ಹಾನಿಯಾಗಿರುವ ಧಾರ್ಮಿಕ ಕಟ್ಟಡ ದುರಸ್ಥಿಗೊಳಿಸುತ್ತಿರುವ ಕಾರ್ಮಿಕರು 
ರಾಜ್ಯ

ಅಯೋಧ್ಯೆ ರಾಮಮಂದಿರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್: ಅನ್ಯ ಕೋಮಿನ ಧಾರ್ಮಿಕ ಕಟ್ಟಡಕ್ಕೆ ಹಾನಿ!

ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವಕರ ಗುಂಪೊಂದು ಧಾರ್ಮಿಕ ಕಟ್ಟಡವೊಂದನ್ನು ಭಾಗಶ:ವಾಗಿ ಹಾನಿ ಮಾಡಿರುವ ಘಟನೆ ಜಿಲ್ಲೆಯ ತಡಕೋಡು ಗ್ರಾಮದಲ್ಲಿ ನಡೆದಿದೆ.

ಧಾರವಾಡ: ಅಯೋಧ್ಯೆ ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವಕರ ಗುಂಪೊಂದು ಧಾರ್ಮಿಕ ಕಟ್ಟಡವೊಂದನ್ನು ಭಾಗಶ:ವಾಗಿ ಹಾನಿ ಮಾಡಿರುವ ಘಟನೆ ಜಿಲ್ಲೆಯ ತಡಕೋಡು ಗ್ರಾಮದಲ್ಲಿ ನಡೆದಿದೆ. ಗುಂಪು ಯುವಕನ ಮನೆಗೆ ನುಗ್ಗಲು ಯತ್ನಿಸಿದ್ದು, ಯಾವುದೇ ಅನಾಹುತ ನಡೆದಂತೆ ಪೊಲೀಸರು ತಡೆದಿದ್ದಾರೆ..

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಸದ್ದಾಂ ಹುಸೇನ್ (20) ವಿರುದ್ಧ  ಜನವರಿ 21 ರಂದು ಧಾರವಾಡ ಜಿಲ್ಲಾ ಪೊಲೀಸರುಪ್ರಕರಣ ದಾಖಲಿಸಿದ್ದರು ಆತನೊಬ್ಬ ಮೆಕ್ಯಾನಿಕ್ ಎನ್ನಲಾಗಿದೆ. ಈ ವಿಚಾರ ಬುಧವಾರ ರಾತ್ರಿ ಬೆಳಕಿಗೆ ಬಂದಿದ್ದು, ಕೋಮುಗಲಭೆಗೆ ಕಾರಣವಾಗಿತ್ತು. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಟ್ಟಡ ಕೆಡವಿದ ಯುವಕರಿಗಾಗಿ ಶೋಧ ನಡೆಯುತ್ತಿದೆ.

ಗ್ರಾಮದಲ್ಲಿ ಪರಿಸ್ಥಿತಿ ಸಹಜವಾಗಿದ್ದು, ಪೊಲೀಸರು ಬೆಳವಣಿಗೆಗಳ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಎಸ್ಪಿ ಗೋಪಾಲ್ ಬ್ಯಾಕೋಡ್ ತಿಳಿಸಿದ್ದಾರೆ. ಮೊಬೈಲ್‌ನಲ್ಲಿ ಅವಹೇಳನಕಾರಿ ಚಿತ್ರ ಹಾಕಿದ ಸದ್ದಾಂ ಹುಸೇನ್‌ನನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ. ಇದ್ದಕ್ಕಿದ್ದಂತೆ, ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಯುವಕರ ಗುಂಪು ಸದ್ದಾಂ ಮನೆಗೆ ನುಗ್ಗಲು ಪ್ರಯತ್ನಿಸಿತು. ಆದರೆ ಎಚ್ಚೆತ್ತ ಪೊಲೀಸರು ಮತ್ತು ಗ್ರಾಮದ ಕೆಲವು ಹಿರಿಯರು ಅದನ್ನು ತಪ್ಪಿಸಿದರು. ನಂತರ, ಕೆಲವು ಯುವಕರು ಧಾರ್ಮಿಕ ಕಟ್ಟಡದ ಭಾಗವನ್ನು ಕೆಡವಿದ್ದಾರೆ ಎಂದು ಅವರು ಹೇಳಿದರು.

ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿ, ಪ್ರಕರಣ ದಾಖಲಿಸಿಕೊಂಡು ಕಟ್ಟಡ ಕೆಡವಿದವರ ಪತ್ತೆಗೆ ಮುಂದಾಗಿದ್ದೇವೆ. ಯುವಕರ ಬಗ್ಗೆ ಮಾಹಿತಿ ಕಲೆಹಾಕಿದ್ದು, ಶೀಘ್ರದಲ್ಲೇ ಅವರನ್ನು ವಶಕ್ಕೆ ಪಡೆಯಲಾಗುವುದು ಎಂದರು. ಕೆಲ ಕಿಡಿಗೇಡಿಗಳಿಂದಾಗಿ ಗ್ರಾಮದ ವಾತಾವರಣ ಹಾಳಾಗುತ್ತಿದೆ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದರು. ಚಿತ್ರವನ್ನು ಪೋಸ್ಟ್ ಮಾಡಿದ ಯುವಕ ಗ್ರಾಮದ ನಿವಾಸಿ ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಲಿ ವಾಸಿಸುತ್ತಿಲ್ಲ ಮತ್ತು ಅಪರೂಪವಾಗಿ ಗ್ರಾಮಕ್ಕೆ ಭೇಟಿ ನೀಡುತ್ತಾನೆ. ನಾವು ಅವರ ಕೃತ್ಯವನ್ನು ಖಂಡಿಸಿದ್ದೇವೆ, ಆದರೆ ಯಾವುದೂ ನಮ್ಮ ನಿಯಂತ್ರಣದಲ್ಲಿಲ್ಲ ಎಂದು ಅವರು ಹೇಳಿದರು.

ಶ್ರೀರಾಮ ಸೇನೆಯ ಸದಸ್ಯರು ಮತ್ತು ಇತರ ಕಾರ್ಯಕರ್ತರು ಜನವರಿ 30 ರಂದು ಸದ್ದಾಂ ಮನೆಗೆ ಭೇಟಿ ನೀಡಿ ಅಯೋಧ್ಯೆಗೆ ಹೋಗುವಂತೆ ಸವಾಲು ಹಾಕಲು ಯೋಜಿಸಿದ್ದಾರೆ. ಇಂತಹ ಯುವಕರ ಹಿಂದಿರುವ ಸೂತ್ರಧಾರರು ಯಾರು ಎಂಬುದು ಕೂಡ ತಿಳಿಯಬೇಕಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IndiGo ಅವಾಂತರ ತಹಬದಿಗೆ: ಅಡಚಣೆ ಪ್ರಮಾಣ ಇಳಿಕೆ; 'ಹಂತಹಂತವಾಗಿ ಮರಳುತ್ತಿದ್ದೇವೆ' ಎಂದ CEO

LeT ಜೊತೆಗೆ ಒಪ್ಪಂದ; ಹಮಾಸ್ 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿ; ಭಾರತಕ್ಕೆ ಇಸ್ರೇಲ್ ಒತ್ತಾಯ!

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ: 'ತಿಥಿ' ಹೀರೋಗೆ ಇಂದೆಂಥಾ ಸ್ಥಿತಿ?, ಅಭಿ ಈಗ ದಿನಗೂಲಿ ಕಾರ್ಮಿಕ!

ಮದುವೆ ರದ್ದು ಬೆನ್ನಲ್ಲೇ ಪರಸ್ಪರ 'ಅನ್‌ಫಾಲೋ' ಮಾಡಿಕೊಂಡ ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್!

Goa nightclub fire: ರೆಸ್ಟೋರೆಂಟ್‌ ಮಾಲೀಕ, ಕಾರ್ಯಕ್ರಮ ಆಯೋಜಕರ ವಿರುದ್ಧ FIR; ಸರಪಂಚ್ ಬಂಧನ!

SCROLL FOR NEXT