RSS-BJP leader KN Govindacharya  
ರಾಜ್ಯ

ಸೈದ್ಧಾಂತಿಕ ಹೋರಾಟದ ಕೇಂದ್ರವಾಗಲಿರುವ ಕಲಬುರಗಿ: RSS-BJP ಸಭೆಗೆ ಪ್ರತಿಯಾಗಿ ಪ್ರಗತಿಪರ ನಾಯಕರ ರ‍್ಯಾಲಿ

ಆರೆಸ್ಸೆಸ್-ಬಿಜೆಪಿ ಮಾಜಿ ನಾಯಕ ಕೆಎನ್ ಗೋವಿಂದಾಚಾರ್ಯ ಮತ್ತು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಬಲಪಂಥೀಯ ಗುಂಪುಗಳು ಜನವರಿ 29 ಮತ್ತು ಫೆಬ್ರವರಿ 6 ರ ನಡುವೆ ಮೆಗಾ ಕಾರ್ಯಕ್ರಮ ಆಯೋಜಿಸಲು ತಯಾರಿ ನಡೆಸುತ್ತಿವೆ.

ಬೆಂಗಳೂರು: ಇತ್ತೀಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳಿಂದಾಗಿ ಕಲಬುರಗಿ ಜಿಲ್ಲೆ ರಾಜಕೀಯ ಸೈದ್ಧಾಂತಿಕ ಬಿಕ್ಕಟ್ಟಿನ ಕೇಂದ್ರಬಿಂದುವಾಗುವ ಸಾಧ್ಯತೆಯಿದೆ.

ಆರೆಸ್ಸೆಸ್-ಬಿಜೆಪಿ ಮಾಜಿ ನಾಯಕ ಕೆಎನ್ ಗೋವಿಂದಾಚಾರ್ಯ ಮತ್ತು ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ನೇತೃತ್ವದಲ್ಲಿ ಬಲಪಂಥೀಯ ಗುಂಪುಗಳು ಜನವರಿ 29 ಮತ್ತು ಫೆಬ್ರವರಿ 6 ರ ನಡುವೆ ಮೆಗಾ ಕಾರ್ಯಕ್ರಮ ಆಯೋಜಿಸಲು ತಯಾರಿ ನಡೆಸುತ್ತಿವೆ. ಪ್ರಗತಿಪರ ನಾಯಕರ ಒಕ್ಕೂಟವು ತಮ್ಮದೇ ಆದ ಕಾರ್ಯಕ್ರಮವನ್ನು ಪ್ರಾರಂಭಿಸಲು ಪ್ರತಿಜ್ಞೆ ಮಾಡಿದೆ. ಸೌಹಾರ್ದ ಭಾರತ ಉತ್ಸವ- ಜನವರಿ 17 ರಂದು ಪ್ರಾರಂಭಲಾಗಿದೆ.

ಆದರೆ ಲಿಂಗಾಯತ ವಿದ್ವಾಂಸ ಪ್ರೊ.ಮೀನಾಕ್ಷಿ ಬಾಲಿ ಅವರ ಪ್ರಕಾರ, ಇದು ಸಾಮಾನ್ಯ ಪ್ರತಿಭಟನೆಯಲ್ಲ. "ನಾವು ಅವರನ್ನು ತಡೆಯಲು ಬಯಸುವುದಿಲ್ಲ, ಆದರೆ ಯಾವುದೇ ಸಂಭವನೀಯ ಕೋಮುವಾದ ಇದ್ದರೆ, ಬಲಪಂಥೀಯ ರ‍್ಯಾಲಿಯು "ಫಲಪ್ರದವಾಗುವುದಿಲ್ಲ" ಮತ್ತು ಅದನ್ನು ಕೆಡವಲು ನಾವು ಕೆಲಸ ಮಾಡುತ್ತೇವೆ ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ ಎಂದಿದ್ದಾರೆ.

ಡಿಸೆಂಬರ್ 19 ರಂದು ಬೆಂಗಳೂರಿನಲ್ಲಿ ನಿರ್ಣಾಯಕ ಪೂರ್ವಸಿದ್ಧತಾ ಸಭೆ ನಡೆಯಲಿದೆ. ನಂತರದ ಕಾರ್ಯತಂತ್ರದ ಅಧಿವೇಶನಗಳನ್ನು ದಾವಣಗೆರೆ, ವಿಜಯಪುರ ಮತ್ತು ಇತರ ಪಟ್ಟಣಗಳಲ್ಲಿ ನಡೆಸಲಾಗಿದೆ ಎಂದು ಬಾಲಿ ವಿವರಿಸಿದ್ದಾರೆ. ಬಲಪಂಥೀಯರು ತಮ್ಮ ಕಾರ್ಯಕ್ರಮಕ್ಕೆ ಅಪಾರ ಪ್ರಮಾಣದ ಹಣವನ್ನು ಸುರಿಯುತ್ತಿದ್ದಾರೆ ಎಂದು ವರದಿಗಳು ಹೇಳಿದರೆ, ಪ್ರಗತಿಪರ ನಾಯಕರು ತಮ್ಮ ಕಾರ್ಯಕ್ರಮ ನಡೆಸಲು ಹಣಕ್ಕಾಗಿ ಹರಸಾಹಸ ಪಡುತ್ತಿದ್ದಾರೆ. "ನಾವು ನಮ್ಮಲ್ಲಿರುವ ಸ್ವಲ್ಪ ಹಣವನ್ನು ಒಟ್ಟುಗೂಡಿಸುತ್ತಿದ್ದೇವೆ ಎಂದು ಬಾಲಿ ವಿಷಾದಿಸಿದರು.

ಕಾಂಗ್ರೆಸ್ ಬೆಂಬಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಾಲಿ, “ಕಾಂಗ್ರೆಸ್‌ಗೆ ಯಾವುದೇ ತಂತ್ರವಿಲ್ಲ. ಇಲ್ಲಿ ಏನು ಅಪಾಯವಿದೆ ಎಂದು ಅವರಿಗೆ ಅರ್ಥವಾಗುತ್ತಿಲ್ಲ, ಹೀಗಾಗಿ ಒಂದು ಏಕೀಕೃತ ಪ್ರಗತಿಪರ ಪ್ರತಿಕ್ರಿಯೆಯ ತೀವ್ರ ಅಗತ್ಯವನ್ನು ಗುರುತಿಸಲು ಪಕ್ಷವು ವಿಫಲವಾಗಿದೆ ಎಂದು ಆರೋಪಿಸಿದರು.

ಏತನ್ಮಧ್ಯೆ, ಜನವರಿ 29 ರ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಅವರು ವಿರೋಧ ಎದುರಿಸುತ್ತಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದರು. “ಇದು ಭಾರತ ವಿಕಾಸ ಸಂಗಮ್ ಮೂಲಕ ಗೋವಿಂದಾಚಾರ್ಯರು ಯೋಜಿಸಿರುವ ಪ್ರಮುಖ ಕಾರ್ಯಕ್ರಮವಾಗಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಯುವ ಸರಣಿಯಲ್ಲಿ ಇದು ಏಳನೆಯದು, ”ಸೇಡಮ್ ಹೇಳಿದರು. ಕಲಬುರಗಿಯಲ್ಲಿ 25 ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ ಎಂದಿದ್ದಾರೆ.

ಪ್ರತಿಭಟನಾ ರ‍್ಯಾಲಿಯ ಬಗ್ ನಾವುಗೆ ಗಮನ ಹರಿಸುತ್ತಿಲ್ಲ. ಅವರ ಪ್ರತಿಭಟನೆಗೆ ನಾವು ಹೆದರುವುದಿಲ್ಲ. ಆದರೆ ಈ ಕಾರ್ಯಕ್ರಮ ಅದಕ್ಕಿಂತ ದೊಡ್ಡದಾಗಿದೆ ಎಂದು ಪ್ರಗತಿಪರ ಪ್ರತಿಭಟನೆಯ ಸಂಘಟಕರಲ್ಲಿ ಒಬ್ಬರಾದ ಉಪನ್ಯಾಸಕ ಪ್ರೊ. ಆರ್.ಕೆ.ಹುಡುಗಿ ವಿವರಿಸಿದ್ದಾರೆ. ಮುಂದಿನ ವರ್ಷ, ಆರ್‌ಎಸ್‌ಎಸ್ ತನ್ನ ಶತಮಾನೋತ್ಸವವನ್ನು ಆಚರಿಸುತ್ತದೆ. ಈ ಕಾರ್ಯಕ್ರಮವು ಅದರ ಮೆಗಾ ಶತಮಾನೋತ್ಸವದ ಪೂರ್ವಸಿದ್ಧತಾ ಕಾರ್ಯಕ್ರಮವಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

SCROLL FOR NEXT