದಿನಗಳ ಮೊದಲು ಈ ದಿನ ಆಚರಿಸಲಾಗುತ್ತೆ. 

ಸುಮಾರು ಒಂದು ದಶಕದಿಂದ, ಬೆಂಗಳೂರು ಟ್ರಾಫಿಕ್ ಪೊಲೀಸರು ರಾತ್ರಿ 9 ಗಂಟೆಯ ನಂತರ ನಗರದಲ್ಲಿ ಫ್ಲೈಓವರ್‌ಗಳನ್ನು ನಿರ್ಬಂಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. 'ಶಬ್-ಎ-ಬರಾತ್ ಪವಿತ್ರ ರಂಜಾನ್ ತಿಂಗಳ ಆಗಮನದ ಸೂಚನೆಯಾಗಿದೆ. ಮಸೀದಿಗಳಿಗೆ ಬಂದು ಪ್ರಾರ್ಥನೆ ಸಲ್ಲಿಸುವಂತೆ ಸಮುದಾಯದವರಿಗೆ ತಿಳಿಸಲಾಗಿದೆ. ನಗರದ ಸುಮಾರು 400ಕ್ಕೂ ಹೆಚ್ಚು ಮಸೀದಿಗಳಿಗೆ ಶುಕ್ರವಾರ ಧರ್ಮ ಪ್ರವಚನವನ್ನು ನೀಡಲು ಮತ್ತು ಶಬ್-ಎ-ಬರಾತ್ ರಾತ್ರಿಯಲ್ಲಿ ಘೋಷಣೆಗಳನ್ನು ಮಾಡಲು ಕೇಳಲಾಗಿದೆ.

'ವ್ಹೀಲಿಂಗ್ ಮತ್ತು ಬೈಕ್ ಸ್ಟಂಟ್‌ಗಳಷ್ಟೇ ಅಲ್ಲ, ಯುವಕರು ಮತ್ತು ಸಮುದಾಯದವರು ಆ ರಾತ್ರಿ ಬೀದಿಗಳಲ್ಲಿ ತಿರುಗಾಡದಂತೆ ಮತ್ತು ಇತರ ಸಮುದಾಯದವರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವಂತೆ ಕೇಳಿಕೊಳ್ಳಲಾಗಿದೆ. ಪ್ರತಿ ಪ್ರದೇಶದಲ್ಲಿ ಕೆಲವು ಹಿರಿಯರು ಮತ್ತು ಮುಖಂಡರು ಈ ಬಗ್ಗೆ ನಿಗಾ ಇಡುತ್ತಾರೆ ಮತ್ತು ಅಗತ್ಯವಿದ್ದರೆ ಪೊಲೀಸರಿಗೆ ಕರೆ ಮಾಡಿ ಶಾಂತಿ ಕದಡದಂತೆ ನೋಡಿಕೊಳ್ಳುತ್ತಾರೆ' ಎಂದು ಜಾಮಿಯಾ ಮಸೀದಿ ಸಿಟಿ ಮಾರುಕಟ್ಟೆಯ ಮುಖ್ಯ ಇಮಾಮ್ ಮಕ್ಸೂದ್ ಇಮ್ರಾಮ್ ರಶಾದಿ ಹೇಳಿದರು.

ಶಬ್-ಎ-ಬರಾತ್ ಮತ್ತು ಹೊಸ ವರ್ಷದಂತಹ ಹಬ್ಬಗಳ ಸಂದರ್ಭದಲ್ಲಿ, ರಾತ್ರಿ 9 ಗಂಟೆಯ ನಂತರ ಫ್ಲೈಓವರ್‌ಗಳನ್ನು ಮುಚ್ಚಲಾಗುವುದು. ಅಷ್ಟರಲ್ಲಾಗಲೇ ಸಂಚಾರ ಯಥಾಸ್ಥಿತಿಗೆ ತಲುಪಿರುತ್ತದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

'ಜಂಕ್ಷನ್‌ಗಳಲ್ಲಿನ ಎಲ್ಲಾ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ಅಪಾಯಕಾರಿ ಸಾಹಸಗಳಲ್ಲಿ ತೊಡಗಿಸಿಕೊಂಡರೆ ಅಂತವರನ್ನು ಹಿಡಿಯಲಾಗುತ್ತದೆ' ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT