ರಾಜ್ಯ

ನಿರ್ಮಾಪಕ ಉಮಾಪತಿ ಗೌಡ ವಿರುದ್ಧ ನಟ ದರ್ಶನ್ ಪ್ರಚಾರ: ಸತೀಶ್ ರೆಡ್ಡಿ ಪರ 'ಸಾರಥಿ' ಮತಯಾಚನೆ

Shilpa D

ಬೆಂಗಳೂರು: ಬೊಮ್ಮನಹಳ್ಳಿಯಿಂದ ನಾಲ್ಕನೇ ಅವಧಿಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ನಟ ದರ್ಶನ್ ಪ್ರಚಾರ ನಡೆಸಿದರು.

ಕಾಂಗ್ರೆಸ್‌ನಿಂದ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಸ್ಪರ್ಧಿಸಿದ್ದಾರೆ. ಉಮಾಪತಿ ಗೌಡ ನಿರ್ಮಾಣದ ಚಿತ್ರವೊಂದರಲ್ಲಿ ದರ್ಶನ್ ನಟಿಸಿದ್ದರು.  ಸದ್ಯ ಉಮಾಪತಿ ಶ್ರೀನಿವಾಸಗೌಡರ ವಿರುದ್ಧ ಸತೀಶ್ ರೆಡ್ಡಿ ಪರ ದರ್ಶನ್ ಮತಯಾಚನೆ ಮಾಡುತ್ತಿದ್ದಾರೆ.

ಚುನಾವಣೆಯಲ್ಲಿ ರೆಡ್ಡಿ ಅವರನ್ನು ಆಯ್ಕೆ ಮಾಡುವಂತೆ ದರ್ಶನ್ ಮತದಾರರಲ್ಲಿ ಮನವಿ ಮಾಡಿದರು. ಭಾನುವಾರ, ದೇವರಚಿಕ್ಕನಗಲ್ಲಿ, ಹೊಂಗಸಂದ್ರ, ಬೊಮ್ಮನಹಳ್ಳಿ, ರೂಪೇನಗ್ರಹಾರ, ಮಂಗಮನಪಾಳ್ಯ ಸೇರಿದಂತೆ ಹಲವೆಡೆ ಪ್ರಚಾರ ನಡೆಸಿದರು. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು.

ಬಿಜೆಪಿ ಬೆಂಬಲಿಗರು ಮತ್ತು ದರ್ಶನ್ ಅವರ ಅಭಿಮಾನಿಗಳು ಭಾರೀ ಮಟ್ಟದಲ್ಲಿ ಸೇರಿದ್ದರು, ಇದು ಮತದಾನದ ದಿನದಂದು ನನಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಸತೀಶ್ ರೆಡ್ಡಿ ಹೇಳಿದರು.

ದರ್ಶನ್ 9: 30 ರ ಸುಮಾರಿಗೆ ಪ್ರಚಾರ ವಾಹನವನ್ನು ಹತ್ತಿದರು ಮತ್ತು ಸಂಜೆಯವರೆಗೂ ಅವರು ಬಿಜೆಪಿ ಅಭ್ಯರ್ಥಿಯ ಜೊತೆಗೂಡಿ ಹಲವು ಸ್ಥಳಗಳಲ್ಲಿ ಮತಯಾಚಿಸಿದರು.

ಕಳೆದ ಎರಡು ಚುನಾವಣೆಗಳಲ್ಲಿ ಸತೀಶ್ ರೆಡ್ಡಿ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿದಿರಲಿಲ್ಲ, ಆದರೆ ಈ ಬಾರಿ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಅವರನ್ನು ಕಣಕ್ಕಿಳಿಸಿದ್ದಾರೆ.

ನಾಲ್ಕು ಲಕ್ಷ ಮತದಾರರಿರುವ ಬೊಮ್ಮನಹಳ್ಳಿಯಲ್ಲೇ ಸುಮಾರು 1.3 ಲಕ್ಷ  ಒಕ್ಕಲಿಗ ಮತದಾರರಿದ್ದು, ಒಕ್ಕಲಿಗ ಮತಗಳನ್ನು ದಕ್ಕಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.  ಹೀಗಾಗಿ ಎಲ್ಲಾ ವರ್ಗದ ಬೆಂಬಲ ಪಡೆಯಲು ಬಿಜೆಪಿ ಅಭ್ಯರ್ಥಿಗಳು ಎಲ್ಲ ಹರ ಸಾಹಸ ಪಡುತ್ತಿದ್ದಾರೆ.

SCROLL FOR NEXT