ಪ್ರಮೋದ್ ಸಾವಂತ್ 
ರಾಜ್ಯ

ಮಹದಾಯಿ ಕರ್ನಾಟಕಕ್ಕೆ ಚುನಾವಣೆ ವಿಚಾರವಾದರೆ, ಗೋವಾಗೆ ಜೀವಸೆಲೆ: ಪ್ರಮೋದ್ ಸಾವಂತ್ (ಸಂದರ್ಶನ)

ಗೋವಾ ಗಡಿಯಲ್ಲಿ ಮಹದಾಯಿ ಯೋಜನೆ ಅನುಷ್ಠಾನಗೊಳಿಸಲು ಮತ್ತು ಮಹದಾಯಿ ನದಿಯಿಂದ ನೀರು ಹರಿಸಲು ಕೇಂದ್ರ ಸರ್ಕಾರದಿಂದ ವನ್ಯಜೀವಿ ಮತ್ತು ಪರಿಸರ ಅನುಮತಿಗಾಗಿ ಕರ್ನಾಟಕ ಸರ್ಕಾರ ಕಾದು ಕುಳಿತಿದ್ದು, ಈ ನಡುವಲ್ಲೇ ಮಹದಾಯಿ ಕರ್ನಾಟಕಕ್ಕೆ ಚುನಾವಣಾ ವಿಷಯವಾಗಿರಬಹುದು...

Manjula VN

ಬೆಳಗಾವಿ: ಗೋವಾ ಗಡಿಯಲ್ಲಿ ಮಹದಾಯಿ ಯೋಜನೆ ಅನುಷ್ಠಾನಗೊಳಿಸಲು ಮತ್ತು ಮಹದಾಯಿ ನದಿಯಿಂದ ನೀರು ಹರಿಸಲು ಕೇಂದ್ರ ಸರ್ಕಾರದಿಂದ ವನ್ಯಜೀವಿ ಮತ್ತು ಪರಿಸರ ಅನುಮತಿಗಾಗಿ ಕರ್ನಾಟಕ ಸರ್ಕಾರ ಕಾದು ಕುಳಿತಿದ್ದು, ಈ ನಡುವಲ್ಲೇ ಮಹದಾಯಿ ಕರ್ನಾಟಕಕ್ಕೆ ಚುನಾವಣಾ ವಿಷಯವಾಗಿರಬಹುದು, ಆದರೆ ಗೋವಾಕ್ಕೆ ಜೀವಸೆಲೆಯಾಗಿದೆ. ಇದರ ಮಲೆ ಹಕ್ಕು ಸಾಧಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಹೇಳಿದ್ದಾರೆ.

ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಬಿಜೆಪಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಸಾವಂತ್ ಅವರು ಬುಧವಾರ ಬೆಳಗಾವಿಗೆ ಆಗಮಿಸಿದ್ದರು.

ಈ ವೇಳೆ ಮೇ 7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ್ತೊಮ್ಮೆ ಭಾರಿ ಗೆಲುವು ತಂದುಕೊಡುವಲ್ಲಿ ‘ಮೋದಿ ಅಂಶ’ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಡೆಸಿದ ಕಿರು ಸಂದರ್ಶನದಲ್ಲಿ ಮಾತನಾಡಿರುವ ಅವರು, ಮಹದಾಯಿ ಯೋಜನೆ ಹಾಗೂ ಕರ್ನಾಟಕ ಮತ್ತು ಗವಾ ಚುನಾವಣೆಗೆ ಪಕ್ಷ ನಡೆಸುತ್ತಿರುವ ಸಿದ್ಧತೆಗಳ ಕುರಿತು ಮಾತನಾಡಿದರು.

ಮಹದಾಯಿ ಯೋಜನೆ ಜಾರಿಗೆ ಮಹದಾಯಿ ನೀರು ಹರಿಸಬೇಕೆಂಬ ಕರ್ನಾಟಕದ ಬೇಡಿಕೆಯನ್ನು ನೀವು ಹೇಗೆ ನೋಡುತ್ತೀರಿ?

ಮಹದಾಯಿ (ಅಂತರ-ರಾಜ್ಯ ನೀರು ಹಂಚಿಕೆ ವಿವಾದ) ಕರ್ನಾಟಕಕ್ಕೆ ಚುನಾವಣಾ ವಿಷಯವಾಗಬಹುದು, ಆದರೆ ನಮಗೆ (ಗೋವಾ) ಇದು ಜೀವಸೆಲೆ. ನದಿಯು ಗೋವಾದ ಜೀವನಾಡಿಯಾಗಿದೆ ಮತ್ತು ನಮ್ಮ ರಾಜ್ಯದಲ್ಲಿ ಎಲ್ಲದರ ಉಳಿವಿಗೆ ಏಕೈಕ ಮೂಲವಾಗಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಹೋರಾಟ ಮುಂದುವರೆದಿದೆ. ಮಹದಾಯಿ ಜಲ ವಿವಾದ ನ್ಯಾಯಾಧಿಕರಣದ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರ ರಚಿಸಿರುವ ಕೇಂದ್ರ ಸರ್ಕಾರ ಮತ್ತು ಪ್ರಗತಿಶೀಲ ನದಿ ಪ್ರಾಧಿಕಾರದ ಕಲ್ಯಾಣ ಮತ್ತು ಸಾಮರಸ್ಯ (PRAWAH) ಸಮತಿಯೊಂದಿಗೆ ಗೋವಾದ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇವೆ. ಮಹದಾಯಿ ಮೇಲಿನ ನಮ್ಮ ಹಕ್ಕನ್ನು ಸ್ಥಾಪಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ಮಹದಾಯಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಗೋವಾ ಸರ್ಕಾರ ಒಪ್ಪುತ್ತದೆಯೇ? ಒಂದು ಹನಿ ಮಹದಾಯಿ ನೀರನ್ನು ಬೇರೆ ರಾಜ್ಯಗಳಿಗೆ ಹರಿಸುವುದನ್ನು ಗೋವಾ ವಿರೋಧ ಪಕ್ಷಗಳು ವಿರೋಧಿಸುತ್ತಿವೆ...

ನದಿ ನೀರಿನ ತಿರುವು ವಿಚಾರ ನ್ಯಾಯಾಲಯ ಹಾಗೂ ಸಮತಿ ಮುಂದಿದೆ. ರಾಷ್ಟ್ರೀಯ ವನ್ಯಜೀವಿ ಮಂಡಳಿಯು ನೀರಿನ ತಿರುವಿಗೆ ಸಂಬಂಧಿಸಿದಂತೆ ನಿಖರವಾಗಿ ಏನನ್ನು ಅನುಮತಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ನೀರಿನ ಸಮಸ್ಯೆ ಮುಖ್ಯ ಎಂಬುದನ್ನು ನಾನು ಒಪ್ಪುತ್ತೇನೆ, ಆದರೆ, ಯೋಜನಾ ಸ್ಥಳದಲ್ಲಿ ಬರುವ ಪರಿಸರ ಮತ್ತು ಮಹದಾಯಿ ವನ್ಯಜೀವಿ ಅಭಯಾರಣ್ಯದ ಸಂರಕ್ಷಣೆಯೂ ಅಷ್ಟೇ ಮುಖ್ಯ. ಇದನ್ನು ಗೋವಾ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಪ್ರವಾಹ್ (ಸಮಿತಿ) ಶೀಘ್ರದಲ್ಲೇ ಯೋಜನೆಯ ಸ್ಥಳವನ್ನು ಪರಿಶೀಲಿಸಲಿದೆ. ಈಗಾಗಲೇ ಕೆಲ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ತೀರ್ಪು ಬರಲಿದೆ ಎಂದು ನಾನು ಭಾವಿಸುತ್ತೇನೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಮಹದಾಯಿ ಯೋಜನೆಗೆ ತನ್ನ ಒಪ್ಪಿಗೆ ನೀಡಿದ್ದರೂ ಸಹ, ರಾಷ್ಟ್ರೀಯ ವನ್ಯಜೀವಿ ಮಂಡಳಿಯು ತನ್ನ ಇತ್ತೀಚಿನ ಸಭೆಯಲ್ಲಿ ಕಳಸಾ ಯೋಜನೆಯ ಪ್ರಸ್ತಾಪವನ್ನು ಮುಂದೂಡಿದೆ?

ಈ ವಿಷಯ ಇನ್ನೂ ವಿವಿಧ ಅಧಿಕಾರಿಗಳ ಬಳಿ ಬಾಕಿ ಇದೆ. ಯೋಜನಾ ಸ್ಥಳದ ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳಲ್ಲಿನ ಪರಿಸರ, ಕುಡಿಯುವ ನೀರು, ಸಸ್ಯ ಮತ್ತು ಪ್ರಾಣಿಗಳ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಗೋವಾ ಗಂಭೀರವಾಗಿದೆ. ಕೃಷಿಗೆ ಗೋವಾದಲ್ಲಿ ಮಹದಾಯಿ ನೀರು ಬೇಕು. ಪ್ರವಾಹ್ ಎಲ್ಲಾ ಅಂಶಗಳನ್ನು ಗಮನಿಸುತ್ತದೆ ಮತ್ತು ಸುಪ್ರೀಂ ಕೋರ್ಟ್‌ಗೆ ವರದಿಯನ್ನು ಸಲ್ಲಿಸುತ್ತದೆ. ನಾವು ತೀರ್ಪಿಗಾಗಿ ಕಾಯುತ್ತೇವೆ.

ಸಾರಿಗೆ ಸಚಿವರು ದ್ವಿಪಥ ಹೆದ್ದಾರಿ ಮಂಜೂರು ಮಾಡಿದ ನಂತರವೂ ಚೋರ್ಲಾ ಮೂಲಕ ಬೆಳಗಾವಿ-ಗೋವಾ ರಸ್ತೆ ಅಭಿವೃದ್ಧಿ ವಿಳಂಬವಾಗುತ್ತಿದೆ. ಏಕೆ?

ಕೇಂದ್ರ ಸಚಿವ ಗಡ್ಕರಿ ಅವರು ಚೋರ್ಲಾ ಮೂಲಕ ದ್ವಿಪಥ ಹೆದ್ದಾರಿಯನ್ನು ಮಂಜೂರು ಮಾಡಿದರು, ಆದರೆ ಕರ್ನಾಟಕ ಅರಣ್ಯ ಇಲಾಖೆಯಿಂದ ಅನುಮತಿ ಅಗತ್ಯವಿರುವ ಕಾರಣ ಕಾಮಗಾರಿ ಬಾಕಿ ಉಳಿದಿದೆ. ಅದು ತೆರವಾದ ನಂತರ ಚೋರ್ಲಾ ರಸ್ತೆ ಡಬ್ಲಿಂಗ್ ಕಾಮಗಾರಿ ಆರಂಭವಾಗಲಿದೆ. ಸದ್ಯಕ್ಕೆ ಎನ್‌ಎಚ್‌ಎಐ ಮತ್ತು ಕರ್ನಾಟಕ ಸರ್ಕಾರವನ್ನು ಮನವೊಲಿಸಿ ಮಳೆಗಾಲದ ಆರಂಭಕ್ಕೂ ಮುನ್ನ ರಸ್ತೆ ದುರಸ್ತಿ ಮಾಡಿಸಿಕೊಳ್ಳುತ್ತೇವೆ.

ಕರ್ನಾಟಕದ ಚುನಾವಣೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು? ಹಲವು ಬಿಜೆಪಿ ಬಂಡಾಯಗಾರರು ಕಣಕ್ಕೆ ಇಳಿಯುವ ನಿರೀಕ್ಷೆಯಿದೆ...

ದೇಶಾದ್ಯಂತ ಕಮಲ, ವಿಕಸಿತ ಭಾರತ ಮತ್ತು ಮೋದಿಯವರಿಗೆ ಜನರು ಮತ ಹಾಕುತ್ತಾರೆ. ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಒಗ್ಗೂಡಿ ಹೋರಾಡುತ್ತಾರೆ. ಗೋವಾದಲ್ಲಿ ಶೇ.100ರಷ್ಟು ಫಲಿತಾಂಶವನ್ನು ನೀಡಲಿದ್ದೇವೆ, ಎರಡೂ ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತೇವೆ. ಕರ್ನಾಟಕದ ಎಲ್ಲಾ 28 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ.

ಕರ್ನಾಟಕದ ಪಕ್ಷದ ನಾಯಕರು ಮೋದಿ ಅಂಶವನ್ನು ಹೆಚ್ಚು ಅವಲಂಬಿಸಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ?

ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ದೇಶವು ಹೇಗೆ ಅಭಿವೃದ್ಧಿಗೊಂಡಿದೆ ಎಂಬುದನ್ನು ನಾವು ನೋಡಿದ್ದೇವೆ. ನಾವು ಭಾರತದ ಅಭಿವೃದ್ಧಿಗಾಗಿ ಮತ ಹಾಕುತ್ತಿದ್ದೇವೆ. ನಾವು ಮೋದಿಯವರ ಹೆಸರಿನಲ್ಲಿ ಮತ ಕೇಳುತ್ತೇವೆ. ಜೊತೆಗೆ ಅನುಭವಿ ಅಭ್ಯರ್ಥಿಗಳನ್ನೂ ಎಲ್ಲಾ ಕ್ಷೇತ್ರಗಳಲ್ಲಿ ಕಣಕ್ಕಿಳಿಸಿದ್ದೇವೆಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT