ಸಾಂದರ್ಭಿಕ ಚಿತ್ರ 
ರಾಜ್ಯ

ಮೈಸೂರು: ಪತ್ನಿಯ ಶೀಲ ಶಂಕಿಸಿ 12 ವರ್ಷದಿಂದ ಮೂರು ಬೀಗ ಜಡಿದು ಗೃಹ ಬಂಧನ; ಆರೋಪಿ ಅರೆಸ್ಟ್

ಪತ್ನಿಯ ನಡತೆ ಶಂಕಿಸಿ 12 ವರ್ಷದಿಂದ ಗೃಹಬಂಧನದಲ್ಲಿಟ್ಟಿರುವುದು ಪತ್ತೆಯಾಗಿದ್ದು, ಅಜ್ಞಾತವಾಸದಲ್ಲಿದ್ದ ಮಹಿಳೆಯನ್ನು ಪೊಲೀಸರ ಸಮ್ಮುಖದಲ್ಲಿ ಕತ್ತಲೆ ಕೋಣೆಯಿಂದ ಹೊತರಲಾಗಿದೆ.

ಬೆಂಗಳೂರು: ಪತ್ನಿಯ ನಡತೆ ಶಂಕಿಸಿ 12 ವರ್ಷದಿಂದ ಗೃಹಬಂಧನದಲ್ಲಿಟ್ಟಿರುವುದು ಪತ್ತೆಯಾಗಿದ್ದು, ಅಜ್ಞಾತವಾಸದಲ್ಲಿದ್ದ ಮಹಿಳೆಯನ್ನು ಪೊಲೀಸರ ಸಮ್ಮುಖದಲ್ಲಿ ಕತ್ತಲೆ ಕೋಣೆಯಿಂದ ಹೊತರಲಾಗಿದೆ.

ಖಚಿತ ಮಾಹಿತಿ ಮೇರೆಗೆ  ಮೈಸೂರು ಜಿಲ್ಲೆಯ ಹಿರೇಗೆ ಗ್ರಾಮದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ ಬುಧವಾರ ರಾತ್ರಿ ಸಂತ್ರಸ್ತೆ ಸುಮಾಳನ್ನು ರಕ್ಷಿಸಿದ್ದು, ಆರೋಪಿ ಪತಿ ಸಣ್ಣಾಲಯ್ಯನನ್ನು ಬಂಧಿಸಿದ್ದಾರೆ.

ಸುಮಾ ಆರೋಪಿಯ ಮೂರನೇ ಪತ್ನಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮದುವೆಯಾದ ದಿನದಿಂದಲೂ ಆಕೆಯನ್ನು ಅನುಮಾನಿಸುತ್ತಿದ್ದ. ಮದುವೆಯಾದ ಮೊದಲ ವಾರದಲ್ಲೇ ಆಕೆಯನ್ನು ತಮ್ಮ ನಿವಾಸದ ಕೊಠಡಿಯಲ್ಲಿ ಕೂಡಿ ಹಾಕಿದ್ದ ಎಂದು ಹೇಳಲಾಗುತ್ತಿದೆ.

ಆತನ ಚಿತ್ರಹಿಂಸೆ ತಾಳಲಾರದೆ ಮೊದಲ ಇಬ್ಬರು ಪತ್ನಿಯರು ಆರೋಪಿಗಳನ್ನು ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಪತಿ ಮೂರು ಬೀಗ ಹಾಕಿ ಬಾಗಿಲು ಹಾಕಿದ್ದು, ಯಾರೊಂದಿಗೂ ಮಾತನಾಡದಂತೆ ಪತ್ನಿಗೆ ಎಚ್ಚರಿಕೆ ನೀಡಿದ್ದಾನೆ.

ಪತ್ನಿ ಬೇರೆ ಯಾರ ಜತೆಗೂ ಮಾತನಾಡದಂತೆ ಜಾಗರೂಕತೆ ವಹಿಸುತ್ತಿದ್ದ ಸಣ್ಣಾಲಯ್ಯ ಮನೆಯ ಕಿಟಕಿಗಳನ್ನೂ ಮುಚ್ಚಿ ಭದ್ರಪಡಿಸಿದ್ದ. ಕೋಣೆಯ ಒಳಗೆ ಶೌಚಾಲಯ ಇಲ್ಲದ ಕಾರಣ ಬಕೆಟ್ ಇರಿಸಿ ರಾತ್ರಿ ವೇಳೆ ಮಲ, ಮೂತ್ರ ಹೊರಗೆ ಸಾಗಿಸುತ್ತಿದ್ದ. ಇದರ ಕುರಿತು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದನ್ನು ನೋಡಲಾರದೆ ಆಕೆಯ ಸಂಬಂಧಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಎಎಸ್‌ಐ ಸುಭಾನ್, ವಕೀಲ ಸಿದ್ದಪ್ಪಾಜಿ, ಸಾಮಾಜಿಕ ಕಾರ್ಯಕರ್ತೆ ಜಶೀಲಾ ಅವರನ್ನೊಳಗೊಂಡ ತಂಡ ದಾಳಿ ನಡೆಸಿ ಸಂತ್ರಸ್ತೆಯನ್ನು ರಕ್ಷಿಸಿದೆ. ಆರೋಪಿ ಪತಿ ತನ್ನ ಪತ್ನಿ ಮನೆಯಿಂದ ಹೊರಗೆ ಬಂದರೆ ಅಥವಾ ಯಾರೊಂದಿಗಾದರೂ ಮಾತನಾಡಲು ಪ್ರಯತ್ನಿಸಿದರೆ, ಹೆಂಡತಿಗೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ.

ಸಂತ್ರಸ್ತೆಯ ತಾಯಿ ಸ್ಥಳೀಯ ಮುಖಂಡರ ಬಳಿ ತೆರಳಿ ಪರಿಹಾರ ಕಂಡುಕೊಳ್ಳಲು ಮುಂದಾದರೂ ಆರೋಪಿ ತನ್ನ ಕ್ರೌರ್ಯ ಮುಂದುವರಿಸಿದ್ದ. ಸಂತ್ರಸ್ತೆಗೆ ಆರೋಪಿಯಿಂದ ಇಬ್ಬರು ಮಕ್ಕಳಿದ್ದು, ಅವರನ್ನು ಈಗ ಆಕೆಯ ಪೋಷಕರ ಮನೆಗೆ ಕಳುಹಿಸಲಾಗಿದೆ.

ನನ್ನ ಪತಿ ನನ್ನನ್ನು ಲಾಕ್ ಮಾಡಿದರು ಮತ್ತು ನನ್ನ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಲು ನನಗೆ ಅವಕಾಶ ನೀಡುತ್ತಿರಲಿಲ್ಲ. ವಿನಾಕಾರಣ ಪದೇ ಪದೇ ಹೊಡೆಯುತ್ತಿದ್ದ. ಹಳ್ಳಿಯಲ್ಲಿ ಎಲ್ಲರೂ ಅವನಿಗೆ ಹೆದರುತ್ತಾರೆ. ಅವನು ತಡರಾತ್ರಿ ಮನೆಗೆ ಬರುವವರೆಗೂ ನನ್ನ ಮಕ್ಕಳನ್ನು ನನ್ನೊಂದಿಗೆ ಇರಲು ಬಿಡುತ್ತಿರಲಿಲ್ಲ. ನಾನು ಅವರಿಗೆ ಸಣ್ಣ ಕಿಟಕಿಯ ಮೂಲಕ ಆಹಾರವನ್ನು ನೀಡಬೇಕಾಗಿತ್ತು ಎಂದು ಸಂತ್ರಸ್ತೆ ಸುಮಾ ವಿವರಿಸಿದ್ದಾರೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT