ರಸ್ತೆ ಕೆಳ ಸೇತುವೆ ಕಾಮಗಾರಿ 
ರಾಜ್ಯ

ರೈಲ್ವೆ ನಿರ್ವಹಣಾ ಶುಲ್ಕ ತುಂಬಾ ದುಬಾರಿ: ಎರಡು ಯೋಜನೆ ಸ್ಥಗಿತಗೊಳಿಸಿದ BDA

ಬೆಂಗಳೂರು ರೈಲ್ವೆ ವಿಭಾಗ ವಿಧಿಸುವ ಒಟ್ಟಾರೆ ನಿರ್ವಹಣಾ ಶುಲ್ಕವು ತುಂಬಾ ಹೆಚ್ಚಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧಿಕಾರಿಗಳು ಭಾವಿಸಿದ್ದಾರೆ.

ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗ ವಿಧಿಸುವ ಒಟ್ಟಾರೆ ನಿರ್ವಹಣಾ ಶುಲ್ಕವು ತುಂಬಾ ಹೆಚ್ಚಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧಿಕಾರಿಗಳು ಭಾವಿಸಿರುವುದರಿಂದ, ಅನುಷ್ಠಾನಗೊಳಿಸಬೇಕಾದ ಎರಡು ಯೋಜನೆಗಳು ಸ್ಥಗಿತಗೊಂಡಿವೆ.

ಹೆಬ್ಬಾಳ ಮೇಲ್ಸೇತುವೆ ಬಳಿ ರಸ್ತೆ ಮೇಲ್ಸೇತುವೆ(ROB) ಮತ್ತು ಚಲ್ಲಘಟ್ಟದಲ್ಲಿ ರಸ್ತೆ ಕೆಳ ಸೇತುವೆ(RUB) ಯೋಜನೆಗಳು ಸ್ಥಗಿತಗೊಂಡಿವೆ. ಆದಾಗ್ಯೂ, ಇದು ದೇಶಾದ್ಯಂತ ಅನ್ವಯವಾಗುವ ನಿಯಮ ಪುಸ್ತಕದ ಪ್ರಕಾರವೇ ನಡೆಯುತ್ತಿದೆ ಎಂದು ರೈಲ್ವೆ ಹೇಳುತ್ತಿದೆ.

ಕಾಮಗಾರಿಯನ್ನು ಮುಂದುವರಿಸುವ ಮೊದಲು ನಿರ್ವಹಣಾ ಶುಲ್ಕವನ್ನು ಬಿಡಿಎ ರೈಲ್ವೆಗೆ ಠೇವಣಿಯಾಗಿ ಪಾವತಿಸಬೇಕಾಗುತ್ತದೆ.

ಈ ಸಂಬಂಧ ರೈಲ್ವೆ ಹೊರಡಿಸಿದ ಪತ್ರಗಳ ನಕಲು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದ್ದು, ಚಲ್ಲಘಟ್ಟ ಆರ್‌ಯುಬಿಗೆ ಸಂಬಂಧಿಸಿದಂತೆ ಬೆಂಗಳೂರು ವಿಭಾಗದ ಹಿರಿಯ ವಿಭಾಗೀಯ ಇಂಜಿನಿಯರ್ ಬರೆದ ಪತ್ರದಲ್ಲಿ ಬಿಡಿಎ 13,93,08,490 ರೂ. ಠೇವಣಿ ಪಾವತಿಸಬೇಕಾಗಿದೆ. ಕೋಡಲ್ ಶುಲ್ಕ 2,40, 18,705 ಮೇಲ್ವಿಚಾರಣಾ ಶುಲ್ಕ ಸೇರಿದಂತೆ ಯೋಜನಾ ವೆಚ್ಚದ ಶೇ. 6.25 ರಷ್ಟು ಮತ್ತು ಯೋಜನಾ ವೆಚ್ಚದ ಶೇ, 30 ರಷ್ಟು ನಿರ್ವಹಣಾ ಶುಲ್ಕ ಪಾವತಿಸಬೇಕಾಗಿದೆ.

"ಈ ಶುಲ್ಕಗಳನ್ನು ಯೋಜನೆಗೆ ಮುಂಚಿತವಾಗಿ ವಿಧಿಸಲಾಗುತ್ತದೆ. ಮೇಲ್ವಿಚಾರಣಾ ಶುಲ್ಕ ಪರವಾಗಿಲ್ಲ. ಆದರೆ ನಿರ್ವಹಣೆಗೆ 11.5 ಕೋಟಿ ಶುಲ್ಕ ತುಂಬಾ ಹೆಚ್ಚು. ಯೋಜನೆಗೆ ನಮ್ಮ ಅಂದಾಜು ವೆಚ್ಚ(ರೈಲ್ವೆ ಭಾಗದ ಮೂಲಕ ಹಾದುಹೋಗುತ್ತದೆ) 38.43 ಕೋಟಿ ರೂ. ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು TNIE ಗೆ ತಿಳಿಸಿದ್ದಾರೆ.

ನಿರ್ವಹಣಾ ಶುಲ್ಕವನ್ನು ಮನ್ನಾ ಮಾಡಲು ಬಿಡಿಎ ರೈಲ್ವೆಯೊಂದಿಗೆ ಮಾತುಕತೆ ನಡೆಸಲಿದೆ. ಏಕೆಂದರೆ ಪ್ರಾಧಿಕಾರವು ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ. ಇಲ್ಲದಿದ್ದರೆ, ಒಂದೇ ಬಾರಿಗೆ ಶುಲ್ಕವನ್ನು ಪಾವತಿಸುವ ಬದಲು ವಾರ್ಷಿಕ ಆಧಾರದ ಮೇಲೆ ನಮಗೆ ಅನುಮತಿ ನೀಡಬೇಕು ಎಂದು ಅವರು ಹೇಳಿದ್ದಾರೆ.

ಚಲ್ಲಘಟ್ಟ RUB ಬೆಂಗಳೂರು-ಮೈಸೂರು ರೈಲ್ವೆ ಮಾರ್ಗದಲ್ಲಿ ಕೆಂಗೇರಿ ಮತ್ತು ಹೆಜ್ಜಾಲ ನಿಲ್ದಾಣಗಳ ನಡುವೆ ನಡೆಯುತ್ತಿದ್ದು, ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ಮತ್ತು ತಡೆಗೋಡೆಗಳ ಸಹಿತ ನಿರ್ಮಾಣಗೊಳ್ಳಬೇಕಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಸತತ 4ನೇ ಬಾರಿ CNG ದರ ಏರಿಕೆ: ಕೆಜಿಗೆ 2 ರೂ. ಹೆಚ್ಚಳ, ವಾಹನ ಸವಾರರಿಗೆ ಶಾಕ್‌

ಗೃಹಲಕ್ಷ್ಮಿ ಯೋಜನೆಯಲ್ಲಿ 100 ಕೋಟಿ ರೂ.ದುರ್ಬಳಕೆ: ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಚಿಂತನೆ..!

Main Tera Hero: ರಿರಿಲೀಸ್; ಗರ್ಲ್ ಫ್ರೆಂಡ್ ಗಾಗಿ ಅಭಿಮಾನಿಯ ಡ್ಯಾನ್ಸ್ , ವಿಡಿಯೋ ವೈರಲ್, ವರುಣ್ ಧವನ್ ಹೇಳಿದ್ದೇನು?

ವಿಜಯ್ ಸಿಎಂ ಆಗುತ್ತಿದ್ದಂತೆಯೇ ಆಂಧ್ರದಲ್ಲಿ ಗಂಭೀರವಾದ DCM ಪವನ್ ಕಲ್ಯಾಣ್ ! JSP ಕಾರ್ಯಕರ್ತರಿಗೆ ಖಡಕ್ ಸೂಚನೆ

SCROLL FOR NEXT