ಕ್ರಿಪ್ಟೋ ಕರೆನ್ಸಿ online desk
ರಾಜ್ಯ

ಕ್ರಿಪ್ಟೋ ಕರೆನ್ಸಿ ಸ್ವೀಕರಿಸಿದ ಆಟೋ ಚಾಲಕ!: ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಸುದ್ದಿ!

ಈಗ ಆಟೋ ಚಾಲಕನೋರ್ವ ಕ್ರಿಪ್ಟೋ ಕರೆನ್ಸಿ ಮೂಲಕ ಪೇಮೆಂಟ್ ಪಡೆಯುತ್ತಿರುವುದು ಹೆಚ್ಚು ಪ್ರಚಾರವಾಗುತ್ತಿದೆ.

ಬೆಂಗಳೂರು: ಬೆಂಗಳೂರು tech-savvy ನಗರ ಎಂದೇ ಖ್ಯಾತಿ ಪಡೆದಿದ್ದು ತಂತ್ರಜ್ಞಾನದ ದೃಷ್ಟಿಯಿಂದ ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತದೆ.

ಈಗ ಆಟೋ ಚಾಲಕನೋರ್ವ ಕ್ರಿಪ್ಟೋ ಕರೆನ್ಸಿ ಮೂಲಕ ಪೇಮೆಂಟ್ ಪಡೆಯುತ್ತಿರುವುದು ಹೆಚ್ಚು ಪ್ರಚಾರವಾಗುತ್ತಿದೆ. ಆಟೋ ಚಾಲಕನ ಮುಂದಾಲೋಚನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಟೋ ಚಾಲಕ ತನ್ನ ಆಟೋ ಮೇಲೆ "ಕ್ರಿಪ್ಟೋ ಕರೆನ್ಸಿ ಸ್ವೀಕರಿಸಲಾಗುವುದು" ಎಂದು ಬರೆದಿದ್ದ ಫೋಟೋ ಆ.18 ರಂದು ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, 51,000 ವೀಕ್ಷಣೆ 1,500 ಲೈಕ್ ಗಳನ್ನು ಪಡೆದಿತ್ತು.

"ಈ ಆಟೋ ಚಾಲಕ ಹೆಚ್ಚಿನ ಸಾಕ್ಷರ ಭಾರತೀಯರಿಗಿಂತ ವೇಗವಾಗಿ ರೂಪಾಂತರಗೊಳ್ಳುತ್ತಿದ್ದಾರೆ" ಎಂದು X ಬಳಕೆದಾರ ಗರಿಮಾ ಶರ್ಮಾ ಬರೆದಿದ್ದರೆ, ಮತ್ತೊಬ್ಬ ಬಳಕೆದಾರರು ವ್ಯಂಗ್ಯವಾಡಿದ್ದು, "ಆತ ವೆಬ್3 ಹ್ಯಾಕಥಾನ್‌ಗಳಿಗೆ ಹಾಜರಾಗುತ್ತಿರಬೇಕು." ಎಂದು ಹೇಳಿದ್ದಾರೆ.

"ಹೆಚ್ಚಿನ ಜನರು ಕ್ರಿಪ್ಟೋ ಖಾತೆಗಳನ್ನು ಹೊಂದಿಲ್ಲ, ಆದರೆ ಈತ ಮಾತ್ರ ಕ್ರಿಪ್ಟೋವನ್ನು ಸ್ವೀಕರಿಸುತ್ತಿದ್ದಾರೆ" ಎಂದು ಆರ್ಯನ್ ಅಗರ್ವಾಲ್ ಟೀಕಿಸಿದ್ದಾರೆ.

ಡಿಜಿಟಲ್ ಕರೆನ್ಸಿಯನ್ನು ಅಳವಡಿಸಿಕೊಳ್ಳುವ ಚಾಲಕನ ನಿರ್ಧಾರವು ದೈನಂದಿನ ವಹಿವಾಟುಗಳಲ್ಲಿ ಕ್ರಿಪ್ಟೋಕರೆನ್ಸಿಗಳ ಸ್ವೀಕಾರದ ಕಡೆಗೆ ಬೆಳೆಯುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಆದಾಗ್ಯೂ, ಮಾರುಕಟ್ಟೆಯ ಚಂಚಲತೆಯನ್ನು ಉಲ್ಲೇಖಿಸಿರುವ ಮಂದಿ, ತಮ್ಮದೇ ಆದ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. 2022 ರ ನಂತರ ಹಲವರು ಕ್ರಿಪ್ಟೋ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ನಾನು ಬೆಂಗಳೂರಿನ ಕೆಲವು ಸ್ಥಳಗಳಲ್ಲಿ ಕ್ರಿಪ್ಟೋದಲ್ಲಿ ಆಹಾರಕ್ಕಾಗಿ ಪಾವತಿಸುತ್ತಿದ್ದೆ. ಅವರು ಇನ್ನೂ ಕ್ರಿಪ್ಟೋವನ್ನು ಸ್ವೀಕರಿಸುತ್ತಾರೆಯೇ. ಹೌದು ಎಂದಾದರೆ, ಅದು ಅದ್ಭುತ ಎಂದು ಮತ್ತೊಬ್ಬ ನೆಟಿಜನ್ ಹೇಳಿದ್ದಾರೆ.

ಈ ಅನಿಶ್ಚಿತತೆಯ ಹೊರತಾಗಿಯೂ, ಭಾರತ ಸರ್ಕಾರ ಕ್ರಿಪ್ಟೋ ಉದ್ಯಮವನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಂಡಿದೆ. 2022 ರ ಬಜೆಟ್ ನಲ್ಲಿ ಕ್ರಿಪ್ಟೋಕರೆನ್ಸಿ ಗಳಿಕೆಯ ಮೇಲೆ 30% ತೆರಿಗೆಯನ್ನು ಪರಿಚಯಿಸಲಾಗಿತ್ತು ಮತ್ತು ನಿರ್ದಿಷ್ಟ ಮಿತಿಯನ್ನು ಮೀರಿದ ವಹಿವಾಟುಗಳಿಗೆ 1% ತೆರಿಗೆಯನ್ನು ಮೂಲದಲ್ಲಿ ತಡೆಹಿಡಿಯಲಾಗಿದೆ (TDS).

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

SCROLL FOR NEXT