ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಟಿಪ್ಸ್ ಗಾಗಿ ಚಾಲಕರ ನಿರೀಕ್ಷೆ; ನಮ್ಮ ಯಾತ್ರಿ ಆ್ಯಪ್ ಬುಕ್ಕಿಂಗ್ ನಿಧಾನ!

ಶೂನ್ಯ ದರ ಏರಿಕೆಯ ಭರವಸೆಯೊಂದಿಗೆ ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್ ಸೇವೆ ಪ್ರಾರಂಭಿಸಿದ ಕೆಲದಿನಗಳ ನಂತರ ಬಹುತೇಕ ಚಾಲಕರು ಟಿಪ್ಸ್ ಗಾಗಿ ಕಾಯುವುದರಿಂದ ಆ್ಯಪ್ ಆಧಾರಿತ ಆಟೋ-ರೈಡ್ ಬುಕ್ಕಿಂಗ್ ನಿಧಾನವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ.

ಬೆಂಗಳೂರು: ಶೂನ್ಯ ದರ ಏರಿಕೆಯ ಭರವಸೆಯೊಂದಿಗೆ ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಕ್ಯಾಬ್ ಸೇವೆ ಪ್ರಾರಂಭಿಸಿದ ಕೆಲದಿನಗಳ ನಂತರ ಬಹುತೇಕ ಚಾಲಕರು ಟಿಪ್ಸ್ ಗಾಗಿ ಕಾಯುವುದರಿಂದ ಆ್ಯಪ್ ಆಧಾರಿತ ಆಟೋ-ರೈಡ್ ಬುಕ್ಕಿಂಗ್ ನಿಧಾನವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಈ ಹಿಂದೆ ಗರಿಷ್ಠ 30 ರೂ.ಗಳ ಟಿಪ್ಸ್ ತೋರಿಸುತ್ತಿದ್ದ ದರದ ಆಯ್ಕೆಯನ್ನು ಈಗ 50 ರೂ.ಗೆ ಹೆಚ್ಚಿಸಲಾಗಿದೆ ಎಂದು ಹೆಚ್ಚಿನ ಗ್ರಾಹಕರು ಹೇಳಿದ್ದಾರೆ.

ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಆಟೋ ರಿಕ್ಷಾ ಚಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರುದ್ರ ಮೂರ್ತಿ “ಇತರ ಆ್ಯಪ್ ಆಧಾರಿತ ಟ್ಯಾಕ್ಸಿ ಸಂಸ್ಥೆಯ ಪ್ರಯಾಣ ದರಗಳಲ್ಲಿ ಶೇ. 20 ರಷ್ಟು ಕಮಿಷನ್ ವಿಧಿಸಬಹುದು. ಆದಾಗ್ಯೂ, ನಮ್ಮ ಯಾತ್ರಿಯು ಡೈರೆಕ್ಟ್-ಟು-ಡ್ರೈವರ್ ಆ್ಯಪ್ ಆಗಿದೆ. ಇದು ಕಮಿಷನ್‌ ಮತ್ತು ಮಧ್ಯವರ್ತಿಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಆದ್ದರಿಂದ, ಹೆಚ್ಚುವರಿ ಹಣ ಗಳಿಸಲು ಗ್ರಾಹಕರು ಸಲಹೆಗಾಗಿ ಚಾಲಕರು ಕಾಯುತ್ತಾರೆ; ಮೂಲ ದರಕ್ಕೆ ಟಿಪ್ಸ್ ಸೇರಿಸಿದಾಗ ಚಾಲಕರು ಹೊಸ ದರದ ಬಗ್ಗೆ ಆಪ್ ಡೇಟ್ ಸ್ವೀಕರಿಸಿ ನಂತರ ತೆರಳುತ್ತಾರೆ. ಚಾಲನೆಗೂ ಮುನ್ನಾವೇ ಚಾಲಕರು ಪ್ರಯಾಣಿಕರಿಗೆ ಟಿಪ್ಸ್ ಬಗ್ಗೆ ಮಾಹಿತಿ ನೀಡುತ್ತಾರೆ ಎಂದರು.

ನಮ್ಮ ಯಾತ್ರಿ ಬಳಕೆದಾರರನ್ನು ಸಂಪರ್ಕಿಸಿದಾಗ, ಬುಕ್ಕಿಂಗ್ ಗಾಗಿ ಹೆಚ್ಚಿನ ದರ ಪಾವತಿಸಿದರೂ ನಿಧಾನವಾಗುತ್ತಿದೆ. ಆರಂಭದಲ್ಲಿ ಆ್ಯಪ್ ನ ತಾಂತ್ರಿಕ ತೊಂದರೆ ಅಂದುಕೊಂಡಿದ್ದೇವು. ಆದರೆ, 30-50 ರೂ. ಟಿಪ್ ಸೇರಿಸುವವರೆಗೆ ಗ್ರಾಹಕರು ಆಟೋದಲ್ಲಿನ ಪ್ರಯಾಣ ಮಾಡದಂತಾಗಿರುವುದು ಈಗ ಸಾಮಾನ್ಯವಾಗಿದೆ ಎಂದು ಬಳಕೆದಾರರು ಹೇಳಿದ್ದಾರೆ.

ನಮ್ಮ ಯಾತ್ರಿಯ ದಿನನಿತ್ಯದ ಬಳಕೆದಾರ ಮತ್ತು ಕಾಲೇಜು ವಿದ್ಯಾರ್ಥಿನಿ ಪ್ರೇರಣಾ, ಈ ಹಿಂದೆ, ಈ ಆ್ಯಪ್ ಮೂಲಕ ಕೆಲವೇ ಸಮಯದಲ್ಲಿ ಬುಕ್ ಮಾಡಲಾಗುತ್ತಿತ್ತು. ಆದಾಗ್ಯೂ, ಇದೀಗ, ಬುಕಿಂಗ್ ಮಾಡಿದ ತಕ್ಷಣ ಟಿಪ್ಸ್ ಸೇರಿಸಲು ಬಳಕೆದಾರರನ್ನು ಕೇಳುತ್ತದೆ. 30-40 ರೂಪಾಯಿಗಳ ಟಿಪ್ ಸೇರಿಸಿದಾಗ ಮಾತ್ರ ಆಟೋ ಬುಕ್ಕಿಂಗ್‌ಗಳು ದೃಢೀಕರಿಸಲ್ಪಡುತ್ತವೆ ಎಂದು ತಿಳಿಸಿದರು.

ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಿಂದ ಮತ್ತಿಕೆರೆಗೆ ತಮ್ಮ ದೈನಂದಿನ ಪ್ರಯಾಣಕ್ಕಾಗಿ ನಮ್ಮ ಯಾತ್ರಿ ಆ್ಯಪ್ ಬಳಸುವ ನರ್ಸ್ ಲಕ್ಷ್ಮಿಬಾಯಿ, “ಇತ್ತೀಚೆಗೆ ಪ್ರಯಾಣ ದರದ ಹೆಚ್ಚಳದಿಂದಾಗಿ ಆ್ಯಪ್ ಬಳಸುವುದನ್ನು ನಿಲ್ಲಿಸಿದೆ. ಪ್ರತಿದಿನ 30-40 ರೂ. ಗಳನ್ನು ಹೆಚ್ಚುವರಿಯಾಗಿ ಪಾವತಿಸುವುದು ಪ್ರಾಯೋಗಿಕವಾಗಿಲ್ಲ. ಬುಕ್ಕಿಂಗ್ ಗಾಗಿ ಹೆಚ್ಚುವರಿ ಹಣ ಪಾವತಿ ಅಸಮಂಜಸವಾಗಿದೆ ಎಂದರು.

ಬಹುತೇಕ ಟ್ರಿಪ್ ಗಳಲ್ಲಿ ಟಿಪ್ಸ್ ಸೇರಿಸಿಲ್ಲ. ಪಿಕ್ ಅವರ್ ಮತ್ತು ಶಾರ್ಟ್ ಟ್ರಿಪ್ ಗಳಲ್ಲಿ ಮಾತ್ರ ಇದು ನಡೆಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಚಾಲಕರು ಟಿಪ್ಸ್ ಸಿಗುವವರೆಗೂ ಆಟೋ ಎತ್ತಲ್ಲ ಎಂದು ನಮ್ಮ ಯಾತ್ರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಜಾಗತಿಕ ತೈಲ ಮಾರುಕಟ್ಟೆ ಅಸ್ಥಿರ; 48 ಗಂಟೆಗಳಲ್ಲಿ 'ಹಾರ್ಮುಜ್ ಜಲಸಂಧಿ' ತೆರೆಯದಿದ್ದರೆ ವಿದ್ಯುತ್ ಸ್ಥಾವರಗಳ ನಾಶ; ಇರಾನ್'ಗೆ ಟ್ರಂಪ್ ಕಠಿಣ ಎಚ್ಚರಿಕೆ

ಉಡುಪಿ: 'ಸಮಾಧಾನ ಮಹೋತ್ಸವ' ವಿರೋಧಿಸಿ ಪ್ರತಿಭಟನೆ; ಹಿಂದು ಜಾಗರಣಾ ವೇದಿಕೆಯ ಮುಖಂಡರು, ಕಾರ್ಯಕರ್ತರು ಸೇರಿ 38 ಮಂದಿ ವಶಕ್ಕೆ

ಚಿತ್ರದುರ್ಗದಲ್ಲಿ ಭೀಕರ ಆ್ಯಸಿಡ್ ದಾಳಿ: ಮಹಿಳೆ, ಮಕ್ಕಳು ಸೇರಿ ಐವರಿಗೆ ಗಂಭೀರ ಗಾಯ, ಆರೋಪಿಗಾಗಿ ಪೊಲೀಸರ ಶೋಧ

West Asia war: ಹಾರ್ಮುಜ್ ಜಲಸಂಧಿ 'ರೀ ಓಪನ್' ಮಾಡಲು 22 ರಾಷ್ಟ್ರಗಳು ಇರಾನ್ ಗೆ ಒತ್ತಾಯ! ಸೇನಾ ಕಾರ್ಯಾಚರಣೆ ಶೀಘ್ರ ಸ್ಥಗಿತ ಎಂದ ಅಮೆರಿಕ

IPL 2026: ಟಿಕೆಟ್ ಖರೀದಿಸುವಾಗ ನಕಲಿ ಲಿಂಕ್ ಗಳ ಬಗ್ಗೆ ಇರಲಿ ಎಚ್ಚರ- ಪೊಲೀಸರ ವಾರ್ನಿಂಗ್

SCROLL FOR NEXT