ಡಿಸೆಂಬರ್ 30, 2004 ರ ಈ ಫೋಟೋದಲ್ಲಿ, ಹಾನಿಗೊಳಗಾದ ಮೀನುಗಾರಿಕೆ ಟ್ರಾಲರ್‌ಗಳು  
ರಾಜ್ಯ

ಸುನಾಮಿ ರೌದ್ರನರ್ತನಕ್ಕೆ 20 ವರ್ಷ: ಮಹಿಳೆಯರ ದೌರ್ಬಲ್ಯ, ಅಸಹಾಯಕತೆ ಬಹಿರಂಗಪಡಿಸಿದ ಪ್ರಕೃತಿ ವಿಕೋಪ

ಸುನಾಮಿಯ ರೌದ್ರನರ್ತನಕ್ಕೆ ಬಹುಪಾಲು ಪರಿಣಾಮ ಎದುರಿಸಿದವರು ಮಹಿಳೆಯರು, ಅನೇಕ ಮಹಿಳೆಯರಿಗೆ ಯಾವ ರೀತಿ ಈಜುವುದು ಎಂದು ಗೊತ್ತಿರಲಿಲ್ಲ.

ಬೆಂಗಳೂರು: ಮಾರಣಾಂತಿಕ ಸುನಾಮಿ ಅಪ್ಪಳಿಸಿ 20 ವರ್ಷಗಳು ಕಳೆದಿವೆ, 2004ನೇ ಇಸವಿ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಹನ್ನೆರಡು ದೇಶಗಳಲ್ಲಿ ಸುನಾಮಿಯಿಂದ ಸುಮಾರು 2,30,000 ಜನರು ಮೃತಪಟ್ಟಿದ್ದಾರೆ. ಭಾರತ, ಇಂಡೋನೇಷ್ಯಾ, ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಥೈಲ್ಯಾಂಡ್‌ನಲ್ಲಿ ಸಾಕಷ್ಟು ಹಾನಿಯುಂಟಾಗಿದೆ.

ಸುನಾಮಿ ಸಮಯದಲ್ಲಿ ತಳಮಟ್ಟದಲ್ಲಿ ಪರಿಹಾರ ಪುನರ್ವಸತಿ ಕಾರ್ಯದಲ್ಲಿ ತೊಡಗಿದ್ದ ಡಾ.ಕೆ.ಸೇಕರ್ ಮತ್ತು ಡಾ.ಸಿ.ಜಯಕುಮಾರ್, ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್ (ಪಿಎಸ್‌ಡಬ್ಲ್ಯೂ), ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ & ನ್ಯೂರೋ ಸೈನ್ಸಸ್ (ನಿಮ್ಹಾನ್ಸ್) ತಜ್ಞರು, ನಿಮ್ಹಾನ್ಸ್‌ನ ಇತರ ಮಾನಸಿಕ ಆರೋಗ್ಯ ತಜ್ಞರು ಪರಿಣಾಮವನ್ನು ವಿವರಿಸಿದರು. ಹಿಂದೂ ಮಹಾಸಾಗರದ ಕೆಳಗೆ ಮಹಿಳೆಯರು ಮತ್ತು ಅವರ ಮಾನಸಿಕ ಆರೋಗ್ಯದ ಮೇಲೆ ಮಾರಣಾಂತಿಕ ಸುನಾಮಿ ಬಹಳಷ್ಟು ಪರಿಣಾಮ ಬೀರಿತು ಎಂಬುದನ್ನು ವಿವರಿಸಿದ್ದಾರೆ.

ಸುನಾಮಿಯ ರೌದ್ರನರ್ತನಕ್ಕೆ ಬಹುಪಾಲು ಪರಿಣಾಮ ಎದುರಿಸಿದವರು ಮಹಿಳೆಯರು, ಅನೇಕ ಮಹಿಳೆಯರಿಗೆ ಯಾವ ರೀತಿ ಈಜುವುದು ಎಂದು ಗೊತ್ತಿರಲಿಲ್ಲ. ಹೀಗಾಗಿ ಜನರ ಸಾವು, ವಿನಾಶ, ನಷ್ಟ ಸಾಕಷ್ಟು ಸಂಭವಿಸಿದವು. ಡಿಸೆಂಬರ್ 26, 2004 ರ ಆ ದಿನ ಬೆಳಗ್ಗೆ ದೇವರಂತೆ ಕಾಣುತ್ತಿದ್ದ ಸಾಗರ ಇದ್ದಕ್ಕಿದ್ದಂತೆ ರೌದ್ರನರ್ತನ ತೋರಿಸಿ ಅನೇಕ ಜನರನ್ನು ಬಲಿತೆಗೆದುಕೊಂಡಿತು.

ಕಡಲೂರಿನಲ್ಲಿ, ಕೆಲವು ಋತುಚಕ್ರ ಹೊಂದಿದ ಮಹಿಳೆಯರು ಸಮುದ್ರ ದೇವತೆಯನ್ನು ಮುಟ್ಟಿದ ಕಾರಣದಿಂದ ಕೋಪಗೊಂಡು ಸುನಾಮಿ ಬಂತು ಎಂದು ಜನರು ನಂಬಿದ್ದರು ಎನ್ನುತ್ತಾರೆ ಡಾ ಸೇಕರ್.

ಸುನಾಮಿಯು ಹಿಂದೆಂದಿಗಿಂತಲೂ ಮಹಿಳೆಯರ ದುರ್ಬಲತೆಯನ್ನು ಹೆಚ್ಚು ಪರೀಕ್ಷೆಗೊಡ್ಡಿತು. ಅನೇಕ ವಿಧವೆಯರು ಮರುಮದುವೆಯಾದಾಗ, ಮಕ್ಕಳಿಲ್ಲದ ಮತ್ತು ಸರ್ಕಾರದಿಂದ ಭಾರಿ ಪರಿಹಾರವನ್ನು ನೀಡಿದ ಕೆಲವರನ್ನು ಹೊರತುಪಡಿಸಿ ಅನೇಕ ಸಂತ್ರಸ್ತ ಸ್ಥಳಗಳಲ್ಲಿ ವಿಧವೆಯ ಮರುವಿವಾಹವು ಸುಲಭವಾದ ಆಯ್ಕೆಯಾಗಿರಲಿಲ್ಲ. ಇದು ನಾಗಪಟ್ಟಿಣಂನಲ್ಲಿತ್ತು ಎಂದು ಹೇಳಿದರು.

ಕೇರಳದ ಕೆಲವು ಸ್ಥಳಗಳಲ್ಲಿ, ತಮ್ಮ ಮಕ್ಕಳನ್ನು ಕಳೆದುಕೊಂಡ ಮಹಿಳೆಯರನ್ನು ಅವರ ಕುಟುಂಬದವರು ಅಶುಭವೆಂದು ಹೇಳುತ್ತಿದ್ದರು. ಮೊದಲ ಉಬ್ಬರವಿಳಿತವು ಕಡಿಮೆಯಾದ ನಂತರ, ಸಮುದ್ರದ ತಳದಲ್ಲಿ ಬಹಳಷ್ಟು ಮೀನುಗಳು ಕಂಡುಬಂದವು. ಮುಂದೆ ಏನಾಗುತ್ತಿದೆ ಎಂಬುದರ ಅರಿವಿಲ್ಲದೆ, ಮಹಿಳೆಯರು ತಮ್ಮ ಮಕ್ಕಳೊಂದಿಗೆ ಮೀನುಗಳನ್ನು ತೆಗೆದುಕೊಳ್ಳಲು ಹೋದರು. ಮತ್ತೆ ಉಬ್ಬರವಿಳಿತ ಬಂದು ತಮ್ಮ ಚಿಕ್ಕ ಮಕ್ಕಳನ್ನು ಕಳೆದುಕೊಂಡರು ಎಂದು ಸೆಕರ್ ಹೇಳಿದರು.

ಗಂಡ ಮತ್ತು ಮಕ್ಕಳನ್ನು ಕಳೆದುಕೊಂಡ ಮಹಿಳೆಯರಿಗೆ ಕೆಟ್ಟ ಶಕುನ ಎಂಬ ಹಣೆಪಟ್ಟಿ’

"ಅನೇಕ ಮಹಿಳೆಯರು, ವಿಶೇಷವಾಗಿ ಮೀನುಗಾರ ಸಮುದಾಯದವರು ಸಿಂಡ್ರೋಮ್‌ನಿಂದ ಬಳಲುತ್ತಿದ್ದಾರೆ" ಎಂದು ಪಿಎಸ್ ಡಬ್ಲ್ಯು ತಜ್ಞರು ಹೇಳಿದರು. ಸಾಮಾನ್ಯವಾಗಿ ಮೀನುಗಾರ ಮಹಿಳೆಯರು ತಮ್ಮ ಮನೆಯ ಪುರುಷರನ್ನು ಸ್ವೀಕರಿಸಲು ಹೋಗುತ್ತಾರೆ, ಅವರು ಟ್ರಾಲರ್‌ಗಳಲ್ಲಿ ಸಮುದ್ರಕ್ಕೆ ಹೋಗುತ್ತಾರೆ. ಆ ದಿನ ಬೆಳಗ್ಗೆ, ಅನೇಕ ಮಹಿಳೆಯರು ತಮ್ಮ ಪುರುಷರನ್ನು ಸ್ವೀಕರಿಸಲು ಹೋಗಿದ್ದರು. ಸಾಗರದಲ್ಲಿ ಉಬ್ಬರವಿಳಿತದ ಬೃಹತ್ ಗೋಡೆಗಳನ್ನು ನೋಡಿ ತಮ್ಮ ಪ್ರಾಣಕ್ಕಾಗಿ ಓಡಿದರು. ಅಲ್ಲಿ ಓಡುತ್ತಿದ್ದಂತೆ ಅವರ ಸೀರೆಗಳು ಪೊದೆಗಳಲ್ಲಿ ಮತ್ತು ಇತರ ಅಡೆತಡೆಗಳಲ್ಲಿ ಸಿಕ್ಕಿಹಾಕಿಕೊಂಡು ಹೊರಬಂದವು. ಪರಿಹಾರ ಕೇಂದ್ರಗಳಿಗೆ ಕರೆದೊಯ್ಯುವಾಗ ಅವರು ಬೆತ್ತಲೆ ಸಿಂಡ್ರೋಮ್‌ನಿಂದ ಬಳಲುತ್ತಿದ್ದರು. ನಾವು ಅವರಿಗೆ ಸಲಹೆ ನೀಡಬೇಕಾಗಿತ್ತು, ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನುತ್ತಾರೆ ಸೆಕರ್.

ನಿಕೋಬಾರ್‌ನ ಕೆಲವು ಮಕ್ಕಳು ತಮ್ಮ ಶಿಕ್ಷಕರ ಸೀರೆಯನ್ನು ಹಿಡಿದು ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿದ ಕಟುವಾದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

ಸುನಾಮಿಯಿಂದ ಪತ್ನಿಯನ್ನು ಕಳೆದುಕೊಂಡ ಹೆಚ್ಚಿನ ಪುರುಷರು ಮರುಮದುವೆಯಾದರು, ಆದರೆ ಹೆಚ್ಚಿನ ವಿಧವೆಯರಿಗೆ ಸಾಮಾಜಿಕ ನಿಯಮಗಳು ಮತ್ತು ಸ್ಟೀರಿಯೊಟೈಪ್‌ಗಳಿಂದಾಗಿ ಮರುಮದುವೆ ಸುಲಭದ ಆಯ್ಕೆಯಾಗಿರಲಿಲ್ಲ. ಅವರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದರು. ಉನ್ನತ ಶಿಕ್ಷಣವನ್ನು ಪಡೆಯಬೇಕಾಗಿದ್ದ ಹೆಣ್ಣು ಮಕ್ಕಳು ಕುಟುಂಬದ ಸ್ಥಿತಿ, ಜೀವನೋಪಾಯ ಮತ್ತು ಆರ್ಥಿಕ ಅಡಚಣೆಗಳಿಂದಾಗಿ ಮದುವೆಯಾದರು ಎಂದರು.

ಗಂಡಂದಿರು ಮತ್ತು ಮಕ್ಕಳನ್ನು ಕಳೆದುಕೊಂಡ ಮಹಿಳೆಯರನ್ನು ಅಪಶಕುನ ಎಂದು ಬ್ರಾಂಡ್ ಮಾಡಲಾಯಿತು. ಸುನಾಮಿಯ ಮೊದಲು ಟ್ಯೂಬೆಕ್ಟಮಿಗೆ ಒಳಗಾದ ಅನೇಕರು ಮರುಪರೀಕ್ಷೆಗೆ ಒಳಗಾಗಿದ್ದರು. ಇದು ಅವರ ಒತ್ತಡದ ಮಟ್ಟವನ್ನು ಕಡಿಮೆ ಮಾಡಿತು ಮತ್ತು ಅವರಿಗೆ ಭರವಸೆಯನ್ನು ನೀಡಿತು. ನಾಗಪಟ್ಟಣಂ ಮತ್ತು ಇತರ ಪ್ರಭಾವಿತ ಜಿಲ್ಲೆಗಳಲ್ಲಿ, ಇಂತಹ ಸಾಕಷ್ಟು ಶಸ್ತ್ರಚಿಕಿತ್ಸೆಗಳು ವರದಿಯಾಗಿವೆ. ಸಂತಾನೋತ್ಪತ್ತಿ ವಯಸ್ಸನ್ನು ಮೀರಿದ ಮಹಿಳೆಯರಿಗೆ ಇದು ಕೆಟ್ಟದಾಗಿದೆ ಎನ್ನುತ್ತಾರೆ ಡಾ ಜಯಕುಮಾರ್.

ಮಾಜಿ ನಿರ್ದೇಶಕ ಡಾ. ಡಿ.ನಾಗರಾಜ, ನಿಮ್ಹಾನ್ಸ್ ಮತ್ತು ಸಂಬಂಧಿತ ಸಾಂಸ್ಥಿಕ ಯೋಜನೆಗಳ ಅಡಿಯಲ್ಲಿ ಸುಮಾರು 150 ಮಾನಸಿಕ ಆರೋಗ್ಯ ತಜ್ಞರು ಮತ್ತು ಸಿಬ್ಬಂದಿಗಳ ತಂಡವು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಪುದುಚೇರಿಯಲ್ಲಿ ಸುನಾಮಿ ಸಂತ್ರಸ್ತರಿಗೆ ಮಾನಸಿಕ-ಸಾಮಾಜಿಕ ಬೆಂಬಲವನ್ನು ನೀಡುವಲ್ಲಿ ದಣಿವರಿಯದೆ ಕೆಲಸ ಮಾಡಿದೆ. 2005 ರಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ನಿಮ್ಹಾನ್ಸ್ ನ್ನು ವಿಪತ್ತು ನಿರ್ವಹಣೆಯಲ್ಲಿ ಮಾನಸಿಕ ಸಾಮಾಜಿಕ ಬೆಂಬಲಕ್ಕಾಗಿ ನೋಡಲ್ ಕೇಂದ್ರವಾಗಿ ಗೊತ್ತುಪಡಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Blast: ಅಲ್ ಫಲಾಹ್ ವಿವಿ ಸಂಸ್ಥಾಪಕ ಜಾವೆದ್ ಅಹ್ಮದ್ ಸಿದ್ದಿಕಿ ಬಂಧನ!

Asia Cup Rising Stars T20: ಓಮನ್ ತಂಡವನ್ನು ಸೋಲಿಸಿ ಭಾರತ ಸೆಮಿಫೈನಲ್ ಪ್ರವೇಶ

ಶಬರಿಮಲೆಯಲ್ಲಿ ಜನದಟ್ಟಣೆ: ಎರಡು ದಿನದಲ್ಲಿ 2 ಲಕ್ಷ ಅಯ್ಯಪ್ಪ ಭಕ್ತರ ಭೇಟಿ; ಮಹಿಳಾ ಭಕ್ತೆ ಸಾವು!

ಬಾಬಾ ಸಿದ್ದಿಕಿ ಕೊಲೆ: ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಅಮೆರಿಕದಿಂದ ಗಡೀಪಾರು!

POCSO case: ಯಡಿಯೂರಪ್ಪಗೆ ಸಂಕಷ್ಟ; ಡಿಸೆಂಬರ್ 2 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಸಮನ್ಸ್!

SCROLL FOR NEXT