ರಾಜ್ಯ

ಹೋಳಿ ಹಬ್ಬ: ಪ್ರಾಣಿಗಳ ಮೇಲೆ ಬಣ್ಣ ಹಾಕದಂತೆ ನಾಗರೀಕರಿಗೆ ಪ್ರಾಣಿ ಕಲ್ಯಾಣ ಮಂಡಳಿ ಮನವಿ

Manjula VN

ಬೆಂಗಳೂರು: ಬಣ್ಣಗಳ ಹಬ್ಬ ಹೋಳಿ ಹಬ್ಬ ಹತ್ತಿರಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ (ಕೆಎಡಬ್ಲ್ಯುಬಿ) ಆದೇಶ ಹೊರಡಿಸಿದ್ದು, ಹಬ್ಬದ ಸಂದರ್ಭದಲ್ಲಿ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು, ಹಸು, ಮೇಕೆ, ಕುರಿ ಇತ್ಯಾದಿಗಳ ಮೇಲೆ ಬಣ್ಣವನ್ನು ಬಳಸದಿರುವಂತೆ ನಾಗರೀಕರಿಗೆ ಮನವಿ ಮಾಡಿಕೊಂಡಿದೆ.

ಪ್ರಾಣಿ ಹಿಂಸೆ ಕಾಯಿದೆ 1960ರ ಅಡಿಯಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದ್ದು, ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಮಾರ್ಚ್ 3 ರಂದು ಆದೇಶ ಹೊರಡಿಸಿದ್ದು, ಹೋಳಿ ಆಚರಣೆಯು ಪ್ರಾಣಿಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿಸಿಸಲಾಗಿದೆ.

“ಅಜ್ಞಾನದಿಂದ ಜನರು ನಾಯಿ, ಬೆಕ್ಕು ಮತ್ತು ಹಸುಗಳಂತಹ ಪ್ರಾಣಿಗಳಿಗೆ ಬಣ್ಣಗಳನ್ನು ಹಾಕುತ್ತಾರೆ. ಬಣ್ಣಗಳು ಅವುಗಳ ಕಣ್ಣಿಗೆ ಬಿದ್ದಾಗ, ಅದು ಅವುಗಳನ್ನು ಕುರುಡಾಗಿಸುತ್ತದೆ. ಮನುಷ್ಯರು ಬಣ್ಣ ಬಿದ್ದಾಗ ತೊಳೆದುಕೊಳ್ಳುತ್ತಾರೆ. ಆದರೆ, ಪ್ರಾಣಿಗಳು ಮನುಷ್ಯರಂತಲ್ಲ. ದೇಹವನ್ನು ನೆಕ್ಕುವ ಮೂಲಕ ಅವುಗಳು ತಮ್ಮನ್ನು ತಾವು ಸ್ವಚ್ಛಗೊಳಿಸಿಕೊಳ್ಳುತ್ತೇವೆ. ಇದರಿಂದ ಬಣ್ಣವು ಪ್ರಾಣಿಗಳ ದೇಹದೊಳಗೆ ಸೇರಿ, ಆರೋಗ್ಯದಲ್ಲಿ ಏರುಪೇರುಗಳನ್ನು ಎದುರು ಮಾಡುತ್ತದೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

SCROLL FOR NEXT