ಜೈನ ತೀರ್ಥಂಕರರ ಪ್ರತಿಮೆ ಪತ್ತೆ 
ರಾಜ್ಯ

ಬೆಳಗಾವಿಯಲ್ಲಿ 11ನೇ ಶತಮಾನದ ತೀರ್ಥಂಕರರ ಪ್ರತಿಮೆ ಪತ್ತೆ!

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ 11ನೇ ಶತಮಾನದ ಜೈನ ತೀರ್ಥಂಕರ ಶ್ರೀ ಪಾರ್ಶ್ವನಾಥರ ಮೂರ್ತಿ ಪತ್ತೆಯಾಗಿದೆ. ಹೆಬ್ಬಾಳ ಗ್ರಾಮದ ಜೈನ ಮಂದಿರದ ಬಳಿ ಅಡಿಪಾಯ ಕಾಮಗಾರಿ ನಡೆಯುತ್ತಿರುವಾಗ ಈ ಪ್ರತಿಮೆ ಪತ್ತೆಯಾಗಿದೆ

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ 11ನೇ ಶತಮಾನದ ಜೈನ ತೀರ್ಥಂಕರ ಶ್ರೀ ಪಾರ್ಶ್ವನಾಥರ ಮೂರ್ತಿ ಪತ್ತೆಯಾಗಿದೆ. ಹೆಬ್ಬಾಳ ಗ್ರಾಮದ ಜೈನ ಮಂದಿರದ ಬಳಿ ಅಡಿಪಾಯ ಕಾಮಗಾರಿ ನಡೆಯುತ್ತಿರುವಾಗ ಈ ಪ್ರತಿಮೆ ಪತ್ತೆಯಾಗಿದೆ.

ತೀರ್ಥಂಕರರ ಪ್ರತಿಮೆಯ  ನೋಡಲು ಭಕ್ತರು ಮತ್ತು ಇತಿಹಾಸಕಾರರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಹೆಬ್ಬಾಳ ಗ್ರಾಮದಲ್ಲಿ 1800 ರ ದಶಕದ ಉತ್ತರಾರ್ಧದಲ್ಲಿ ನಿರ್ಮಿಸಲಾದ ಜೈನ ದೇವಾಲಯವಿದೆ, ಅಲ್ಲಿ ಆದಿನಾಥ ತೀರ್ಥಂಕರರ ಪ್ರತಿಮೆ ಇದೆ.

ಈ ಗ್ರಾಮವು 10 ನೇ ಶತಮಾನದಲ್ಲಿ ಪ್ರಮುಖ ಜೈನ ಕೇಂದ್ರವಾಗಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ.  ಅವರು ಈ ಪ್ರದೇಶದಲ್ಲಿ ಮತ್ತಷ್ಟು ಉತ್ಖನನಕ್ಕೆ ಒತ್ತಾಯಿಸುತ್ತಿದ್ದಾರೆ. ಗದಗದ ಇತಿಹಾಸ ತಜ್ಞ ಬಾಹುಬಲಿ ಹಂದೂರು ಹೇಳುವ ಪ್ರಕಾರ, ಹೆಬ್ಬಾಳದ ದೇವಸ್ಥಾನ ಪ್ರದೇಶದಲ್ಲಿ 11ನೇ ಶತಮಾನದಷ್ಟು ಹಳೆಯದಾಗಿದ್ದು, ಎರಡನೇ ಬಾರಿ ಪ್ರತಿಮೆ ಪತ್ತೆಯಾಗಿದೆ. ಇದಕ್ಕೂ ಮೊದಲು, 11 ನೇ ಶತಮಾನದ ಮತ್ತೊಂದು ಪ್ರತಿಮೆಯು ಇಲ್ಲಿ ಸಿಕ್ಕಿತ್ತು, ಇದನ್ನು ಮಹಾರಾಷ್ಟ್ರದ ಕೊಥಲಿಯಲ್ಲಿರುವ ಜೈನ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಹೆಬ್ಬಾಳ ಗ್ರಾಮವು ಮಧ್ಯಕಾಲೀನ ಕಾಲದಿಂದಲೂ ಪ್ರಮುಖ ಜೈನ ಕೇಂದ್ರವಾಗಿತ್ತು. ಚಾಲುಕ್ಯ ರಾಜರ ಅಧೀನದ ಪ್ರದೇಶವು 850 AD ಮತ್ತು 1230 AD ನಡುವೆ ಸವದತ್ತಿ ರುಟ್ ಕುಟುಂಬದಿಂದ ಆಳಲ್ಪಟ್ಟಿತು. ಕುಟುಂಬವು ಜೈನ ಧರ್ಮವನ್ನು ಸ್ವೀಕರಿಸಿತು, ಈ  ಪ್ರದೇಶದ ಪ್ರತಿ ಹಳ್ಳಿಯಲ್ಲಿ ದೇವಾಲಯಗಳನ್ನು ನಿರ್ಮಿಸಿತು. ಬೆಳಗಾವಿ ಜಿಲ್ಲೆಯಲ್ಲಿ ಜೈನ ಧರ್ಮದ ಶ್ರೀಮಂತ ಸಂಪ್ರದಾಯವನ್ನು ಇಂದಿಗೂ ಕಾಣಬಹುದು ಎಂದು ಹಂದೂರು ಹೇಳಿದರು.

ಪಾರ್ಶ್ವನಾಥನ ಪ್ರತಿಮೆಯ ಪತ್ತೆಯು ಇಲ್ಲಿ ಹಿಂದೆ ದೇವಾಲಯವಿತ್ತು ಎಂಬುದನ್ನು ಸಾಬೀತುಪಡಿಸುತ್ತದೆ. ಬಹುಶಃ ದೇವಾಲಯವನ್ನು ನಾಶಪಡಿಸಲಾಗಿದೆ ಎಂದ ವಿವರಿಸಿದರು. ಈಗಿನ ಪ್ರತಿಮೆಯು ಸುಂದರವಾದ ಪ್ರಭಾವಳಿಯನ್ನು ಹೊಂದಿದೆ (ಪ್ರತಿಮೆಗಳ ಸುತ್ತಲೂ ಅಲಂಕಾರಿಕ ಉಂಗುರ). ಪ್ರತಿಮೆಯ ಉದ್ದವು 2.5 ಅಡಿಗಳಿದೆ.

ಪ್ರತಿಮೆಯ ತಯಾರಕರು ಪಾರ್ಶ್ವನಾಥ ಪೂರ್ಣದ ಬಗ್ಗೆ ಅಪಾರ ಜ್ಞಾನವನ್ನು ಹೊಂದಿದ್ದರು, ಅದು ಅದನ್ನು ತಯಾರಿಸಿದ ವಿಧಾನದಿಂದ ಸ್ಪಷ್ಟವಾಗುತ್ತದೆ. ಈ ಪ್ರದೇಶದಲ್ಲಿ ಮತ್ತಷ್ಟು ಉತ್ಖನನ ಮತ್ತು ಪ್ರತಿಮೆಗಳ ದಾಖಲಾತಿ ಅಗತ್ಯವಿದೆ ಹಂದೂರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT