ರಾಜ್ಯ

ಮಳೆ ಅವಾಂತರ: ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಸಹಕಾರನಗರ ನಿವಾಸಿಗಳ ಆಕ್ರೋಶ

Shilpa D

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಗೆ ಹಲವು ಮನೆಗಳು, ಅಂಗಡಿಗಳು, ರಸ್ತೆಗಳು ಜಲಾವೃತಗೊಂಡಿದ್ದರಿಂದ ಸಹಕಾರನಗರದ ನಿವಾಸಿಗಳು ಕಂದಾಯ ಸಚಿವ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಬೆಳಗ್ಗೆ ಬಿಬಿಎಂಪಿ ಕಚೇರಿಯಲ್ಲಿದ್ದ ಕೃಷ್ಣ ಬೈರೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು., ಮಳೆನೀರು ಚರಂಡಿಯನ್ನು ಒತ್ತುವರಿ ಮಾಡಿಕೊಂಡಿರುವ ಆರೋಪದ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಪ್ರತಿ ಬಾರಿ ಮಳೆ ಬಂದಾಗ ಈ ಪ್ರದೇಶ ಜಲಾವೃತವಾಗುತ್ತಿದೆ ಎಂದು ಆರೋಪಿಸಿದರು. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ ನಂತರ ಪ್ರತಿಭಟನಾ ನಿರತರು ಶಾಂತಗೊಳಿಸಿದರು.

ನೀರಿನಲ್ಲಿ ಮುಳುಗಿದ್ದ ಶಸ್ತ್ರಾಸ್ತ್ರಗಳನ್ನು ಒಣಗಿಸಲು ಪೊಲೀಸರು ಬಿಸಿಲಿನ ಕೆಳಗೆ ಇಟ್ಟಿರುವ ದೃಶ್ಯ.

ಪ್ರತಿ ಬಾರಿ ಇಲ್ಲಿ ಹೆಚ್ಚು ಮಳೆಯಾದಾಗ, ಪ್ರವಾಹಕ್ಕೆ ಒಳಗಾಗುವ ಪ್ರದೇಶಗಳಿವೆ. ಕ್ಷೇತ್ರದಲ್ಲಿ ಕ್ಷಿಪ್ರ ಅಭಿವೃದ್ಧಿಯಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಮೂಲಸೌಕರ್ಯಗಳನ್ನು ನವೀಕರಿಸಲಾಗಿಲ್ಲ. ಮಳೆನೀರನ್ನು ಸಾಗಿಸುವ  ಚರಂಡಿಗಳು ಕಸ, ಪ್ಲಾಸ್ಟಿಕ್ ಕವರ್‌ಗಳು, ಎಲೆಗಳು ಮತ್ತು ಕೊಂಬೆಗಳಿಂದ ಇತರ ತ್ಯಾಜ್ಯಗಳಿಂದ ಮುಚ್ಚಿಹೋಗಿವೆ. ಇವುಗಳನ್ನು ನಿಯಮಿತವಾಗಿ ಸ್ವಚ್ಛ ಮಾಡಲಾಗುತ್ತಿಲ್ಲ. ಮಳೆ ನೀರು ಹರಿದು ಹೋಗಲು ಸಾಧ್ಯವಾಗದೆ ಅಕ್ಕಪಕ್ಕದ ಮನೆ, ಅಂಗಡಿಗಳಿಗೆ  ಮನೆ ನೀರು ನುಗ್ಗುತ್ತಿವೆ ಎನ್ನುತ್ತಾರೆ ಸ್ಥಳೀಯ ನಿವಾಸಿ ವೆಂಕಟೇಶ್ ಎಂಬುವರು ಆರೋಪಿಸಿದ್ದಾರೆ.

ಇದರ ಹೊರತಾಗಿ, ಉಳ್ಳಾಲದಲ್ಲಿರುವ ಸಿಟಿ ಆರ್ಮ್ಡ್ ರಿಸರ್ವ್ (ಪಶ್ಚಿಮ) ಮಳೆ ನೀರಿನಿಂದ ಜಲಾವೃತಗೊಂಡಿದ್ದು,  ಶಸ್ತ್ರಾಗಾರವು ಮುಳುಗಿತು. ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಸಿಎಆರ್‌ ನಿಲ್ದಾಣದಲ್ಲಿ ಸಂಗ್ರಹವಾಗಿದ್ದ ಶಸ್ತ್ರಾಗಾರದ ಜತೆಗೆ ಪ್ರಮುಖ ಕಡತಗಳು, ದಾಖಲೆಗಳು ಕೂಡ ನೀರಿನಲ್ಲಿ ಮುಳುಗಿವೆ.

ರೈಫಲ್‌ಗಳು ಮತ್ತು ಮೆಷಿನ್ ಗನ್‌ಗಳು ಸೇರಿದಂತೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿರುವ ಶಸ್ತ್ರಾಸ್ತ್ರಗಳನ್ನು ಒಣಗಿಸಲು ಪೊಲೀಸರು ಬಿಸಿಲಿನ ಕೆಳಗೆ ಇಡುತ್ತಿರುವ ವೀಡಿಯೊಗಳು ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

SCROLL FOR NEXT