ಲಕ್ಕುಂಡಿಯ ಕಾಶಿ ವಿಶ್ವೇಶ್ವರ ದೇವಾಲಯದ ಶಿಲ್ಪ 
ರಾಜ್ಯ

ಗದಗ: ರಾಮಾಯಣದೊಂದಿಗೆ ಲಕ್ಕುಂಡಿಯ ನಂಟು!

ರಾಮಾಯಣ ಮಹಾಕಾವ್ಯದ ಅಪರೂಪದ ಘಟನೆಗಳನ್ನು ಬಿಂಬಿಸುವ ಶಿಲ್ಪಗಳನ್ನು ನೋಡುತ್ತಾ ಹೋದರೆ ಲಕ್ಕುಂಡಿ ಗ್ರಾಮವು ಶ್ರೀರಾಮನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವಂತಿದೆ. ಈ ಗ್ರಾಮವು ಹನುಮಂತನು ಮೂರು ಬೆಟ್ಟಗಳನ್ನು ಹೊತ್ತಿರುವ ಮತ್ತು ರಾವಣನು ಆನೆಯೊಂದಿಗೆ ಹೋರಾಡುವಂತಹ ರಾಮಾಯಣದ ಕೆಲವು ಶಿಲ್ಪಗಳಿಗೆ ನೆಲೆಯಾಗಿದೆ.

ಗದಗ: ರಾಮಾಯಣ ಮಹಾಕಾವ್ಯದ ಅಪರೂಪದ ಘಟನೆಗಳನ್ನು ಬಿಂಬಿಸುವ ಶಿಲ್ಪಗಳನ್ನು ನೋಡುತ್ತಾ ಹೋದರೆ ಲಕ್ಕುಂಡಿ ಗ್ರಾಮವು ಶ್ರೀರಾಮನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವಂತಿದೆ. ಈ ಗ್ರಾಮವು ಹನುಮಂತನು ಮೂರು ಬೆಟ್ಟಗಳನ್ನು ಹೊತ್ತಿರುವ ಮತ್ತು ರಾವಣನು ಆನೆಯೊಂದಿಗೆ ಹೋರಾಡುವಂತಹ ರಾಮಾಯಣದ ಕೆಲವು ಶಿಲ್ಪಗಳಿಗೆ ನೆಲೆಯಾಗಿದೆ.

ಈ ಶಿಲ್ಪಗಳ ಮೂಲ ಪತ್ತೆಹಚ್ಚಲು ವಿವರವಾದ ಸಂಶೋಧನೆಗೆ ಇತಿಹಾಸ ತಜ್ಞರು ಒತ್ತಾಯಿಸುತ್ತಿದ್ದಾರೆ. ಲಕ್ಕುಂಡಿ ಐತಿಹಾಸಿಕ ದೇವಾಲಯಗಳ ಕೇಂದ್ರವಾಗಿದ್ದು, ಗದಗ ಪಟ್ಟಣದಿಂದ 12 ಕಿ.ಮೀ ದೂರದಲ್ಲಿದೆ. ಗ್ರಾಮದಲ್ಲಿ ಒಂದು ಕಾಲದಲ್ಲಿ 101 ದೇವಾಲಯಗಳು ಮತ್ತು 101 ಕೆರೆಗಳು ಇದ್ದವು ಎಂದು ನಂಬಲಾಗಿದೆ, ಆದರೆ ಈಗ ಕೆಲವು ಮಾತ್ರ ಉಳಿದಿವೆ.

ಶ್ರೀರಾಮನು ತನ್ನ ವನವಾಸದ ಸಮಯದಲ್ಲಿ ಲಕ್ಕುಂಡಿ ಗ್ರಾಮವನ್ನು ಪಂಡಿತರು ಮತ್ತು ವಿದ್ವಾಂಸರಿಗೆ ನೀಡಿದನೆಂದು ಕೆಲವು ಇತಿಹಾಸಕಾರರು ಹೇಳುತ್ತಾರೆ ಮತ್ತು ಇದನ್ನು ಶ್ರೀಮದ್ ಲೊಕ್ಕಿಗುಂಡಿ ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ಇತರ ಹಲವು ಸ್ಥಳಗಳಲ್ಲಿ ಹನುಮಂತನು ಒಂದೇ ಬೆಟ್ಟವನ್ನು ಹೊತ್ತಿರುವಂತೆ ಚಿತ್ರಿಸಲಾಗಿದೆ. ಆದರೆ, ಇಲ್ಲಿ ಹನುಮಂತನು ಮೂರು ಬೆಟ್ಟಗಳನ್ನು ಹೊತ್ತಿರುವ ಶಿಲ್ಪವು ಅಪರೂಪವಾಗಿದ್ದು,  ಹೆಚ್ಚಿನ ಸಂಶೋಧನೆಯಾಗಬೇಕೆಂಬ ಒತ್ತಾಯ ಕೇಳಿಬರುತ್ತಿದೆ.

ನಿವೃತ್ತ ಎಎಸ್ಐ ಅಧಿಕಾರಿ ವಿ ಎಸ್ ಹೊಸಮನಿ ಹೇಳುವಂತೆ, ಶ್ರೀರಾಮ ದತ್ತಿ ಮಹಾ ಅಗ್ರಹಾರ ಮತ್ತು ಶ್ರೀಮದ್ ಲೊಕ್ಕಿಗುಂಡಿ ಶಾಸನದ ಪ್ರಕಾರ, ದಶರಥನ ಮಗ ರಾಮನು ಈ ಗ್ರಾಮವನ್ನು ಪಂಡಿತರು ಮತ್ತು ವಿದ್ವಾಂಸರಿಗೆ ನೀಡಿದ್ದನು. ಇದು ಒಂದು ಕಾಲದಲ್ಲಿ ಬ್ರಾಹ್ಮಣರು ಹೆಚ್ಚು ಸಂಖ್ಯೆಯಲ್ಲಿ ವಾಸಿಸುತ್ತಿದ್ದ ದೊಡ್ಡ ಅಗ್ರಹಾರವಾಗಿತ್ತು ಮತ್ತು ಅನೇಕ ಪಂಡಿತರು ಗ್ರಾಮದಲ್ಲಿ ಜಪ ಮತ್ತು ತಪ್ಪಸ್ಸು ಮಾಡುತ್ತಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?