ರಾಜ್ಯ

ಉತ್ತರ ಕನ್ನಡ: ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಆತ್ಮಹತ್ಯೆಯಿಂದ ನೊಂದು ಪ್ರಾಣಕಳೆದುಕೊಂಡ ತಾಯಿ-ಮಗಳು

Ramyashree GN

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳ ನಂತರ ಮಹಿಳೆ ಮತ್ತು ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಗಳವಾರ ನಡೆದಿದೆ. 

ಮೃತರನ್ನು 50 ವರ್ಷದ ನರ್ಮದಾ ಮತ್ತು ಅವರ 25 ವರ್ಷದ ಮಗಳು ದಿವ್ಯಾ ಎಂದು ಗುರುತಿಸಲಾಗಿದೆ. ಶಿರಸಿ ತಾಲೂಕಿನ ತರಗೋಡು ಬೆಳಾಲೆ ಗ್ರಾಮದಲ್ಲಿ ಘಟನೆ ವರದಿಯಾಗಿದೆ.

ನರ್ಮದಾ ಅವರ 22 ವರ್ಷದ ಮಗ ಬಾಲಚಂದ್ರ ಹೆಗಡೆ ಅವರು ಕೋವಿಡ್ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಕೋವಿಡ್ ನಂತರವೂ ಅವರು ಗುಣಮುಖರಾಗಿರಲಿಲ್ಲ. ನರ್ಮದಾ ಮತ್ತು ದಿವ್ಯಾ ಅವರ ಚಿಕಿತ್ಸೆಗಾಗಿ ದಿನನಿತ್ಯ ಓಡಾಡುತ್ತಿದ್ದರು.

ಬಾಲಚಂದ್ರ ಹೆಗಡೆ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮತ್ತೆ ಗ್ರಾಮಕ್ಕೆ ಬಂದು ಮನೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದರು. ಮಂಗಳವಾರ ಬೆಳಗ್ಗೆ ಮನೆಯಲ್ಲಿ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಬಾಲಚಂದ್ರ ಹೆಗಡೆ ಅವರ ಪಾರ್ಥಿವ ಶರೀರದ ಮುಂದೆ ರೋದಿಸುತ್ತಿದ್ದ ತಾಯಿ ಮತ್ತು ಮಗಳು ಮನೆಯೊಳಗೆ ಹೋಗಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿರಸಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

SCROLL FOR NEXT