ಪ್ರಾತಿನಿಧಿಕ ಚಿತ್ರ 
ರಾಜ್ಯ

ಬೆಳಗಾವಿ: ಧಾರ್ಮಿಕ ಮತಾಂತರಕ್ಕೆ ಯತ್ನ; ದಂಪತಿ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್ ದಾಖಲು

28 ವರ್ಷದ ಮಹಿಳೆಯ ಖಾಸಗಿ ಫೋಟೊಗಳನ್ನು ಬಳಸಿ ಬ್ಲಾಕ್‌ಮೇಲ್ ಮಾಡುವ ಮೂಲಕ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಆರೋಪದ ಮೇಲೆ ದಂಪತಿ ಮತ್ತು ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗಾವಿ: 28 ವರ್ಷದ ಮಹಿಳೆಯ ಖಾಸಗಿ ಫೋಟೊಗಳನ್ನು ಬಳಸಿ ಬ್ಲಾಕ್‌ಮೇಲ್ ಮಾಡುವ ಮೂಲಕ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ ಆರೋಪದ ಮೇಲೆ ದಂಪತಿ ಮತ್ತು ಇತರ ಐವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ರಫೀಕ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತೆಯೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದನುು. ನಂತರ ಆಕೆಯ ಖಾಸಗಿ ಫೋಟೊಗಳನ್ನು ತೋರಿಸಿ ಇಸ್ಲಾಂಗೆ ಮತಾಂತರವಾಗುವಂತೆ ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ಮತ್ತು ಆತನ ಪತ್ನಿ ಹಾಗೂ ಸಂತ್ರಸ್ತೆ ಮೂವರೂ ಒಟ್ಟಿಗೆ ವಾಸಿಸುತ್ತಿದ್ದರು. ಪತ್ನಿಯ ಎದುರಿಗೆ ರಫೀಕ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾನೆ. ಆಕೆಯ ದೂರಿನ ಪ್ರಕಾರ, ಅವರು ಕುಂಕುಮದ ಬದಲಿಗೆ ಬುರ್ಖಾ ಧರಿಸುವಂತೆ ಕೇಳುತ್ತಿದ್ದರು.

2024ರ ಏಪ್ರಿಲ್‌ನಲ್ಲಿ, ಅವರು ಮಹಿಳೆಯನ್ನು ದಿನಕ್ಕೆ ಐದು ಬಾರಿ ನಮಾಜ್ ಮಾಡಲು, ಬುರ್ಖಾ ಧರಿಸಲು ಮತ್ತು ಕುಂಕುಮ ಧರಿಸದಂತೆ ಒತ್ತಾಯಿಸಿದರು ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭೀಮಾಶಂಕರ್ ಎಸ್ ಗುಳೇದ್ ಹೇಳಿದ್ದಾರೆ.

ಆರೋಪಿ ರಫೀಕ್ ಸಂತ್ರಸ್ತೆಯು ತನ್ನ ಪತಿಗೆ ವಿಚ್ಛೇದನ ನೀಡಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮೊಂದಿಗೆ ವಾಸಿಸುವಂತೆ ಕೇಳಿಕೊಂಡಿದ್ದಾನೆ. ಇಲ್ಲದಿದ್ದರೆ, ಆಕೆಯ ಖಾಸಗಿ ಫೋಟೊಗಳನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇಲೆ ಏಳು ಜನರ ವಿರುದ್ಧ ಸವದತ್ತಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India vs Pakistan T20 World Cup 2026: ಪಂದ್ಯ ಬಹಿಷ್ಕರಿಸುವ​ ನಿರ್ಧಾರ, ನಮ್ಮ ನಿಲುವು ಸ್ಪಷ್ಟ ಎಂದ ಪಾಕ್ ಪ್ರಧಾನಿ

'ನಾನು ಜೀವನದ ಸಂಧ್ಯಾಕಾಲದಲ್ಲಿದ್ದೇನೆ: ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ; ಕರ್ನಾಟಕವನ್ನು ರಕ್ಷಿಸಿ'

ಶಶಿ ತರೂರ್ ಪುತ್ರ ಸೇರಿ 500 ಮಂದಿ ಕಿತ್ತೊಗೆದ ವಾಷಿಂಗ್ಟನ್ ಪೋಸ್ಟ್: 'ನನ್ನ ಹೃದಯ ಒಡೆದಿದೆ' ಎಂದ ಇಶಾನ್!

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ 2026: "ಸಂಪಾಯಿತಲೇ ಪರಾಕ್' ಭವಿಷ್ಯವಾಣಿ ನುಡಿದ ಗೊರವಯ್ಯ, ಏನಿದರ ಅರ್ಥ..?

ನಾವು ಐದು ಜನ ಬಂದಿದ್ದರಿಂದ ನೀವು ಸರ್ಕಾರ ಮಾಡಿದ್ರಿ: ಮಂತ್ರಿಯಾಗಿ ಮಜಾ ಮಾಡಿ, ಖಾಲಿ ಮಾಡಿಕೊಂಡು ಹೋದ್ರಿ; ಅಶೋಕ್- ತಂಗಡಗಿ ಜಟಾಪಟಿ

SCROLL FOR NEXT