ರಾಜ್ಯ

ಗ್ರಾಚ್ಯುಟಿಯಲ್ಲಿ ಉದ್ಯೋಗ ನೀಡುವವರು ಮನಸ್ಸಿಗೆ ಬಂದಂತೆ ತಡೆಹಿಡಿಯಲು ಸಾಧ್ಯವಿಲ್ಲ: ಹೈಕೋರ್ಟ್

Srinivas Rao BV

ನವದೆಹಲಿ: ನಿವೃತ್ತ ಉದ್ಯೋಗಿಯೋರ್ವರಿಗೆ ಶೇ.10 ರಷ್ಟು ಬಡ್ಡಿ ಸಮೇತ 4.09 ಲಕ್ಷ ರೂಪಾಯಿ ಗ್ರಾಚ್ಯುಟಿ ಹಣವನ್ನು ಪಾವತಿ ಮಾಡುವಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ, ಕರ್ನಾಟಕದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದೆ. 

2007, ಮಾ.31 ರಂದು ನಿವೃತ್ತರಾಗಿದ್ದ ಬೆಳಗಾವಿ ಮೂಲದ ಬಾಬು ಎಂಬುವವರು ಗ್ರಾಚುಟಿಗಾಗಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಈ ಆದೇಶ ಪ್ರಕಟಿಸಿದೆ. 

ಈ ಆದೇಶ ಪತ್ರ ರವಾನೆಯಾದ ದಿನದಿಂದ 10 ದಿನಗಳ ಒಳಗೆ ಅರ್ಜಿದಾರರಿಗೆ ಗ್ರಾಚ್ಯುಟಿ ಪಾವತಿಯಾಗದೇ ಇದ್ದಲ್ಲಿ, ಶೇ.10 ರಷ್ಟು ಬಡ್ಡಿಯ ಜೊತೆಗೆ, ವಿಳಂಬವಾಗಿ ಹಣ ನೀಡುವ ದಿನದವರೆಗೂ ಪ್ರತಿ ದಿನವೂ 1,000 ರೂಪಾಯಿ ಸೇರಿಸಿ ಸಂತ್ರಸ್ತರಿಗೆ ಗ್ರಾಚ್ಯುಟಿ ಹಣ ನೀಡಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

"ಗ್ರಾಚ್ಯುಟಿಯು ಉದ್ಯೋಗದಾತರ ಮನಸೋ ಇಚ್ಛೆ ಮೇರೆಗೆ ತಡೆಹಿಡಿಯಬಹುದಾದ ವರದಾನವಲ್ಲ. ಸಂತ್ರಸ್ತ ವ್ಯಕ್ತಿಗೆ ಉದ್ಯೋಗ ನೀಡಿರುವುದು ಕರ್ನಾಟಕ ಸರ್ಕಾರದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಕಾರ್ಯದರ್ಶಿಯಾಗಿದ್ದಾರೆ. 16 ವರ್ಷಗಳ ಕಾಲ ಗ್ರಾಚ್ಯುಟಿ ನೀಡದೇ ಸರ್ಕಾರ ತನ್ನ ನೌಕರನನ್ನು ನಡೆಸಿಕೊಂಡಿರುವುದು ನಾಗರಿಕರೆಡೆಗೆ, ಅದರಲ್ಲೂ ನಿವೃತ್ತರಾದ ನಾಗರಿಕರೆಡೆಗೆ ಸರ್ಕಾರದ ನಿರಾಸಕ್ತಿ ತೋರುತ್ತದೆ. ಹೀಗಾಗಿ, ಗ್ರಾಚ್ಯುಟಿ ನಿರಾಕರಿಸುವ ಮೂಲಕ ನಿಷ್ಠುರತೆಯನ್ನು ಪ್ರದರ್ಶಿಸಲಾಗಿದೆ'' ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಗ್ರಾಚ್ಯುಟಿ ಪಾವತಿಗಾಗಿ ನಾಗರಿಕರ ಮನವಿಯನ್ನು ರಾಜ್ಯವು ನಿರ್ಲಕ್ಷಿಸಬಹುದು, ಏಕೆಂದರೆ ಅದು ಕಳೆದುಕೊಳ್ಳಲು ಏನೂ ಇಲ್ಲ, ಆದರೆ ನಿವೃತ್ತಿಯು ಟರ್ಮಿನಲ್ ಪ್ರಯೋಜನಗಳ ರಶೀದಿಯನ್ನು ಅವಲಂಬಿಸಿರುವ ನೌಕರನ ಗ್ರಾಚ್ಯುಟಿ ವಿಳಂಬವಾದರೆ ಅಥವಾ ನಿರಾಕರಿಸಿದರೆ, ಅವನು ಶಿಕ್ಷೆಗೆ ಗುರಿಯಾಗುತ್ತಾನೆ, ಮತ್ತು ವೃದ್ಧಾಪ್ಯದಲ್ಲಿ ಹಿಂದೆ ಬೀಳಲು ಹಣವಿಲ್ಲದ, ನಿರ್ಭಯತನಕ್ಕೆ ತಳ್ಳಲ್ಪಡುತ್ತಾನೆ ಎಂದು ನ್ಯಾಯಾಲಯ ಹೇಳಿದೆ. 

ಅರ್ಜಿದಾರರು 1973 ರಲ್ಲಿ ಜವಾಹರ್ ಲಾಲ್ ನೆಹರೂ ವೈದ್ಯಕೀಯ ಕಾಲೇಜಿನಲ್ಲಿ ಪ್ರಸವಾನಂತರದ ಕೇಂದ್ರದಲ್ಲಿ ಮೊದಲ ವಿಭಾಗದ ಗುಮಾಸ್ತ (ಎಫ್ ಡಿಸಿ) ಯಾಗಿ ನೇಮಕಗೊಂಡಿದ್ದರು. 34 ವರ್ಷಗಳ ಸೇವೆ ನಂತರ ಅವರು ನಿವೃತ್ತರಾಗಿದ್ದು, ಗ್ರಾಚ್ಯುಟಿ ಬಾರದ ಕಾರಣ ಅವರು ಕೋರ್ಟ್ ಮೆಟ್ಟಿಲೇರಿದ್ದರು. 

SCROLL FOR NEXT