ಸಾಂದರ್ಭಿಕ ಚಿತ್ರ 
ರಾಜ್ಯ

ತೀರ್ಥಯಾತ್ರೆ ವೇಳೆ ಫೋನ್, 2.5 ಲಕ್ಷ ರೂ. ಕಳೆದುಕೊಂಡ ಬೆಂಗಳೂರಿನ ದಂಪತಿ

ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ತೀರ್ಥೋದ್ಭವಕ್ಕೆ ತೆರಳಿದ್ದ ಬೆಂಗಳೂರಿನ ನಾಗರಭಾವಿ ನಿವಾಸಿ ಎಸ್.ಎಲ್.ಶಿವಾನಂದ ಹಾಗೂ ಅವರ ಪತ್ನಿ ಸುಧಾ ಕಹಿ ನೆನಪುಗಳೊಂದಿಗೆ ಮನೆಗೆ ಮರಳಿದ್ದು,

ಬೆಂಗಳೂರು: ಉತ್ತರ ಪ್ರದೇಶದ ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ತೀರ್ಥೋದ್ಭವಕ್ಕೆ ತೆರಳಿದ್ದ ಬೆಂಗಳೂರಿನ ನಾಗರಭಾವಿ ನಿವಾಸಿ ಎಸ್.ಎಲ್.ಶಿವಾನಂದ ಹಾಗೂ ಅವರ ಪತ್ನಿ ಸುಧಾ ಕಹಿ ನೆನಪುಗಳೊಂದಿಗೆ ಮನೆಗೆ ಮರಳಿದ್ದು, ದುಷ್ಕರ್ಮಿಗಳು ಈ ದಂಪತಿಯ ಮೊಬೈಲ್ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

ವಾರಣಾಸಿಯಲ್ಲಿ ಫೋನ್ ಹಾಗೂ ಹಣ ಕಳೆದುಕೊಂಡಿದ್ದ ದಂಪತಿ ಬೆಂಗಳೂರು ತಲುಪಿದ ನಂತರ ಹಳೆ ನಂಬರ್ ಗೆ ಹೊಸ ಸಿಮ್ ಕಾರ್ಡ್‌ ಖರೀದಿಸಿದ್ದಾರೆ. ಆದರೆ ಅದನ್ನು ಸಕ್ರಿಯಗೊಳಿಸಿದ ನಂತರ, ದುಷ್ಕರ್ಮಿಗಳು ಯುಪಿಐ ಮೂಲಕ ಶಿವಾನಂದ ಅವರ ಖಾತೆಯಿಂದ 2.5 ಲಕ್ಷ ರೂಪಾಯಿ ಹಣ ಕದ್ದಿದ್ದಾರೆ ಎಂದು ಅವರು ಹೇಳಿದ್ದಾರೆ.

ದಂಪತಿ ಜನವರಿ 22 ರಂದು ಬೆಂಗಳೂರಿನಿಂದ ವಾರಣಾಸಿಗೆ ತೆರಳಿದ್ದರು. ಜನವರಿ 24 ರಂದು ಬೆಳಗ್ಗೆ 8.30 ಕ್ಕೆ ಅವರು ಪವಿತ್ರ ಸ್ನಾನಕ್ಕಾಗಿ ಪ್ರಯಾಗರಾಜ್‌ನಲ್ಲಿರುವ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕಳ್ಳರು ದಂಪತಿಯನ್ನು ಟಾರ್ಗೆಟ್ ಮಾಡಿದ್ದು, ಶಿವಾನಂದ ಮತ್ತು ಸುಧಾ ಅವರ ಬಳಿಯಿದ್ದ ಎರಡು ಮೊಬೈಲ್‌ಗಳನ್ನು 8 ಸಾವಿರ ರೂ. ನಗದು ಕದ್ದಿದ್ದಾರೆ.

ಈ ಸಂಬಂಧ ದೂರು ದಾಖಲಿಸಲು ಅವರು ಸ್ಥಳೀಯ ಪೊಲೀಸ್ ಠಾಣೆಗೆ ತೆರೆಳಿದ್ದಾರೆ. ಆದರೆ ಅವರು ದೂರು ದಾಖಲಿಸಿಕೊಂಡಿಲ್ಲ. ಅದೃಷ್ಟವಶಾತ್, ಸುಧಾ ಅವರ ಬಳಿ ಸ್ವಲ್ಪ ಹಣ ಇತ್ತು, ಅದು ಅವರು ಜನವರಿ 29 ರಂದು ಮನೆಗೆ ಮರಳಲು ಸಹಾಯ ಮಾಡಿದೆ. ಎರಡು ದಿನಗಳ ನಂತರ, ಅವರು ಹೊಸ ಸಿಮ್ ಕಾರ್ಡ್‌ ಪಡೆದಿದ್ದಾರೆ. ಅದನ್ನು ಸಕ್ರಿಯಗೊಳಿಸಿದ ನಂತರ, ಶಿವಾನಂದ ಅವರ ಖಾತೆಯಿಂದ 2.5 ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದು, ಅವರ ಖಾತೆಯಲ್ಲಿ ಕೇವಲ 18 ರೂ. ಉಳಿದಿದೆ.

ಆರೋಪಿಗಳು ನನ್ನ ಬ್ಯಾಂಕ್ ಖಾತೆಯಿಂದ ಯುಪಿಐ ಮೂಲಕ ಹಣವನ್ನು ಡ್ರಾ ಮಾಡಿದ್ದಾರೆ. “ಸಿಮ್ ಅನ್ನು ಸಕ್ರಿಯಗೊಳಿಸಿದ ನಂತರವೇ ಈ ಅಪರಾಧ ಬೆಳಕಿಗೆ ಬಂದಿದೆ. ಆರೋಪಿಗಳು, ನನ್ನ ಮೊಬೈಲ್ ಫೋನ್ ಬಳಸಿ, ಜನವರಿ 24 ಮತ್ತು 27 ರ ನಡುವೆ ತಮ್ಮ ಖಾತೆಯಿಂದ ಹಣವನ್ನು ವರ್ಗಾಯಿಸಿದ್ದಾರೆ. ಮೊಬೈಲ್ ಆನ್ ಮಾಡಲು ಪಾಸ್‌ವರ್ಡ್ ಅಗತ್ಯವಾಗಿತ್ತು. ಆದರೆ ವಿಪರೀತದ ರಶ್ ಇದ್ದ ಕಾರಣ, ನಾನು ನನ್ನ ಫೋನ್ ಅನ್ನು ಆಪರೇಟ್ ಮಾಡುವಾಗ ಯಾರಾದರೂ ನನ್ನ ಪಾಸ್ ವರ್ಡ್ ಗಮನಿಸಿರಬಹುದು. ಈ ಸಂಬಂಧ ನಾನು ಪೊಲೀಸರು ಮತ್ತು ಬ್ಯಾಂಕ್‌ಗೆ ದೂರು ನೀಡಿದ್ದೇನೆ ಎಂದು ಅವರು ಶಿವಾನಂದ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT