ರೈಲ್ವೆ ಯೋಜನೆಗಳ ಮಾಹಿತಿ (ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್) online desk
ರಾಜ್ಯ

ಪ್ರಯಾಣಿಕರ ಸೌಕರ್ಯಗಳಿಗಾಗಿ SWR ಗೆ 961.22 ಕೋಟಿ ರೂ. ಬಜೆಟ್ ಹಂಚಿಕೆ

ಪ್ರಯಾಣಿಕರ ಸೌಕರ್ಯಗಳಿಗಾಗಿ ಒತ್ತು ನೀಡುವುದನ್ನು ಮುಂದುವರಿಸಲಾಗಿದ್ದು, ನೈಋತ್ಯ ರೈಲ್ವೆ ವಲಯಕ್ಕೆ 2024-25 ನೇ ಸಾಲಿನಲ್ಲಿ 961.22 ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆ ಮಾಡಲಾಗಿದೆ.

ಬೆಂಗಳೂರು: ಪ್ರಯಾಣಿಕರ ಸೌಕರ್ಯಗಳಿಗಾಗಿ ಒತ್ತು ನೀಡುವುದನ್ನು ಮುಂದುವರಿಸಲಾಗಿದ್ದು, ನೈಋತ್ಯ ರೈಲ್ವೆ ವಲಯಕ್ಕೆ 2024-25 ನೇ ಸಾಲಿನಲ್ಲಿ 961.22 ಕೋಟಿ ರೂಪಾಯಿಗಳ ಬಜೆಟ್ ಹಂಚಿಕೆ ಮಾಡಲಾಗಿದೆ.

ಕಳೆದ ತಿಂಗಳು ಮಂಡಿಸಿದ ಬಜೆಟ್‌ನಲ್ಲಿ ವಲಯಕ್ಕೆ ಘೋಷಿಸಲಾದ ಒಟ್ಟು 6,493.87 ಕೋಟಿ ರೂ.ಗಳಲ್ಲಿ ಹೊಸ ಮಾರ್ಗಗಳಿಗೆ 1,448.91 ಕೋಟಿ ರೂ. ಮತ್ತು ಡಬಲಿಂಗ್ ಗೆ 1,241 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಬೆಂಗಳೂರು ವಿಭಾಗದಲ್ಲಿ ನಾಲ್ಕು ಡಬಲಿಂಗ್ ಯೋಜನೆಗಳು ಮತ್ತು ಒಂದು ಕ್ವಾಡ್ರುಪ್ಲಿಂಗ್ ಯೋಜನೆಗಳು ಹಂಚಿಕೆಯನ್ನು ಪಡೆದವುಗಳಲ್ಲಿ ಸೇರಿವೆ. ಶನಿವಾರ (ಆಗಸ್ಟ್ 17) ಬಿಡುಗಡೆಯಾದ ಪಿಂಕ್ ಬುಕ್ (ವಿವಿಧ ವಲಯಗಳು ಮತ್ತು ಯೋಜನೆಗಳ ಹಂಚಿಕೆಗಳ ವಿವರವಾದ ದಾಖಲೆ) ವಿವಿಧ ಯೋಜನೆಗಳಿಗೆ ಪ್ರತ್ಯೇಕ ಹಂಚಿಕೆಗಳನ್ನು ಪ್ರಮುಖವಾಗಿ ವಿವರಿಸಲಾಗಿದೆ.

"ಪ್ರಯಾಣಿಕರಿಗೆ ನಿರಂತರ ಉತ್ತಮ ಗುಣಮಟ್ಟದ ಸೇವೆಯನ್ನು ಖಚಿತಪಡಿಸಿಕೊಳ್ಳಲು 961.22 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ" ಎಂದು ಎಸ್ ಡಬ್ಲ್ಯುಆರ್ ನ ಅಧಿಕೃತ ಪ್ರಕಟಣೆ ತಿಳಿಸಿದೆ.

ಬೆಂಗಳೂರು ವಿಭಾಗದ ನಾಲ್ಕು ಡಬ್ಲಿಂಗ್ ಯೋಜನೆಗಳಲ್ಲಿ ಬೈಯಪ್ಪನಹಳ್ಳಿ-ಹೊಸೂರು 200 ಕೋಟಿ ರೂ., ಯಶವಂತಪುರ-ಚನ್ನಸಂದ್ರ ಮತ್ತು ಪೆನುಕೊಂಡ-ಧರ್ಮಾವರಂ ತಲಾ 100 ಕೋಟಿ ರೂ., ಅರಸೀಕೆರೆ-ತುಮಕೂರಿಗೆ 20 ಕೋಟಿ ರೂ. ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ಕ್ವಾಡ್ರುಪ್ಲಿಂಗ್ ಯೋಜನೆಗೆ 200 ಕೋಟಿ ರೂಪಾಯಿ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.

"ರೋಡ್ ಓವರ್ ಬ್ರಿಡ್ಜ್ ಮತ್ತು ರೋಡ್ ಅಂಡರ್ ಬ್ರಿಡ್ಜ್ ಯೋಜನೆಗಳಂತಹ ಎಸ್‌ಡಬ್ಲ್ಯೂಆರ್‌ನಾದ್ಯಂತ ಸುರಕ್ಷತಾ ಕಾಮಗಾರಿಗಳಿಗಾಗಿ, ರೂ 329.40 ಕೋಟಿಗಳನ್ನು ನಿಗದಿಪಡಿಸಲಾಗಿದೆ. ಭವಿಷ್ಯದ ಕಾಮಗಾರಿಗಳನ್ನು ತ್ವರಿತಗೊಳಿಸಲು ರೈಲ್ವೆಯಿಂದ ಅವರಿಗೆ 100% ಧನಸಹಾಯ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಸಂಚಾರ ಸೌಲಭ್ಯ ಕಾಮಗಾರಿಗೆ 145.84 ಕೋಟಿ ರೂ. ಸಂಚಾರ ಸೌಲಭ್ಯ ಕಾಮಗಾರಿಗೆ 145.84 ಕೋಟಿ ರೂ ನೀಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT