ರಾಜ್ಯ

ಶ್ರೀರಂಗಪಟ್ಟಣ: ಸ್ಕೂಟರ್-ಕಾರು ನಡುವೆ ಭೀಕರ ಅಪಘಾತ; ಇಬ್ಬರು ಶಿಕ್ಷಕಿಯರ ದುರ್ಮರಣ

Vishwanath S

ಮಂಡ್ಯ: ಸ್ಕೂಟರ್ ಮತ್ತು ಕಾರು ನಡುವೆ ಡಿಕ್ಕಿಯಾಗಿ ಇಬ್ಬರು ಶಿಕ್ಷಕಿಯರು ಮೃತಪಟ್ಟಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಬಳಿ ನಡೆದಿದೆ. 

ಮೃತರನ್ನು ಶ್ರೀರಂಗಪಟ್ಟಣದ ಹೊಸಹಳ್ಳಿ ಗ್ರಾಮದ ಶಾಲೆ ಶಿಕ್ಷಕಿ ನಾಗರತ್ನ, ಬಸ್ತಿಪುರ ಗ್ರಾಮದ ಶಾಲೆ ಶಿಕ್ಷಕಿ ಮಂಜುಳ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ನಾಗರತ್ನ ಅವರು ಸ್ಥಳದಲ್ಲಿ ಮೃತಪಟ್ಟರೆ, ಮಂಜುಳ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. 

ಶ್ರೀರಂಗಪಟ್ಟಣ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

SCROLL FOR NEXT