ಮಟ್ಟು ಗುಳ್ಳ 
ರಾಜ್ಯ

ಮಟ್ಟು ಗುಳ್ಳ ಬೆಳೆಯಲ್ಲಿ ಬಂಪರ್ ಇಳುವರಿ: ಉಡುಪಿ ನಗರದ ಮಾರುಕಟ್ಟೆಗೆ ಎಂಟ್ರಿ; ಸಿಗುತ್ತಿಲ್ಲ ನಿರೀಕ್ಷಿತ ಬೆಲೆ!

ವಿಶಿಷ್ಟವಾದ ದುಂಡನೆಯ ಆಕಾರದ ಮತ್ತು ಜಿಐ ಟ್ಯಾಗ್ ಮಾಡಲಾದ ಮಟ್ಟು ಗುಳ್ಳ ಸಾಟಿಯಿಲ್ಲದ ರುಚಿ ಹೊಂದಿರುವ ಬದನೆಕಾಯಿ ವಿಧಾನವಾಗಿದೆ.

ಉಡುಪಿ: ವಿಶಿಷ್ಟವಾದ ದುಂಡನೆಯ ಆಕಾರದ ಮತ್ತು ಜಿಐ ಟ್ಯಾಗ್ ಮಾಡಲಾದ ಮಟ್ಟು ಗುಳ್ಳ ಸಾಟಿಯಿಲ್ಲದ ರುಚಿ ಹೊಂದಿರುವ ಬದನೆಕಾಯಿ ವಿಧಾನವಾಗಿದೆ.

ಈ ಮಟ್ಟು ಗುಳ್ಳ ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಮಾರುಕಟ್ಟೆಗಳನ್ನು ಪ್ರವೇಶಿಸಿದೆ. ಉಡುಪಿ ಜಿಲ್ಲೆಯ ಬಹುತೇಕ ತರಕಾರಿ ಮಾರುಕಟ್ಟೆಗಳಲ್ಲಿ ಹಾಗೂ ಪಕ್ಕದ ದ.ಕ.ಜಿಲ್ಲೆಯಲ್ಲಿಯೂ ಮಾರಾಟವಾಗಿರುವುದರಿಂದ ಮಟ್ಟು ಗುಳ್ಳದ ವ್ಯಾಪಾರ ಜೋರಾಗಿದೆ.

ಮಟ್ಟು ಗುಳ್ಳ ಬೆಳೆಗಾರರ ಸಂಘದ ಮೂಲಗಳ ಪ್ರಕಾರ, ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಎರಡು ಟನ್ ಬದನೆಯನ್ನು ಮಾರಾಟ ಮಾಡಲಾಗುತ್ತಿದೆ. ಕಡಿಮೆ ಮಳೆ, ಪ್ರವಾಹದ ಯಾವುದೇ ನಿದರ್ಶನಗಳು ಈ ವರ್ಷ ಇಳುವರಿ ಹೆಚ್ಚಳಕ್ಕೆ ಕಾರಣವಾಗದಿದ್ದರೂ, ಕೆಜಿಗೆ 90 ರೂ. ಇದೆ.

ಹೀಗಾಗಿ ಬೆಳೆಗಾರರಿಗೆ ಲಾಭದಾಯಕವಾಗಿಲ್ಲ. ಈ ವರ್ಷ ಜುಲೈ ತಿಂಗಳಿನಲ್ಲಿ ಮಟ್ಟು ಗುಳ್ಳ ಕೆ.ಜಿ.ಗೆ 180 ರೂ.ಗೆ ಮಾರಾಟವಾಗಿತ್ತು, ಸದ್ಯ ಹೆಚ್ಚಿನ ಇಳುವರಿ ಕಂಡುಬಂದಿದೆ, ಮಾರುಕಟ್ಟೆಗೆ ಪೂರೈಕೆ ಹೆಚ್ಚಾಯಿತು. ಬೇಡಿಕೆ-ಪೂರೈಕೆ ತಾಳೆಯಾಗದ ಕಾರಣ ಬೆಲೆ ಕುಸಿಯಿತು. ಪರಿಸ್ಥಿತಿ ಹೀಗಿರುವಾಗ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗಬಹುದೆಂದು ಬೆಳೆಗಾರರು ಸಕಾರಾತ್ಮಕ ಮನೋಭಾವ ಹೊಂದಿದ್ದಾರೆ.

ಬೆಂಗಳೂರು ಮತ್ತು ಮುಂಬೈ ಮಾರುಕಟ್ಟೆಗೆ ತಡವಾಗಿ ಬೆಳೆ ಬಂದಿದ್ದು, ಪೂರೈಕೆ-ಬೇಡಿಕೆ ತಾಳೆಯಾಗುತ್ತಿಲ್ಲ ಎಂದು ಮಟ್ಟು ಗ್ರಾಮದ ಬೆಳೆಗಾರ ಲಕ್ಷ್ಮಣ್ ಮಟ್ಟು ಹೇಳಿದರು. ಖರೀದಿದಾರರು ಜಾಗರೂಕರಾಗಿರಬೇಕು ಮತ್ತು ‘ಮಟ್ಟು ಗುಳ್ಳ ಬೆಳೆಗಾರರ ಸಂಘ’ ಎಂಬ ಲಾಂಛನದೊಂದಿಗೆ ಅಧಿಕೃತತೆಯ ಸ್ಟಿಕ್ಕರ್ ಅನ್ನು ಹೊಂದಿರುವ ಅಧಿಕೃತ ಮಟ್ಟು ಗುಳ್ಳವನ್ನು ಮಾತ್ರ ಖರೀದಿಸಬೇಕು ಎಂದಿದ್ದಾರೆ.

ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷ ಸುನಿಲ್ ಡಿ ಬಂಗೇರ ಮಾತನಾಡಿ, ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಇಳುವರಿ ಹೆಚ್ಚು ಮತ್ತು ಬೇಡಿಕೆಯೂ ಇದೆ. ಅನೇಕ ಗ್ರಾಹಕರು ಅದರ ಮೃದುವಾದ ತಿರುಳು ಮತ್ತು ಸಾಟಿಯಿಲ್ಲದ ರುಚಿಯನ್ನು ಸವಿದಿದ್ದಾರೆ ಹೀಗಾಗಿ ಅವರು ಅದನ್ನು ಖರೀದಿಸುತ್ತಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT