ಅಪಘಾತ ದೃಶ್ಯ 
ರಾಜ್ಯ

ವಿಜಯಪುರ: ಕಬ್ಬು ಕಟಾವು ಯಂತ್ರ- ಕಾರಿನ ನಡುವೆ ಭೀಕರ ಅಪಘಾತ; ಐವರ ದುರ್ಮರಣ

ವಿಜಯಪುರದ ಅಲಿಯಾಬಾದ್ ನಿವಾಸಿಗಳಾದ 45 ವರ್ಷದ ಶಾಂತವ್ವ ಶಂಕರ ಪಾಟೀಲ್, 50 ವರ್ಷದ ಶಶಿಕಲಾ ಜೈನಾಪೂರ, 55 ವರ್ಷದ ನಿಂಗಪ್ಪಾ ಪಾಟೀಲ್, 65 ವರ್ಷದ ಭೀಮಶಿ ಸಂಕನಾಳ ಹಾಗೂ 45 ವರ್ಷದ ದಿಲೀಪ್ ಪಾಟೀಲ್ ಮೃತ ದುರ್ದೈವಿಗಳು.

ವಿಜಯಪುರ: ತಾಳಿಕೋಟೆ ತಾಲೂಕಿನ ಬಿಳೆಬಾವಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಐವರು ದುರ್ಮರಣ ಹೊಂದಿದ್ದಾರೆ. ಕಬ್ಬು ಕಟಾವು ಮಷಿನ್​ ಡಿಕ್ಕಿಯಾಗಿ ಕಾರಿನಲ್ಲಿದ್ದವರು ಮೃತಪಟ್ಟಿದ್ದಾರೆ.

ವಿಜಯಪುರದ ಅಲಿಯಾಬಾದ್ ನಿವಾಸಿಗಳಾದ 45 ವರ್ಷದ ಶಾಂತವ್ವ ಶಂಕರ ಪಾಟೀಲ್, 50 ವರ್ಷದ ಶಶಿಕಲಾ ಜೈನಾಪೂರ, 55 ವರ್ಷದ ನಿಂಗಪ್ಪಾ ಪಾಟೀಲ್, 65 ವರ್ಷದ ಭೀಮಶಿ ಸಂಕನಾಳ ಹಾಗೂ 45 ವರ್ಷದ ದಿಲೀಪ್ ಪಾಟೀಲ್ ಮೃತ ದುರ್ದೈವಿಗಳು.

ಯಾದಗಿರಿಯಲ್ಲಿ ಕನ್ಯೆ ನೋಡಲು ಹೋಗಿದ್ದು, ವಾಪಸ್ ಆಗುತ್ತಿದ್ದ ವೇಳೆ ತೊಗರಿ ಕಟಾವು ಮಷಿನ್​​ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಜೆಸಿಬಿ ಮೂಲಕ ಕಾರಿನಲ್ಲಿದ್ದ ಶವಗಳನ್ನು ಹೊರತೆಗೆಯಲಾಗಿದೆ. ತಾಳಿಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬಾಗೇವಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನಧಿಕೃತ ಮನೆಗಳ ತೆರವು: ಕೋಗಿಲು ಲೇಔಟ್​​ಗೆ ಡಿ.ಕೆ ಶಿವಕುಮಾರ್ ಭೇಟಿ; ಡಿಸಿಎಂ ಹೇಳಿದ್ದೇನು? Video

ಬೆಂಗಳೂರು: ಕಿರುತೆರೆ ನಟಿ ನಂದಿನಿ ಆತ್ಮಹತ್ಯೆಗೆ ಶರಣು

ಮಾದಕ ವಸ್ತು ತಡೆ: ನಿರ್ಲಕ್ಷ್ಯಕ್ಕಾಗಿ ಮೂವರು ಇನ್ಸ್‌ಪೆಕ್ಟರ್‌ಗಳ ಅಮಾನತು

ಲಂಕಾ ಹನಿಮೂನ್ ನಲ್ಲಿ 'ಹಳೇ ಲವರ್' ವಿಚಾರಕ್ಕೆ ಜಗಳ! ನವದಂಪತಿ ಸೂಸೈಡ್ ಗೆ ಇದೇ ಕಾರಣನಾ? ಕಣ್ಣೀರಿನಲ್ಲಿ ಮುಳುಗಿದ ಕುಟುಂಬ!

ಪಾಕಿಸ್ತಾನ: ಇಬ್ಬರು ಪೊಲೀಸರಿಗೆ ಗುಂಡಿಕ್ಕಿ ಕೊಂದ ಅಪರಿಚಿತ ಬಂದೂಕುಧಾರಿಗಳು!

SCROLL FOR NEXT