ಕಣ್ಮಿಣಿಕೆ ವಸತಿ ಸಮುಚ್ಚಯ 
ರಾಜ್ಯ

ಬೆಂಗಳೂರು: ಬಿಡಿಎ ಫ್ಲ್ಯಾಟ್‌ ಮಾರಾಟ ಮೇಳ; 1 ಸಾವಿರ ಮನೆಗಳ ಮಾರಾಟ!

ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಣ್ಮಿಣಿಕೆ ವಸತಿ ಸಮುಚ್ಚಯದ ಬಳಿ ಆಯೋಜಿಸಲಾಗಿರುವ ಮೇಳದಲ್ಲಿ ತಾತ್ಕಾಲಿಕ ಹಂಚಿಕೆ ಪತ್ರಗಳನ್ನು ಹಂಚಿಕೆದಾರರಿಗೆ ಹಸ್ತಾಂತರಿಸಲಾಗುವುದು.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ಒಟ್ಟು 1,369 ಫ್ಲಾಟ್‌ಗಳು ಶನಿವಾರದಂದು ದಿನವಿಡೀ ನಡೆಯುವ ‘ಫ್ಲಾಟ್ ಮೇಳ’ದಲ್ಲಿ ಮಾರಾಟವಾಗಲಿದೆ. ಒಟ್ಟು 1,212 ಫ್ಲಾಟ್‌ಗಳು ಕಣ್ಮಿಣಿಕೆಯಲ್ಲಿದ್ದರೆ, 157 1ಬಿಎಚ್‌ಕೆ ಫ್ಲಾಟ್‌ಗಳು ತಿಪ್ಪಸಂದ್ರದಲ್ಲಿವೆ.

ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಕಣ್ಮಿಣಿಕೆ ವಸತಿ ಸಮುಚ್ಚಯದ ಬಳಿ ಆಯೋಜಿಸಲಾಗಿರುವ ಮೇಳದಲ್ಲಿ ತಾತ್ಕಾಲಿಕ ಹಂಚಿಕೆ ಪತ್ರಗಳನ್ನು ಹಂಚಿಕೆದಾರರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಕಣ್ಮಿಣಿಕೆ ಪ್ರಾಜೆಕ್ಟ್ ಬೆಂಗಳೂರು-ಮೈಸೂರು ರಸ್ತೆಗೆ ಸಮೀಪದಲ್ಲಿದೆ ಮತ್ತು ಅಲ್ಲಿ ಒಟ್ಟು 748 2BHK ಮತ್ತು 464 3BHK ಫ್ಲಾಟ್‌ಗಳನ್ನು ಮಂಜೂರು ಮಾಡಲಾಗುವುದು. 2BHK ಫ್ಲಾಟ್‌ಗಳ ಬೆಲೆ 25 ಲಕ್ಷದಿಂದ 30 ಲಕ್ಷ ರೂಪಾಯಿಗಳಷ್ಟಿದ್ದರೆ, 3BHK ಫ್ಲಾಟ್‌ಗಳ ಬೆಲೆ 40 ಲಕ್ಷದಿಂದ 64 ಲಕ್ಷ ರೂಪಾಯಿಗಳವರೆಗೆ ಇದೆ" ಎಂದು ಪ್ರಕಟಣೆ ತಿಳಿಸಿದೆ.

ಜೆಪಿ ನಗರ 9ನೇ ಹಂತದಲ್ಲಿರುವ ದಕ್ಷಿಣ ಬೆಂಗಳೂರಿನ ತಿಪ್ಪಸಂದ್ರ ಹೌಸಿಂಗ್ ಪ್ರಾಜೆಕ್ಟ್ ನಲ್ಲಿ 1BHK ಫ್ಲಾಟ್‌ಗಳ ಬೆಲೆ 14.5 ಲಕ್ಷ ರೂಪಾಯಿ ಮತ್ತು ಕನಕಪುರ ರಸ್ತೆಯಲ್ಲಿರುವ ಫೋರಂ ಮಾಲ್ ಮತ್ತು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದ ಸಮೀಪದಲ್ಲಿದೆ ಎಂದು ಪ್ರಕಟಣೆ ತಿಳಿಸಿದೆ. ಫ್ಲಾಟ್ ಖರೀದಿಸಲು ಬಯಸುವವರು ಡಿಡಿ ಅಥವಾ ಆನ್‌ಲೈನ್ ವರ್ಗಾವಣೆ ಮೂಲಕ ಆರಂಭಿಕ ಠೇವಣಿ ಪಾವತಿಸುವ ಮೂಲಕ ಮೇಳದಲ್ಲಿ ಭಾಗವಹಿಸಬಹುದು. ಹಂಚಿಕೆ ಪತ್ರಗಳನ್ನು ಸ್ಥಳದಲ್ಲೇ ನೀಡಲಾಗುವುದು. ವಿವರಗಳಿಗಾಗಿ, 63625 12234/ 87478 77469/ 77958 69883 ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT