ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: 5 ಕೋಟಿ ಅಮೆರಿಕನ್ ಡಾಲರ್ ಆಮಿಷಕ್ಕೆ ಬಲಿಯಾಗಿ 31 ಲಕ್ಷ ರು ಹಣ ಕಳೆದುಕೊಂಡ ಮಹಿಳೆ!

ಜಯನಗರ 3ನೇ ಬ್ಲಾಕ್‌ನ ನಿವಾಸಿ ಅನುಪಮಾ ಕಿರಣ್‌ ಎಂಬುವರು ದೂರು ದಾಖಲಿಸಿದ್ದಾರೆ. 5 ಕೋಟಿ ಅಮೆರಿಕನ್ ಡಾಲರ್ ಉಡುಗೊರೆ ನೀಡುವುದಾಗಿ ಇಮೇಲ್ ಬಂದ ಬಳಿಕ ಮಹಿಳೆ ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರು: ವಿದೇಶಿ ಉಡುಗೊರೆ ಆಮೀಷಕ್ಕೆ ಬಲಿಯಾದ ಮಹಿಳೆಯೊಬ್ಬರು ಸುಮಾರು 31 ಲಕ್ಷ ರು ಹಣ ಕಳೆದು ಕೊಂಡಿದ್ದಾರೆ.

ಜಯನಗರ 3ನೇ ಬ್ಲಾಕ್‌ನ ನಿವಾಸಿ ಅನುಪಮಾ ಕಿರಣ್‌ ಎಂಬುವರು ದೂರು ದಾಖಲಿಸಿದ್ದಾರೆ. 5 ಕೋಟಿ ಅಮೆರಿಕನ್ ಡಾಲರ್ ಉಡುಗೊರೆ ನೀಡುವುದಾಗಿ ಇಮೇಲ್ ಬಂದ ಬಳಿಕ ಮಹಿಳೆ ಹಣ ಕಳೆದುಕೊಂಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ 12ರಂದು ತನಗೆ ಇಮೇಲ್‌ ಬಂದಿದ್ದು, ಸುಮಾರು 5 ಕೋಟಿ ಅಮೆರಿಕನ್‌ ಡಾಲರ್‌ ಗಿಫ್ಟ್‌ ಗೆದ್ದಿರುವುದಾಗಿ ತಿಳಿಸಿದ್ದರು. ಆಕೆಗೆ ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿಯಿಂದ ರೇಮಂಡ್ ಆಸ್ಟಿನ್ ಎಂದು ಹೇಳಿಕೊಳ್ಳುವ ಒಬ್ಬ ಆರೋಪಿಯಿಂದ ಕರೆ ಬಂದಿದೆ. ಉಡುಗೊರೆಯನ್ನು ಪಡೆಯಲು ಶುಲ್ಕ ಪಾವತಿಸಲು ಅವರು ರಾಯಭಾರ ಕಚೇರಿಯಿಂದ ಇಮೇಲ್ ಸ್ವೀಕರಿಸುತ್ತಾರೆ ಎಂದು ಹೇಳಿದರು. ಮುಂದಿನ ಹದಿನೈದು ದಿನಗಳಲ್ಲಿ, ಆರೋಪಿಯು ವಿವಿಧ ರೀತಿಯ ಶುಲ್ಕಗಳಿಗೆ ಹಣವನ್ನು ವರ್ಗಾಯಿಸುವಂತೆ ಮಾಡಿದನು.

ಸುಮಾರು ಎರಡು ತಿಂಗಳ ಕಾಲ ಈ ಹಗರಣವು ಹಂತ ಹಂತವಾಗಿ ನಡೆದಿದ್ದು, ಆ ಸಮಯದಲ್ಲಿ ಆರೋಪಿಯು ಹಣವನ್ನು ವಿವಿಧ ರೀತಿಯ ಶುಲ್ಕಗಳಿಗಾಗಿ ವರ್ಗಾಯಿಸಿದ್ದಾಗಿ ತಿಳಿಸಿದ್ದಾರೆ. ಒಬ್ಬ ಆರೋಪಿಯು ಆಕೆಯ ಮನೆಗೆ ಭೇಟಿ ಕೂಡ  ನೀಡಿದ್ದನು.

ಆರೋಪಿಗಳಲ್ಲಿ ಒಬ್ಬರು ಆಕೆಯ ಮನೆಗೆ ಭೇಟಿ ನೀಡಿ ವಿದೇಶಿ ಕರೆನ್ಸಿ ನೋಟುಗಳು ಅಸಲಿಯೇ ಎಂದು ಪರಿಶೀಲಿಸಲು ಕರೆನ್ಸಿ ನೀಡಿದ್ದಾರೆ. ಅನುಪಮಾ ಕರೆನ್ಸಿಯನ್ನು ಬ್ಯಾಂಕ್ ಮತ್ತು ವಿದೇಶಿ ವಿನಿಮಯ ಶಾಖೆಗೆ ಕೊಂಡೊಯ್ದರು, ಅದು ಒರಿಜಿನಲ್ ಹಣ ಎಂದು ದೃಢಪಟ್ಟಿತು.

ಡಿಸೆಂಬರ್ 28 ರಂದು, ಗುಣ ಎಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಆಕೆಯ ಮನೆಯ ಬಳಿಗೆ ಬಂದು ಕೆಲವು ಡಾಲರ್‌ ನೀಡಿದರು. ಡಾಲರ್ ನಿಜವೇ ಎಂದು ಪರಿಶೀಲಿಸುವಂತೆ ಕೇಳಿದರು. ಡಾಲರ್‌ಗಳು ಅಸಲಿ ಎಂದು ತಿಳಿದ ನಂತರ, ಅವಳು ಅವುಗಳನ್ನು ಹಣ ವಿನಿಮಯ ಕೇಂದ್ರದಲ್ಲಿ ರೂಪಾಯಿಗಳಿಗೆ ಬದಲಾಯಿಸಿದ್ದಾರೆ.

ಆಕೆ ಅವರಿಂದ ಸುಮಾರು 45,000 ರೂ ಹಣ ಪಡೆದ ನಂತರ, ಅನುಪಮಾ ಅವರನ್ನು ಸಂಪೂರ್ಣವಾಗಿ ನಂಬಿದ್ದಾರೆ. ಅದಾದ ನಂತರ ವಂಚಕರು ಹೇಳಿದಂತೆ ಕೇಳಿ ಹಣವನ್ನು ವರ್ಗಾಯಿಸಿ ಸುಮಾರು 31 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಗಿಫ್ಟ್ ಹಣ ನೀಡಲು ಬರುವಾಗ ತಾನು ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಸಿಬಿಐ ಕ್ಲಿಯರೆನ್ಸ್ ಶುಲ್ಕ, ತನಿಖಾಧಿಕಾರಿ ಶುಲ್ಕ ಮತ್ತು ಕಸ್ಟಮ್ಸ್ ಕ್ಲಿಯರೆನ್ಸ್ ಪಾವತಿಸದಿದ್ದರೆ ತೊಂದರೆಯಾಗುತ್ತದೆ ಎಂದು ವಂಚಕರು ಆಕೆಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT