ಕಣ್ಣೀರಿಡುತ್ತಿರುವ ವಿದ್ಯಾರ್ಥಿನಿ. 
ರಾಜ್ಯ

ಗುಲಬರ್ಗಾ ವಿವಿ 42ನೇ ಘಟಿಕೋತ್ಸವ: ಚಿನ್ನದ ಪದಕ ಘೋಷಿಸಿ ಕೊನೆಯಲ್ಲಿ ನಿರಾಕರಣೆ, ವಿದ್ಯಾರ್ಥಿನಿ ಕಣ್ಣೀರು

ರೋಶಿನಿ ಎಂಎ ಇಂಗ್ಲಿಷ್ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದು ಚಿನ್ನದ ಪದಕ ಗಿಟ್ಟಿಸಿದ್ದಾಳೆಂದು ಭಾಲ್ಕಿಯ ಸಿಬಿ ಕಾಲೇಜಿನ ಪ್ರಾಚಾರ್ಯರಿಗೆ ಗುವಿವಿ ಮೌಲ್ಯಮಾಪನ ವಿಭಾಗ ಪತ್ರ ಬರೆದು ಹೇಳಿತ್ತಲ್ಲದೆ, ಆಕೆಯ ಭಾವಚಿತ್ರ ಮತ್ತು ವಿಳಾಸದ ಮಾಹಿತಿ ಕೇಳಿತ್ತು.

ಕಲಬುರಗಿ: ಎಂಎ ಇಂಗ್ಲಿಷ್​​​ನಲ್ಲಿ ಹೆಚ್ಚಿನ ಅಂಕ ಗಳಿಸಿದ್ದ ವಿದ್ಯಾರ್ಥಿನಿ ರೋಷಿನಿ ಅವರಿಗೆ ಚಿನ್ನದ ಪದಕ ಘೋಷಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯ ಕೊನೆ ಗಳಿಯಲ್ಲಿ ಪದಕ ನೀಡಲು ನಿರಾಕರಿಸಿದ್ದು, ಪದಕ ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿನಿ ಕಣ್ಣೀರು ಹಾಕಿರುವ ಘಟನೆ ಸೋಮವಾರ ನಡೆದಿದೆ.

ಬೀದರ್ ಜಿಲ್ಲೆಯ ಬಾಲ್ಕಿ ಸಿಬಿ ಕಾಲೇಜಿನ ವಿದ್ಯಾರ್ಥಿನಿ ರೋಷಿನಿ ಮಾಳಗೆ ಪದಕ ವಂಚಿತರಾಗಿ ಕಣ್ಣೀರಿಟ್ಟಿದ್ದಾರೆ. ರೋಶಿನಿ ಎಂಎ ಇಂಗ್ಲಿಷ್ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದು ಚಿನ್ನದ ಪದಕ ಗಿಟ್ಟಿಸಿದ್ದಾಳೆಂದು ಭಾಲ್ಕಿಯ ಸಿಬಿ ಕಾಲೇಜಿನ ಪ್ರಾಚಾರ್ಯರಿಗೆ ಗುವಿವಿ ಮೌಲ್ಯಮಾಪನ ವಿಭಾಗ ಪತ್ರ ಬರೆದು ಹೇಳಿತ್ತಲ್ಲದೆ, ಆಕೆಯ ಭಾವಚಿತ್ರ ಮತ್ತು ವಿಳಾಸದ ಮಾಹಿತಿ ಕೇಳಿತ್ತು.

ವಿವಿ ಮೌಲ್ಯಮಾಪನ ಕುಲಸಚಿವರ ಸೂಚನೆಯಂತೆ ಕಾಲೇಜಿನ ಪ್ರಾಚಾರ್ಯರು ರೋಶನಿಗೆ ಸುದ್ದಿ ತಿಳಿಸಿದ್ದಲ್ಲದೆ, ಆಕೆಯ ಭಾವಚಿತ್ರ, ವಿವರಗಳನ್ನೆಲ್ಲಾ ವಿವಿ ಪರೀಕ್ಷಾಂಗ, ಮೌಲ್ಯಮಾಪನ ವಿಭಾಗಕ್ಕೆ ರವಾನಿಸಿತ್ತು. ಆ.12ರಂದು ಘಟಿಕೋತ್ಸವ ದಿನಾಂಕ ನಿಗದಿಯಾಗಿದ್ದರಿಂದ ಚಿನ್ನದ ಪದಕ ಪಡೆಯಲು ಬಂಧಗಳೊಂದಿಗೆ ರೋಷಿನಿ ಆಗಮಿಸಿದ್ದರು.

ಈ ವೇಳೆ ಪದಕ ವಿಜೇತರ ಪಟ್ಟಿಯಲ್ಲಿ ಈಕೆಯ ಹೆಸರಿನ ಬದಲು ಮತ್ತೊಬ್ಬರ ಹೆಸರು ಕೇಳಿಬಂದಿದೆ. ಈ ಬಗ್ಗೆ ರೋಷಿನಿ ವಿಚಾರಿಸಿದಾಗ ತಮಗಿಂತ ಮತ್ತೋರ್ವ ವಿದ್ಯಾರ್ಥಿನಿ ಹೆಚ್ಚಿನ ಅಂಕ ಗಳಿಸಿರುವುದು ತಿಳಿದುಬಂದಿದೆ. ತಮ್ಮಿಂದಾಗ ಯಡವಟ್ಟು ಕುರಿತು ವಿಷಾದ ಪತ್ರವನ್ನು ಕಾಲೇಜಿಗೆ ಕಳುಹಿಸಿರುವುದಾಗಿಯೂ ತಿಳಿಸಿದ್ದಾರೆ.

ವಿಷಾದ ಪತ್ರವನ್ನು ಆ.8ರಂದೇ ಕಾಲೇಜಿಗೆ ಕಳುಹಿಸಲಾಗಿದೆ ಎಂದು ವಿವಿ ಹೇಳಿದೆ. ಆದರೆ, ಆ.12ರಂದು ಪತ್ರ ಬಂದಿರುವುದಾಗಿ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT