ಜೈನ ತೀರ್ಥಂಕರರ ಪ್ರತಿಮೆ ಪತ್ತೆ 
ರಾಜ್ಯ

ಬೆಳಗಾವಿಯಲ್ಲಿ 11ನೇ ಶತಮಾನದ ತೀರ್ಥಂಕರರ ಪ್ರತಿಮೆ ಪತ್ತೆ!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ 11ನೇ ಶತಮಾನದ ಜೈನ ತೀರ್ಥಂಕರ ಶ್ರೀ ಪಾರ್ಶ್ವನಾಥರ ಮೂರ್ತಿ ಪತ್ತೆಯಾಗಿದೆ. ಹೆಬ್ಬಾಳ ಗ್ರಾಮದ ಜೈನ ಮಂದಿರದ ಬಳಿ ಅಡಿಪಾಯ ಕಾಮಗಾರಿ ನಡೆಯುತ್ತಿರುವಾಗ ಈ ಪ್ರತಿಮೆ ಪತ್ತೆಯಾಗಿದೆ

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ 11ನೇ ಶತಮಾನದ ಜೈನ ತೀರ್ಥಂಕರ ಶ್ರೀ ಪಾರ್ಶ್ವನಾಥರ ಮೂರ್ತಿ ಪತ್ತೆಯಾಗಿದೆ. ಹೆಬ್ಬಾಳ ಗ್ರಾಮದ ಜೈನ ಮಂದಿರದ ಬಳಿ ಅಡಿಪಾಯ ಕಾಮಗಾರಿ ನಡೆಯುತ್ತಿರುವಾಗ ಈ ಪ್ರತಿಮೆ ಪತ್ತೆಯಾಗಿದೆ.

ತೀರ್ಥಂಕರರ ಪ್ರತಿಮೆಯ  ನೋಡಲು ಭಕ್ತರು ಮತ್ತು ಇತಿಹಾಸಕಾರರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಹೆಬ್ಬಾಳ ಗ್ರಾಮದಲ್ಲಿ 1800 ರ ದಶಕದ ಉತ್ತರಾರ್ಧದಲ್ಲಿ ನಿರ್ಮಿಸಲಾದ ಜೈನ ದೇವಾಲಯವಿದೆ, ಅಲ್ಲಿ ಆದಿನಾಥ ತೀರ್ಥಂಕರರ ಪ್ರತಿಮೆ ಇದೆ.

ಈ ಗ್ರಾಮವು 10 ನೇ ಶತಮಾನದಲ್ಲಿ ಪ್ರಮುಖ ಜೈನ ಕೇಂದ್ರವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.  ಅವರು ಈ ಪ್ರದೇಶದಲ್ಲಿ ಮತ್ತಷ್ಟು ಉತ್ಖನನಕ್ಕೆ ಒತ್ತಾಯಿಸುತ್ತಿದ್ದಾರೆ. ಗದಗದ ಇತಿಹಾಸ ತಜ್ಞ ಬಾಹುಬಲಿ ಹಂದೂರು ಹೇಳುವ ಪ್ರಕಾರ, ಹೆಬ್ಬಾಳದ ದೇವಸ್ಥಾನ ಪ್ರದೇಶದಲ್ಲಿ 11ನೇ ಶತಮಾನದಷ್ಟು ಹಳೆಯದಾಗಿದ್ದು, ಎರಡನೇ ಬಾರಿ ಪ್ರತಿಮೆ ಪತ್ತೆಯಾಗಿದೆ. ಇದಕ್ಕೂ ಮೊದಲು, 11 ನೇ ಶತಮಾನದ ಮತ್ತೊಂದು ಪ್ರತಿಮೆಯು ಇಲ್ಲಿ ಸಿಕ್ಕಿತ್ತು, ಇದನ್ನು ಮಹಾರಾಷ್ಟ್ರದ ಕೊಥಲಿಯಲ್ಲಿರುವ ಜೈನ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಹೆಬ್ಬಾಳ ಗ್ರಾಮವು ಮಧ್ಯಕಾಲೀನ ಕಾಲದಿಂದಲೂ ಪ್ರಮುಖ ಜೈನ ಕೇಂದ್ರವಾಗಿತ್ತು. ಚಾಲುಕ್ಯ ರಾಜರ ಅಧೀನದ ಪ್ರದೇಶವು 850 AD ಮತ್ತು 1230 AD ನಡುವೆ ಸವದತ್ತಿ ರುಟ್ ಕುಟುಂಬದಿಂದ ಆಳಲ್ಪಟ್ಟಿತು. ಕುಟುಂಬವು ಜೈನ ಧರ್ಮವನ್ನು ಸ್ವೀಕರಿಸಿತು, ಈ  ಪ್ರದೇಶದ ಪ್ರತಿ ಹಳ್ಳಿಯಲ್ಲಿ ದೇವಾಲಯಗಳನ್ನು ನಿರ್ಮಿಸಿತು. ಬೆಳಗಾವಿ ಜಿಲ್ಲೆಯಲ್ಲಿ ಜೈನ ಧರ್ಮದ ಶ್ರೀಮಂತ ಸಂಪ್ರದಾಯವನ್ನು ಇಂದಿಗೂ ಕಾಣಬಹುದು ಎಂದು ಹಂದೂರು ಹೇಳಿದರು.

ಪಾರ್ಶ್ವನಾಥನ ಪ್ರತಿಮೆಯ ಪತ್ತೆಯು ಇಲ್ಲಿ ಹಿಂದೆ ದೇವಾಲಯವಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ. ಬಹುಶಃ ದೇವಾಲಯವನ್ನು ನಾಶಪಡಿಸಲಾಗಿದೆ ಎಂದ ವಿವರಿಸಿದರು. ಈಗಿನ ಪ್ರತಿಮೆಯು ಸುಂದರವಾದ ಪ್ರಭಾವಳಿಯನ್ನು ಹೊಂದಿದೆ (ಪ್ರತಿಮೆಗಳ ಸುತ್ತಲೂ ಅಲಂಕಾರಿಕ ಉಂಗುರ). ಪ್ರತಿಮೆಯ ಉದ್ದವು 2.5 ಅಡಿಗಳಿದೆ.

ಪ್ರತಿಮೆಯ ತಯಾರಕರು ಪಾರ್ಶ್ವನಾಥ ಪೂರ್ಣದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು, ಅದು ಅದನ್ನು ತಯಾರಿಸಿದ ವಿಧಾನದಿಂದ ಸ್ಪಷ್ಟವಾಗುತ್ತದೆ. ಈ ಪ್ರದೇಶದಲ್ಲಿ ಮತ್ತಷ್ಟು ಉತ್ಖನನ ಮತ್ತು ಪ್ರತಿಮೆಗಳ ದಾಖಲಾತಿ ಅಗತ್ಯವಿದೆ ಹಂದೂರ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT