ಬೆಂಗಳೂರಿನಲ್ಲಿ ಮಹಿಳಾ ಚಾಲಕರೊಬ್ಬರು ಚಲಾಯಿಸುತ್ತಿದ್ದ ಆಟೋದಲ್ಲಿ ಸವಾರಿ ಮಾಡಿದ ಸಚಿವ ರಾಮಲಿಂಗಾ ರೆಡ್ಡಿ. 
ರಾಜ್ಯ

ನಮ್ಮ ಯಾತ್ರಿ 'ಮಹಿಳಾ ಶಕ್ತಿ' ಉಪಕ್ರಮದಿಂದ 42 ಲಕ್ಷ ರೂ. ಗಳಿಸಿದ ಮಹಿಳಾ ಚಾಲಕರು!

ಮಹಿಳಾ ಶಕ್ತಿ' ಉಪಕ್ರಮದಡಿಯಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದ್ದು, ಎಲೆಕ್ಟ್ರಿಕ್ ಆಟೋ ಡ್ರೈವಿಂಗ್, ಟ್ರಾಫಿಕ್ ನಿಯಮಗಳು, ಅಪ್ಲಿಕೇಶನ್ ಬಳಕೆ ಮತ್ತು ಗ್ರಾಹಕ ಸೇವಾ ಕೌಶಲ್ಯಗಳ ಕುರಿತು ಒಂದು ತಿಂಗಳು ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯಲು ಇಚ್ಛಿಸುವವರು ನಮ್ಮ ಯಾತ್ರಿ ನಂಬರ್ 080-6972 4800 ಸಂಪರ್ಕಿಸಬಹುದು.

ಬೆಂಗಳೂರು: ಬೆಂಗಳೂರಿನ ಆಟೋ-ಹೇಲಿಂಗ್ ಅಪ್ಲಿಕೇಶನ್ 'ನಮ್ಮ ಯಾತ್ರಿ' ಆರಂಭಿಸಿದ ಮಹಿಳಾ ಶಕ್ತಿ ಉಪಕ್ರಮವು ಮಹಿಳಾ ಆಟೋ ಚಾಲಕರಿಗೆ ಈ ವರೆಗೂ ರೂ.42 ಲಕ್ಷ ಆದಾಯ ತಂದುಕೊಟ್ಟಿದೆ.

ಈ ಉಪಕ್ರಮವು ಮಹಿಳಾ ಚಾಲಕರಿಗೆ ಆರ್ಥಿಕ ಸ್ವಾತಂತ್ರ್ಯ, ಗೌರವ ಸಾಧಿಸಲು ನೆರವಾಗುತ್ತಿದ್ದು, ಆ್ಯಪ್ ಮೂಲಕ ಮಹಿಳೆಯರು ಈ ವರೆಗೂ 4 ಲಕ್ಷ ಕಿ.ಮೀ ಚಾಲನೆ ಮಾಡಿದ್ದಾರೆ.

ಸೋಮವಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಮಹಿಳಾ ಚಾಲಕರನ್ನು ಗುರ್ತಿಸಿ, ಗೌರವಿಸಲಾಯಿತು.

ಕರ್ನಾಟಕದ ಸಾರಿಗೆ ಸಚಿವ ಹಾಗೂ ಮುಜರಾಯಿ ಸಚಿವ ಡಾ.ರಾಮಲಿಂಗಾ ರೆಡ್ಡಿ ಮಹಿಳಾ ಆಟೋ ಚಾಲಕರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಆಟೋ ಡ್ರೈವರ್‌ಗಳಾಗುವ ಮೂಲಕ, ಈ ಮಹಿಳೆಯರು ಜೀವನೋಪಾಯವನ್ನು ಗಳಿಸುವುದಲ್ಲದೆ, ಸಾಮಾಜಿಕ ನಿಯಮಗಳನ್ನು ಮರುರೂಪಿಸುತ್ತಿದ್ದಾರೆ. ನಮ್ಮ ರಸ್ತೆಗಳಲ್ಲಿ ಅವರ ಉಪಸ್ಥಿತಿಯು ನಗರ ಚಲನಶೀಲತೆಗೆ ಹೊಸ ಆಯಾಮವನ್ನು ನೀಡುತ್ತದೆ. ಎಲ್ಲರಿಗೂ ಸುರಕ್ಷಿತ ಮತ್ತು ಹೆಚ್ಚು ಸ್ವಾಗತಾರ್ಹ ವಾತಾವರಣವನ್ನು ಉತ್ತೇಜಿಸುತ್ತದೆ. ಈ ಉಪಕ್ರಮವು ನಮ್ಮ ಮಹಿಳೆಯರ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಯಾಗಿದೆ. ಸಬಲೀಕರಣದತ್ತ ಅವರ ಪ್ರಯಾಣವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ನಮ್ಮ ಯಾತ್ರಿ ಸಂಸ್ಥೆಯ ಸಿಇಒ ಮಗಿಳನ್ ಸೆಲ್ವನ್ ಅವರು ಮಹಿಳಾ ಆಟೋ ಚಾಲಕರನ್ನು ಸನ್ಮಾನಿಸಿದರು

ಇದೇ ವೇಳೆ ಮಹಿಳಾ ಚಾಲಕರಿಗೆ ಉಚಿತ ತರಬೇತಿ ಕಾರ್ಯಕ್ರಮಗಳು, ಪರವಾನಗಿಗಳನ್ನು ನೀಡಲು ನೆರವು ಮತ್ತು ಸಾಲವನ್ನು ಪಡೆಯಲು ಹಣಕಾಸಿನ ನೆರವು ಸೇರಿದಂತೆ ವಿವಿಧ ರೀತಿಯ ಬೆಂಬಲ ನೀಡುವುದಾಗಿಯೂ ಸಚಿವರು ಭರವಸೆ ನೀಡಿದರು.

ಮಹಿಳಾ ಶಕ್ತಿ' ಉಪಕ್ರಮದಡಿಯಲ್ಲಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತಿದ್ದು, ಪ್ರೋಗ್ರಾಂ ಎಲೆಕ್ಟ್ರಿಕ್ ಆಟೋ ಡ್ರೈವಿಂಗ್, ಟ್ರಾಫಿಕ್ ನಿಯಮಗಳು, ಅಪ್ಲಿಕೇಶನ್ ಬಳಕೆ ಮತ್ತು ಗ್ರಾಹಕ ಸೇವಾ ಕೌಶಲ್ಯಗಳ ಕುರಿತು ಒಂದು ತಿಂಗಳು ತರಬೇತಿ ನೀಡಲಾಗುತ್ತದೆ. ತರಬೇತಿ ಪಡೆಯಲು ಇಚ್ಛಿಸುವವರು ನಮ್ಮ ಯಾತ್ರಿ ನಂಬರ್ 080-6972 4800 ಅಥವಾ WhatsApp ಮೂಲಕ 86189 63188 ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್‌ ಸರ್ಕಾರ ವಿರುದ್ಧ ಪ್ರತಿಭಟನೆ: ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 116 ಕ್ಕೆ ಏರಿಕೆ

ಕರ್ನಾಟಕದ ಮುಕುಟಕ್ಕೆ ಮತ್ತೊಂದು ಗರಿ: ಬೆಂಗಳೂರು ಮೂಲದ ಮೇಜರ್ Swathi ShanthaKumarಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ!

ಕೇಂದ್ರ ಬಜೆಟ್ 2026-27: ರಾಜ್ಯದ ಹಣಕಾಸು ಸಮತೋಲನ ಪುನಃಸ್ಥಾಪಿಸಲು ಹೆಚ್ಚಿನ ಅನುದಾನ ಒದಗಿಸಿ; ಕೇಂದ್ರಕ್ಕೆ ರಾಜ್ಯ ಸರ್ಕಾರ ಆಗ್ರಹ

Grok ಅಶ್ಲೀಲ ಕಂಟೆಂಟ್ ವಿವಾದ: ಕೇಂದ್ರ ಸರ್ಕಾರಕ್ಕೆ ಕೊನೆಗೂ ಮಣಿದ X, 600 ಖಾತೆಗಳ ಡಿಲೀಟ್!

ಕೌಟುಂಬಿಕ ಹಿಂಸಾಚಾರ ಸಂತ್ರಸ್ಥರಿಗೆ ಬೆಂಗಳೂರಿನಲ್ಲಿ ಅಣಬೆ ಕೃಷಿ ತರಬೇತಿ

SCROLL FOR NEXT