ಬೆಂಗಳೂರು ವಿಮಾನ ನಿಲ್ದಾಣ 
ರಾಜ್ಯ

'ನಾನು ಟೆರರಿಸ್ಟ್, ಬಾಂಬ್ ಇಟ್ಟಿದ್ದೇನೆ': ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬೆದರಿಕೆ, ಬಾಲಕನ ಹುಡುಗಾಟಕ್ಕೆ ಪೇಚಿಗೆ ಸಿಲುಕಿದ ಪೋಷಕರು!

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಹೆಲ್ಪ್‌ ಡೆಸ್ಕ್‌ಗೆ ''ಬಾಂಬ್‌ ಇದೆ ಎಚ್ಚರವಾಗಿರಿ'' ಎಂದು ವಾಟ್ಸ್ಯಾಪ್‌ ಸಂದೇಶ ಕಳುಹಿಸಿ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ. ಆಗಸ್ಟ್ 28ರಂದು ಬೆಳಗ್ಗೆ 11.43ರ ಸುಮಾರಿಗೆ ಪ್ರಯಾಣಿಕರ ಹೆಲ್ಪ್‌ಲೈನ್‌ನ ವಾಟ್ಸ್ಯಾಪ್‌ ನಂಬರ್‌ಗೆ ಅಪರಿಚಿತ ನಂಬರ್‌ನಿಂದ ''ನಾನು ಟೆರರಿಸ್ಟ್‌, ಏರ್‌ಪೋರ್ಟ್‌ನಲ್ಲಿ ಬಾಂಬ್‌ ಇದೆ. ಎಚ್ಚರವಾಗಿರಿ'' ಎಂದು ನಗುವ ಇಮೋಜಿ ಸಂದೇಶ ಬಂದಿತ್ತು. ಈ ಸಂದೇಶ ಗಮನಿಸಿದ ಟರ್ಮಿನಲ್‌ ಸಿಬ್ಬಂದಿ ಕೆಲಕಾಲ ಆತಂಕಗೊಂಡಿದ್ದರು.

ಆದರೆ, ಕೆಲವೇ ನಿಮಿಷಗಳಲ್ಲಿ ಅದೇ ನಂಬರ್‌ನಿಂದ ''ದಯವಿಟ್ಟು ಕ್ಷಮಿಸಿ ನನ್ನ ಮಗನ ಬಳಿ ಮೊಬೈಲ್‌ ಕೊಟ್ಟಿದ್ದು ಅವನೇ ಈ ರೀತಿ ಸಂದೇಶ ಕಳುಹಿಸಿದ್ದಾನೆ'' ಎಂಬ ಸಂದೇಶ ಬಂದಿತ್ತು. ಜತೆಗೆ, ಕ್ಷಮೆ ಕೋರಿ ಮತ್ತೊಂದು ಸಂದೇಶ ಬಂದ ಬಳಿಕ ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಈ ಬೆದರಿಕೆ ಸಂದೇಶ ಸಂಬಂಧ ಸಂದೇಶ ಕಳುಹಿಸಿದ ನಂಬರ್‌ ಉಲ್ಲೇಖಿಸಿ ಏರ್‌ಪೋರ್ಟ್‌ ಟರ್ಮಿನಲ್‌ ಸಿಬ್ಬಂದಿ ಮೊಹಮದ್‌ ಜಾಹಿರ್‌ ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕೋಲ್ಕತ್ತಾದಿಂದ ಬಂದ ಸಂದೇಶ
ಬಾಂಬ್‌ ಬೆದರಿಕೆ ಸಂದೇಶ ಕೋಲ್ಕತ್ತಾ ಮೂಲದ ಮಹಿಳೆ ಮೊಬೈಲ್‌ ನಂಬರ್‌ನಿಂದ ಬಂದಿದ್ದು, ಅವರ ಮಗ ಸಂದೇಶ ಕಳುಹಿಸಿದ್ದ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ಅಲ್ಲಿನ ಸ್ಥಳೀಯ ಪೊಲೀಸರು ಕೂಡ ಮೊಬೈಲ್‌ ನಂಬರ್‌ ಟ್ರೇಸ್‌ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ.

“ಈ ಸಂದೇಶವನ್ನು ಪಶ್ಚಿಮ ಬಂಗಾಳದಿಂದ ಕಳುಹಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಪ್ರಕರಣ ಸಂಬಂಧ ಇನ್ನೂ ಯಾರ ಬಂಧನವೂ ಆಗಿಲ್ಲ. ಎರಡೂ ಸಂದೇಶಗಳ ಹಿಂದೆ ಒಂದೇ ವ್ಯಕ್ತಿ ಇದ್ದಾನೆಯೇ ಅಥವಾ ಅದು ಪೋಷಕರು ಮತ್ತು ಮಗನೇ ಎಂಬುದು ಸ್ಪಷ್ಟವಾಗಿಲ್ಲ. ಯಾರ ಹೆಸರಿನಲ್ಲಿ ಸಿಮ್ ಕಾರ್ಡ್ ನೀಡಲಾಗಿದೆಯೋ ಅವರ ವಿಳಾಸವನ್ನು ನಾವು ಪಡೆದುಕೊಂಡಿದ್ದೇವೆ. ಪೋಷಕರು ತಂದೆ ಅಥವಾ ತಾಯಿಯೇ ಎಂಬುದು ಸ್ಪಷ್ಟವಾಗಿಲ್ಲ. ಶಂಕಿತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ತನಿಖೆಯ ಭಾಗವಾಗಿರುವ ಅಧಿಕಾರಿ ತಿಳಿಸಿದ್ದಾರೆ.

TNIE ಬೆದರಿಕೆ ಸಂದೇಶವನ್ನು ಕಳುಹಿಸಿದ ಸಂಖ್ಯೆಯನ್ನು ಸಂಪರ್ಕಿಸಿದಾಗ, ಹೌರಾದ ವ್ಯಕ್ತಿಯೊಬ್ಬರು ಸಂದೇಶ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. “ನಾನು ಸರಳ ವ್ಯಕ್ತಿ ಮತ್ತು ಅಪರಾಧಿ ಅಲ್ಲ, ಆದರೆ ನನ್ನ ಫೋನ್‌ನಿಂದ ಕೆಲವು ಅನಿರೀಕ್ಷಿತ ಸಂಗತಿಗಳು ಸಂಭವಿಸಿವೆ ಅಥವಾ ನನ್ನ ಸಂಖ್ಯೆಯೊಂದಿಗೆ ಇರಬಹುದು, ಅದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ನನ್ನ ಕಡೆಯಿಂದ ಭವಿಷ್ಯದಲ್ಲಿ ಈ ರೀತಿಯ ವಿಷಯ ಪುನರಾವರ್ತನೆಯಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. 

ಬಿಐಎಎಲ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT