ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೊ ಸಿಎನ್‌ಆರ್ ರಾವ್ ಮತ್ತು ಅವರ ಪತ್ನಿಯನ್ನು ಸನ್ಮಾನಿಸಿದರು 
ರಾಜ್ಯ

ಕರ್ನಾಟಕವನ್ನು ನ್ಯಾನೊ ತಂತ್ರಜ್ಞಾನದ ಕೇಂದ್ರ ಮಾಡಲು ಗಮನಹರಿಸಬೇಕು: ಸಿಎಂ ಸಿದ್ದರಾಮಯ್ಯ

ನ್ಯಾನೊ ವಿಜ್ಞಾನದ ಪಿತಾಮಹ ಎಂದು ಕರೆಯಲ್ಪಡುವ ಭಾರತ ರತ್ನ ಪ್ರೊ ಸಿಎನ್‌ಆರ್ ರಾವ್ ಅವರನ್ನು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಸನ್ಮಾನಿಸಲಾಯಿತು. ಅವರು 2007 ರಲ್ಲಿ ನ್ಯಾನೊಟೆಕ್ ನಿರೂಪಣೆಯ ಪ್ರವರ್ತಕರಾಗಿದ್ದರು. ಇದೇ ಸಂದರ್ಭದಲ್ಲಿ ಅವರ 90ನೇ ಹುಟ್ಟುಹಬ್ಬವನ್ನು ಕೂಡ ಆಚರಿಸಲಾಯಿತು.

ಬೆಂಗಳೂರು: ಆಹಾರ ಮತ್ತು ಇಂಧನ ಭದ್ರತೆ, ಜಲ ಶುದ್ಧೀಕರಣ, ಮೂಲಸೌಕರ್ಯ, ಔಷಧ, ಆರೋಗ್ಯ ಮತ್ತು ತ್ಯಾಜ್ಯ ನಿರ್ವಹಣೆಗೆ ವಿನೂತನ ನ್ಯಾನೊ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಕರೆ ನೀಡಿದರು.

ನಗರೀಕರಣ, ಜನಸಂಖ್ಯೆ ಹೆಚ್ಚಳ ಮತ್ತು ಜೀವನಶೈಲಿ ಬದಲಾವಣೆಗಳಿಂದಾಗಿ ಅನೇಕ ಪಟ್ಟು ಹೆಚ್ಚಾಗುವ ನಿರೀಕ್ಷೆಯಿರುವ ಪರಿಸರ ಅಪಾಯಗಳನ್ನು ಎದುರಿಸುವಂತಹ ಪ್ರಮುಖ ಕ್ಷೇತ್ರಗಳ ಮೇಲೆ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ಗಮನಹರಿಸಬೇಕು ಎಂದು 13 ನೇ ಬೆಂಗಳೂರು ಇಂಡಿಯಾ ನ್ಯಾನೋ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು. ಮೊನ್ನೆ ಗುರುವಾರದಿಂದ ಇಂದಿನವರೆಗೆ ನಡೆಯುತ್ತಿರುವ ಕಾರ್ಯಕ್ರಮದ ಈ ವರ್ಷದ ಧ್ಯೇಯವಾಕ್ಯ 'ಸುಸ್ಥಿರತೆಗಾಗಿ ನ್ಯಾನೊಟೆಕ್: ಹವಾಮಾನ, ಶಕ್ತಿ ಮತ್ತು ಆರೋಗ್ಯ ಎಂಬುದಾಗಿದೆ.

ಮಾಹಿತಿ ವಿನಿಮಯ, ತಂತ್ರಜ್ಞಾನ ವರ್ಗಾವಣೆ, ವೆಚ್ಚಗಳ ಹಂಚಿಕೆ, ಅಪಾಯಗಳ ಹಂಚಿಕೆ, ಜ್ಞಾನದ ಪ್ರವೇಶ ಮತ್ತು ಮಾನವೀಯತೆಯ ಸಾಮಾನ್ಯ ಒಳಿತಿಗಾಗಿ ಪ್ರತಿಭೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಈ ಉದಯೋನ್ಮುಖ ತಂತ್ರಜ್ಞಾನದ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅಂತಾರಾಷ್ಟ್ರೀಯ ಸಂಶೋಧನಾ ಸಹಯೋಗವು ಮೂಲಭೂತವಾಗಿದೆ. ಯುವ ಉದ್ಯಮಿಗಳು ಅವಕಾಶವನ್ನು ಸದುಪಯೋಗಪಡಿಸಿಕೊಂಡು ಕರ್ನಾಟಕದಲ್ಲಿ ಹೊಸ ಉದ್ಯಮಗಳನ್ನು ಸ್ಥಾಪಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು. ಉದ್ಯಮದ ಬೆಳವಣಿಗೆಗೆ ರಾಜ್ಯವನ್ನು ಅನುಕೂಲಕರ ಪರಿಸರ ವ್ಯವಸ್ಥೆಯನ್ನಾಗಿ ಮಾಡಲು ಉದಯೋನ್ಮುಖ ಉದ್ಯಮಿಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.

‘ನ್ಯಾನೊ ವಿಜ್ಞಾನದ ಪಿತಾಮಹ’ ಎಂದು ಕರೆಯಲ್ಪಡುವ ಭಾರತ ರತ್ನ ಪ್ರೊ ಸಿಎನ್‌ಆರ್ ರಾವ್ ಅವರನ್ನು ಈ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಸನ್ಮಾನಿಸಲಾಯಿತು. ಅವರು 2007 ರಲ್ಲಿ ನ್ಯಾನೊಟೆಕ್ ನಿರೂಪಣೆಯ ಪ್ರವರ್ತಕರಾಗಿದ್ದರು. ಇದೇ ಸಂದರ್ಭದಲ್ಲಿ ಅವರ 90ನೇ ಹುಟ್ಟುಹಬ್ಬವನ್ನು ಕೂಡ ಆಚರಿಸಲಾಯಿತು.

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು "ಬಲವಾದ ಮಾನವ ಸಂಪನ್ಮೂಲ ಕೇಂದ್ರ" ವಾಗಿ ಬೆಳೆಯುತ್ತಿರುವ ಸಾಮರ್ಥ್ಯವನ್ನು ಎತ್ತಿ ತೋರಿಸಿದರು, ಅದು ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಶ್ರೇಷ್ಠ ಸ್ಥಾನವನ್ನು ಹೊಂದಿರುತ್ತದೆ. ರಾಜ್ಯವು ವಿದೇಶಿ ನೇರ ಹೂಡಿಕೆಗಳು (FDI), ರಫ್ತುಗಳಲ್ಲಿ ಅತ್ಯಧಿಕ ಬೆಳವಣಿಗೆಯನ್ನು ಹೊಂದಿದೆ. ಪ್ರಪಂಚದ ಉಳಿದ ಭಾಗಗಳಿಗೆ 'ಹೂಡಿಕೆಯ ತಾಣವಾಗಲಿದೆ ಎಂದರು. ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರ ನಗರೀಕರಣಕ್ಕೆ ತ್ವರಿತ ಪರಿಹಾರಗಳ ಅಗತ್ಯವಿದೆ ಎಂದರು.

ಅತ್ಯಾಧುನಿಕ ಕ್ವಾಂಟಮ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಆಯೋಜಿಸುವ ‘ಬೆಂಗಳೂರು ಇಂಡಿಯಾ ಕ್ವಾಂಟಮ್ ಕಂಪ್ಯೂಟಿಂಗ್’ ಸಮ್ಮೇಳನವನ್ನು ಉಪ ಮುಖ್ಯಮಂತ್ರಿ ಘೋಷಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಬಯೋಕಾನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಮತ್ತು ವಿಷನ್ ಗ್ರೂಪ್ ಫಾರ್ ಬಯೋಟೆಕ್ನಾಲಜಿಯ ಅಧ್ಯಕ್ಷರು, ನ್ಯಾನೊಟೆಕ್ ಜಗತ್ತಿಗೆ ವಿಜ್ಞಾನದ ನಿರ್ಣಾಯಕ ಕ್ಷೇತ್ರವಾಗಿದೆ. ಪ್ರೊ ಸಿಎನ್‌ಆರ್ ರಾವ್ ಅವರ ನಾಯಕತ್ವದಲ್ಲಿ ಕರ್ನಾಟಕವು ಹಲವು ಕ್ಷೇತ್ರಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ 'ಅದೃಶ್ಯದ ತಂತ್ರಜ್ಞಾನ'ದಲ್ಲಿ ಮುನ್ನಡೆ ಸಾಧಿಸುವ ಅದೃಷ್ಟವನ್ನು ಹೊಂದಿದೆ. ಉದ್ದೇಶಿತ ಔಷಧ ವಿತರಣೆ, ಎಲೆಕ್ಟ್ರಾನಿಕ್ಸ್, ಚಿಪ್ ತಯಾರಿಕೆ ಮತ್ತು ಪರಿಸರ ಪರಿಹಾರಗಳನ್ನು ಒದಗಿಸುವಲ್ಲಿ ಇದು ಈಗಾಗಲೇ ಹೆಚ್ಚು ಕೊಡುಗೆ ನೀಡಿದೆ ಎಂದು ಹೇಳಿದರು.

ಭಾರತ ಮತ್ತು ವಿದೇಶದಿಂದ 3,500 ಕ್ಕೂ ಹೆಚ್ಚು ಪಾಲ್ಗೊಳ್ಳುವವರೊಂದಿಗೆ, ಸಮ್ಮೇಳನವು ದೇಶದಲ್ಲಿ ನ್ಯಾನೊಟೆಕ್ ಉದ್ಯಮದ ಬೆಳವಣಿಗೆಗೆ ಪೂರಕತೆಯನ್ನು ನೀಡುವ ಗುರಿಯನ್ನು ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ