ಸಾಂದರ್ಭಿಕ ಚಿತ್ರ 
ರಾಜ್ಯ

ಕೊಡಗು: ಅರಣ್ಯದಲ್ಲಿನ ಬೆಂಕಿ ಅವಘಡಗಳಿಗೆ ಭೂ ಸಮಸ್ಯೆಯೇ ಕಾರಣ!

ಆಕಸ್ಮಿಕ ಬೆಂಕಿಯಂತಹ ಅವಘಡಗಳಿಂದ ರಕ್ಷಣೆಗಾಗಿ ಕೊಡಗಿನ ಅರಣ್ಯದಲ್ಲಿ 200 ಕಿ.ಮೀ.ಗೂ ಹೆಚ್ಚು ದೂರ ಬೆಂಕಿ ರೇಖೆಗಳನ್ನು ಎಳೆಯಲಾಗಿದೆ. ಅರಣ್ಯದಂಚಿನಲ್ಲಿ  ಆಕಸ್ಮಿಕ  ಬೆಂಕಿ ಘಟನೆಗಳು ನಿಯಮಿತವಾಗಿ ವರದಿಯಾಗುತ್ತಿದ್ದು, ಭೂ ಸಮಸ್ಯೆಗಳು ಅವುಗಳಿಗೆ ಕಾರಣವೆಂದು ಪರಿಗಣಿಸಲಾಗಿದೆ.

ಮಡಿಕೇರಿ: ಆಕಸ್ಮಿಕ ಬೆಂಕಿಯಂತಹ ಅವಘಡಗಳಿಂದ ರಕ್ಷಣೆಗಾಗಿ ಕೊಡಗಿನ ಅರಣ್ಯದಲ್ಲಿ 200 ಕಿ.ಮೀ.ಗೂ ಹೆಚ್ಚು ದೂರ ಬೆಂಕಿ ರೇಖೆಗಳನ್ನು ಎಳೆಯಲಾಗಿದೆ. ಅರಣ್ಯದಂಚಿನಲ್ಲಿ  ಆಕಸ್ಮಿಕ  ಬೆಂಕಿ ಘಟನೆಗಳು ನಿಯಮಿತವಾಗಿ ವರದಿಯಾಗುತ್ತಿದ್ದು, ಭೂ ಸಮಸ್ಯೆಗಳು ಅವುಗಳಿಗೆ ಕಾರಣವೆಂದು ಪರಿಗಣಿಸಲಾಗಿದೆ.

ಜಿಲ್ಲೆಯಾದ್ಯಂತ ಕಳೆದ ಒಂದು ವಾರದಲ್ಲಿ ಆಕಸ್ಮಿಕ ಬೆಂಕಿಗೆ 100 ಎಕರೆಗೂ ಹೆಚ್ಚು ಪ್ರದೇಶದಲ್ಲಿನ ಹುಲ್ಲುಗಾವಲು ನಾಶವಾಗಿದೆ. (ಅರಣ್ಯ ಪ್ರದೇಶವೆಂದು ಗುರುತಿಸಿಕೊಳ್ಳುವ ಡೀಮ್ಡ್ ) ಸಿ ಆ್ಯಂಡ್ ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಲ್ಲಿ ಆಡಳಿತದ ವೈಫಲ್ಯ ಕೂಡಾ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆಂಕಿ ಅವಘಡಗಳಿಗೆ ಒಂದು ಕಾರಣ ಎಂದು ವಿಶ್ಲೇಷಿಸಬಹುದು.

ಈ ಹಿಂದೆ ಹಾನಿಗೊಳಗಾದ ಜಮೀನುಗಳು ಅರಣ್ಯ ಪ್ರದೇಶದಂತೆಯೇ ಇವೆ, ಆದರೆ ಅವು ಅರಣ್ಯ ಇಲಾಖೆಯ ಸ್ವಾಧೀನದಲ್ಲಿಲ್ಲದ ಸಿ & ಡಿ ಜಮೀನುಗಳಾಗಿದ್ದರೂ ಗೊತ್ತುಪಡಿಸಿದ ಅರಣ್ಯ ಪ್ರದೇಶಗಳಾಗಿಲ್ಲ. ಈ ಪ್ರದೇಶಗಳಲ್ಲಿ ಯಾವುದೇ ಬೆಂಕಿಯ ರೇಖೆಗಳನ್ನು ಎಳೆಯದೇ ಇರುವುದರಿಂದ, ಬೇಸಿಗೆಯಲ್ಲಿ ಅವು ಬೆಂಕಿಗೆ ಗುರಿಯಾಗುತ್ತವೆ, ಹಲವಾರು ಜಾತಿಯ ವನ್ಯಜೀವಿಗಳು ತೊಂದರೆಯನ್ನು ಎದುರಿಸುತ್ತಿವೆ. ಇದಲ್ಲದೆ, ನ್ಯಾಯಾಲಯದ ಆದೇಶದಂತೆ, ಜಿಲ್ಲಾಡಳಿತವ 11,000 ಹೆಕ್ಟೇರ್‌ಗಿಂತ ಹೆಚ್ಚಿನ ಸಿ & ಡಿ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕಾಗಿದೆ.

ಹಾರಂಗಿ ಜಲಾಶಯ ನಿರ್ಮಾಣದ ವೇಳೆ ನಿವಾಸಿಗಳ ಪುನರ್ವಸತಿಗೆ ಬಳಕೆಯಾದ ಅರಣ್ಯ ಭೂಮಿಗೆ ಪರಿಹಾರ ನೀಡಲು ಇಷ್ಟು ಪ್ರಮಾಣದ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಬೇಕು. ಆದಾಗ್ಯೂ, ಉಳಿದ ಭೂಮಿಯನ್ನು ಹಸ್ತಾಂತರಿಸುವಂತೆ ಆಡಳಿತಕ್ಕೆ ನಿರಂತರ ಮನವಿಗಳನ್ನು ಸಲ್ಲಿಸಿದ್ದರೂ ಸಹ 4,500 ಎಕರೆ ಸಿ & ಡಿ ಭೂಮಿಯನ್ನು ಮಾತ್ರ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ನಿರ್ವಹಣೆಯಿಲ್ಲದ ಸರ್ಕಾರಿ ಜಮೀನುಗಳಲ್ಲಿ ಹೆಚ್ಚಿದ ಬೆಂಕಿ ಅವಘಡಗಳಿಗೆ ಇದು ಕೂಡಾ ಕಾರಣವಾಗಿದೆ  ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಭೂಮಿಗಳು ಅರಣ್ಯ ಇಲಾಖೆ  ಸ್ವಾಧೀನದಲ್ಲಿಲ್ಲ ಕಾರಣ  ಗೊತ್ತುಪಡಿಸದ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಅಲ್ಲದೇ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಅತಿಕ್ರಮಣ ಜಮೀನುಗಳಲ್ಲಿ ಬೆಂಕಿಯ ರೇಖೆಗಳನ್ನು ಎಳೆಯಲು ಅನುಮತಿಸದ ಕಾರಣ ಹಲವಾರು ನಿವಾಸಿಗಳ ಕೂಗು ಹೆಚ್ಚಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿಎನ್ ಮೂರ್ತಿ ಹೇಳಿದರು. 

ಕೆಲವು ಅಗ್ನಿ ಅವಘಡಗಳು ಆಕಸ್ಮಿಕವಾಗಿದ್ದರೆ, ಇನ್ನು ಹಲವು ಕಿಡಿಗೇಡಿಗಳ ಕೆಲಸವಾಗಿರುತ್ತದೆ.  ಹುಲ್ಲುಗಾವಲು ಬೆಳಗಿಸುವ ಕಾರ್ಯದಲ್ಲಿ ನಿವಾಸಿಗಳು ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. "ಇದುವರೆಗೆ ವರದಿಯಾದ ಬೆಂಕಿ ಘಟನೆಗಳ ಪೈಕಿ ದುಬಾರೆ ಅರಣ್ಯ ಪ್ರದೇಶ ಮಾತ್ರ ಮೀಸಲು ಅರಣ್ಯ ವರ್ಗಕ್ಕೆ ಸೇರಿದೆ. ಸರ್ಕಾರಿ ಜಮೀನುಗಳಲ್ಲಿ ಬೆಂಕಿ ಹಚ್ಚುವ ಕೆಲ ಕಿಡಿಗೇಡಿಗಳನ್ನು ಗುರುತಿಸಿದ್ದು, ಪ್ರಕರಣಗಳನ್ನು ದಾಖಲಿಸಲಾಗಿದೆ, ಆದರೆ ಇನ್ನೂ ಬಂಧಿಸಲಾಗಿಲ್ಲ ಎಂದು ಅವರು ತಿಳಿಸಿದರು. 

ಅರಣ್ಯ ಇಲಾಖೆಗೆ ಸಿ & ಡಿ ಭೂಮಿಯನ್ನು ಹಸ್ತಾಂತರಿಸದಿದ್ದರೆ,  ಬೇಸಿಗೆ ವೇಳೆಯಲ್ಲಿ ಬೆಂಕಿ ಆಕಸ್ಮಿಕ ಘಟನೆಗಳು ವರದಿಯಾಗುತ್ತವೆ . ಅವು ಪರಿಸರ ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತವೆಯಾದರೂ, ಸಸ್ಯವರ್ಗದ ಹಾನಿ ಮುಂದಿನ ದಿನಗಳಲ್ಲಿ ಭೂಕುಸಿತಕ್ಕೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT