ಹೆಬ್ಬಾವು-ಸತ್ತ ಮಂಗಗಳು 
ರಾಜ್ಯ

ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಕಳ್ಳಸಾಗಣೆ: 70 ಕಿಂಗ್ ಕೋಬ್ರಾ ಮತ್ತು ಹೆಬ್ಬಾವುಗಳ ರಕ್ಷಣೆ, 6 ಮಂಗಗಳ ಸಾವು

ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರು: ಅಳಿವಿನಂಚಿನಲ್ಲಿರುವ ವನ್ಯಜೀವಿಗಳನ್ನು ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.

ಬ್ಯಾಂಕಾಕ್‌ನಿಂದ ಬಂದ ಏರ್ ಏಷ್ಯಾ ವಿಮಾನದಲ್ಲಿ ಲಗೇಜ್ ಅನ್ನು ತಡೆದ ಅಧಿಕಾರಿಗಳು 78 ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳಲ್ಲಿ ಆರು ಕಪುಚಿನ್ ಮಂಗಗಳು ಸತ್ತಿದ್ದು, ಎಲ್ಲಾ ಹೆಬ್ಬಾವುಗಳು ಮತ್ತು ಕಿಂಗ್ ಕೋಬ್ರಾಗಳನ್ನು ಜೀವಂತವಾಗಿ ರಕ್ಷಿಸಲಾಗಿದೆ. ಹದಿನೈದು ದಿನಗಳಲ್ಲಿ ಇದೇ ಏರ್ ಏಷ್ಯಾ ರಾತ್ರಿ ವಿಮಾನದಲ್ಲಿ ಥಾಯ್ಲೆಂಡ್‌ನಿಂದ ಕಳ್ಳಸಾಗಣೆಯಾಗುತ್ತಿರುವ ಕಾಡು ಪ್ರಾಣಿಗಳ ಎರಡನೇ ಪ್ರಕರಣ ಇದಾಗಿದೆ.

ಲಗೇಜ್ ಪಡೆಯಲು ಯಾರೂ ಮುಂದೆ ಬಂದಿಲ್ಲ ಎಂದು ಹಿರಿಯ ಕಸ್ಟಮ್ಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೆಪ್ಟೆಂಬರ್ 6ರಂದು ರಾತ್ರಿ 10.30ಕ್ಕೆ ಆಗಮಿಸಿದ ವಿಮಾನದಲ್ಲಿ (ಎಫ್‌ಡಿ 137) ಹಕ್ಕು ಪಡೆಯದ ಸಾಮಾನು ಸರಂಜಾಮುಗಳಲ್ಲಿ ಪ್ರಾಣಿಗಳು ಕಂಡುಬಂದಿವೆ. ವಿಮಾನದಲ್ಲಿ ಆಗಮಿಸಿದ್ದ ಯುವತಿ ಮತ್ತು ಆಕೆಯ ಸಹಚರನ ವಿರುದ್ಧ ಶಂಕೆ ವ್ಯಕ್ತವಾಗಿದ್ದು ಇಬ್ಬರೂ ಭಾರತೀಯ ಪ್ರಜೆಗಳಾಗಿದ್ದಾರೆ. ಪ್ರಸ್ತುತ ಅವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಾವು ಸಿಸಿಟಿವಿ ಸ್ಕ್ಯಾನ್ ಮಾಡುತ್ತಿದ್ದೇವೆ. ಪ್ರಯಾಣಿಕರ ಹಿನ್ನೆಲೆಯನ್ನು ಗುರುತಿಸಲು ವಿಮಾನಯಾನ ಸಂಸ್ಥೆಗಳ ಸಹಾಯವನ್ನು ಕೋರಿದ್ದೇವೆ ಎಂದರು.

ಅಧಿಕೃತ ಪ್ರಕಟಣೆಯ ಪ್ರಕಾರ, ವಿವಿಧ ಬಣ್ಣಗಳ 55 ಬಾಲ್ ಹೆಬ್ಬಾವುಗಳನ್ನು ಒಳಗೊಂಡಿರುವ ಒಟ್ಟು 78 ಪ್ರಾಣಿಗಳು ಮತ್ತು 17 ಕಿಂಗ್ ಕೋಬ್ರಾಗಳು ಜೀವಂತವಾಗಿ ಮತ್ತು ಸಕ್ರಿಯ ಸ್ಥಿತಿಯಲ್ಲಿ ಕಂಡುಬಂದಿವೆ. ಆರು ಕಪುಚಿನ್ ಕೋತಿಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕಸ್ಟಮ್ಸ್ ಆಕ್ಟ್, 1962ರ ಸೆಕ್ಷನ್ 110ರ ಅಡಿಯಲ್ಲಿ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸತ್ತ ಮಂಗಗಳನ್ನು ಸರಿಯಾದ ನೈರ್ಮಲ್ಯ ಕ್ರಮಗಳೊಂದಿಗೆ ವಿಲೇವಾರಿ ಮಾಡಲಾಗಿದೆ. ಜೀವಂತ ಪ್ರಾಣಿಗಳನ್ನು ಮೂಲದ ದೇಶಕ್ಕೆ ಗಡೀಪಾರು ಮಾಡಲಾಗಿದೆ. 'ಎಲ್ಲಾ 78 ಪ್ರಾಣಿಗಳನ್ನು CITESನ ಅನುಬಂಧ II ಮತ್ತು ವನ್ಯಜೀವಿ ಸಂರಕ್ಷಣಾ ಕಾಯಿದೆ, 1972ರ I ಮತ್ತು IVರ ಅಡಿಯಲ್ಲಿ ಪಟ್ಟಿಮಾಡಲಾಗಿದೆ ಎಂದು ಪ್ರಕಟಣೆ ಸೇರಿಸಲಾಗಿದೆ.

ಆಗಸ್ಟ್ 21ರಂದು ವಿಮಾನ ನಿಲ್ದಾಣ ಕಸ್ಟಮ್ಸ್ ಎರಡು ಟ್ರಾಲಿ ಬ್ಯಾಗ್‌ಗಳಲ್ಲಿ ಹೆಬ್ಬಾವು, ಆಮೆಗಳು, ಮೊಸಳೆ, ಗೋಸುಂಬೆ ಮತ್ತು ಇಗ್ವಾನಾ ಮತ್ತು ಸತ್ತ ಕಾಂಗರೂ ಸೇರಿದಂತೆ ಒಟ್ಟು 234 ಕಾಡು ಪ್ರಾಣಿಗಳು ಪತ್ತೆಯಾಗಿದ್ದವು. ದೇಶದ ವಿಮಾನ ನಿಲ್ದಾಣಗಳಾದ್ಯಂತದ ಇದು ಸಾಮಾನ್ಯ ಸನ್ನಿವೇಶವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದು ಈ ಸಂಬಂಧ ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ