ಬಂಧನ (ಸಂಗ್ರಹ ಚಿತ್ರ) 
ರಾಜ್ಯ

ಉಪ ಲೋಕಾಯುಕ್ತರ ಹೆಸರು ಬಳಸಿ ವಂಚನೆಗೆ ಯತ್ನ: ಆರೋಪಿ ಬಂಧನ

ಚಿಕ್ಕಬಳ್ಳಾಪುರ ಮೂಲದ ಆನಂದ್ ಕುಮಾರ್ ಬಂಧಿತ ಆರೋಪಿ. ಲೋಕಾಯುಕ್ತ ಇಲಾಖೆಯ ಉಪನಿಬಂಧಕ ಅರವಿಂದ್ ಎನ್.ವಿ. ನೀಡಿದ ದೂರಿನ ಮೇರೆಗೆ ಆನೇಕಲ್ ಇನ್ ಸ್ಪೆಕ್ಟರ್ ಬಿ.ಎಂ. ತಿಪ್ಪೇಸ್ವಾಮಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಬೆಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಹೆಸರನ್ನು ದುರ್ಬಳಕೆ ಮಾಡಿ, ವಂಚಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಆನೇಕಲ್ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಮೂಲದ ಆನಂದ್ ಕುಮಾರ್ ಬಂಧಿತ ಆರೋಪಿ. ಲೋಕಾಯುಕ್ತ ಇಲಾಖೆಯ ಉಪನಿಬಂಧಕ ಅರವಿಂದ್ ಎನ್.ವಿ. ನೀಡಿದ ದೂರಿನ ಮೇರೆಗೆ ಆನೇಕಲ್ ಇನ್ ಸ್ಪೆಕ್ಟರ್ ಬಿ.ಎಂ. ತಿಪ್ಪೇಸ್ವಾಮಿ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ.

ಆನೇಕಲ್ ವಿಶೇಷ ತಹಶೀಲ್ದಾರ್ ಕರಿಯಾ ನಾಯಕ್ ಕಚೇರಿಗೆ ಆಗಮಿಸಿದ್ದ ಆರೋಪಿ ಆನಂದ್, ತಾನು ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪರ ಸಂಬಂಧಿಕ ಹಾಗೂ ತಾನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಉದ್ಯೋಗಿ ಎಂದು ಹೇಳಿದ್ದಾರೆ.

ಬಳಿಕ ಸರ್ಜಾಪುರ ಹೋಬಳಿ ಚಿಕ್ಕನಹಳ್ಳಿ ಸನಂ 18/ಪಿ16 ಹೊಸ ನಂಬರ್ 191 ರ ಒಂದು ಎಕರೆ ಜಮೀನನ್ನು ಎಸ್.ಎನ್.ರಾಮಸ್ವಾಮಿ ಅಡಿಗ ಎಂಬವರಿಂದ ನಾರಾಯಣ ಅಡಿಗ ಎಂಬವರ ಹೆಸರಿಗೆ ಖಾತೆ ಬದಲಾಯಿಸುವಂತೆ ಒತ್ತಡ ಹೇರಿದ್ದಾನೆ.

ಇದಷ್ಟೇ ಅಲ್ಲದೆ, ತನ್ನ ಮೊಬೈಲ್ ನಿಂದ ಯಾರಿಗೋ ಕಾಲ್ ಮಾಡಿ ಉಪ ಲೋಕಾಯುಕ್ತರು ಮಾತನಾಡುತ್ತಿದ್ದಾರೆಂದು, ಮತ್ತೊಂದು ಬಾರಿ ಲೋಕಾಯುಕ್ತ ಐ.ಜಿ. ಮಾಡನಾಡುತ್ತಿರುತ್ತಾರೆಂದು, ಮತ್ತೊಂದು ಬಾರಿ ಲೋಕಾಯುಕ್ತ ಎಸ್ಪಿ ಮಾತನಾಡುತ್ತಿದ್ದಾರೆ ಹೇಳಿ ತಹಶೀಲ್ದಾರ್ ರಿಗೆ ಮೊಬೈಲ್ ಕೊಟ್ಟು ಮಾತನಾಡಿಸಿದ್ದಾನೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿಗಳು ತಾವು ಲೋಕಾಯುಕ್ತ ನ್ಯಾಯಮೂರ್ತಿ, ಲೋಕಾಯುಕ್ತ ಐ.ಜಿ. ಮತ್ತು ಲೋಕಾಯುಕ್ತ ಎಸ್ಪಿ ಎಂದು ಹೇಳಿ ಮಾತನಾಡಿದ್ದಲ್ಲದೆ, ನಿಮ್ಮ ಬಳಿ ಬಂದಿರುವ ಆನಂದ್ ಕುಮಾರ್ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ, ಆತನ ಕೆಲಸವನ್ನು ಯಾವುದೇ ತಡ ಮಾಡದೆ ಬೇಗ ಮಾಡಿಕೊಡಿಎಂದು ಒತ್ತಡ ಹೇರಿದ್ದಾರೆ. ಈ ಬಗ್ಗೆ ಸಂಶಯಗೊಂಡ ವಿಶೇಷ ತಹಶೀಲ್ದಾರ್ ಕರಿಯಾ ನಾಯಕ್ ಅವರು ಲೋಕಾಯುಕ್ತಕ್ಕೆ ಮಾಹಿತಿ ನೀಡಿದ್ದಾರೆ.

ಪರಿಶೀಲನೆ ಬಳಿಕ ಆನಂತ್ ಲೋಕಾಯುಕ್ತದಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದು ಖಚಿತವಾಗಿದೆ. ಅಲ್ಲದೆ, ಆರೋಪಿ ತನ್ನ ಬಳಿ ಮೂರು ಮೊಬೈಲ್ ನಂಬರ್ ಇಟ್ಟುಕೊಂಡಿದ್ದು, ಅವುಗಳಿಂದ ಕರೆ ಮಾಡಿದರೆ, ಟ್ರೂ ಕಾಲರ್ ನಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿ, ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೆಸರು ಬರುವಂತೆ ಮಾಡಿಟ್ಟುಕೊಂಡಿರುವುದು ಪತ್ತೆಯಾಗಿದೆ. ಬಳಿಕ ನಾಯಕ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಆರೋಪಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT