ಗೌರಿ ಶಂಕರ್ ಶರ್ಮಾ 
ರಾಜ್ಯ

ಬೆಂಗಳೂರು: ಸಾಲ ವಸೂಲಾತಿ ಏಜೆಂಟರಿಂದ ಮನೆಗೆ ಬೀಗ; ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಟೆಕ್ಕಿ ಆತ್ಮಹತ್ಯೆ

ಆನೇಕಲ್ ರೈಲು ನಿಲ್ದಾಣದ ಬಳಿ ಇರುವ ಗೌರಿಶಂಕರ್ ಶರ್ಮಾ ಅವರ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಸಾಲ ವಸೂಲಾತಿ ಏಜೆಂಟರು 18 ತಿಂಗಳಿಂದ ಕಂತುಗಳನ್ನು ಪಾವತಿಸದ ಕಾರಣ ಅವರನ್ನು ಮನೆಯಿಂದ ಹೊರಗೆ ಹಾಕಿ ಅವಮಾನ ಮಾಡಿದ್ದಾರೆ.

ಬೆಂಗಳೂರು: ಸಾಲ ವಸೂಲಾತಿ ಏಜೆಂಟರು ಮತ್ತು ಪ್ರಮುಖ ಬ್ಯಾಂಕ್‌ನ ಅಧಿಕಾರಿಗಳ ಕಿರುಕುಳದಿಂದ ಬೇಸತ್ತ 40 ವರ್ಷದ ನಿರುದ್ಯೋಗಿ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ.

ಆನೇಕಲ್ ರೈಲು ನಿಲ್ದಾಣದ ಬಳಿ ಇರುವ ಗೌರಿಶಂಕರ್ ಶರ್ಮಾ ಅವರ ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಸಾಲ ವಸೂಲಾತಿ ಏಜೆಂಟರು 18 ತಿಂಗಳಿಂದ ಕಂತುಗಳನ್ನು ಪಾವತಿಸದ ಕಾರಣ ಅವರನ್ನು ಮನೆಯಿಂದ ಹೊರಗೆ ಹಾಕಿ ಅವಮಾನ ಮಾಡಿದ್ದಾರೆ ಎಂದು ಅವರ ಸೋದರ ಮಾವ ಬಿಹಾರದ ಉದ್ಯಮಿ ರಾಜೀವ್ ರಾಜನ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಗೌರಿ ಶಂಕರ್ ಶರ್ಮಾ ಸಾವಿಗೆ ಬ್ಯಾಂಕ್‌ನ ಸಹಾಯಕ ಉಪಾಧ್ಯಕ್ಷ, ಗೃಹ ಸಾಲ ವಿಭಾಗದ ರಾಕೇಶ್ ಕುಮಾರ್ ಸಿನ್ಹಾ ಮತ್ತು ಸಿಬ್ಬಂದಿ ಪ್ರಸನ್ನ ಸಿ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಶರ್ಮಾ ಶುಕ್ರವಾರ (ಜುಲೈ 12) ಮೃತಪಟ್ಟಿದ್ದರೂ, ಸೋಮವಾರ (ಜುಲೈ 15) ಅವರ ಮೃತದೇಹವನ್ನು ಕುಟುಂಬಸ್ಥರು ಗುರುತಿಸಿದ್ದಾರೆ, ಗುರುವಾರ (ಜುಲೈ 18) ಘಟನೆ ಬೆಳಕಿಗೆ ಬಂದಿದೆ.

ಆಘಾತಕಾರಿ ಸಂಗತಿಯೆಂದರೆ, ಅವರ ಪತ್ನಿ, ಪ್ರಮುಖ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದಾರೆ, ಪತ್ನಿ ಸೇರಿದಂತೆ ಅವರ ಕುಟುಂಬದಲ್ಲಿ ಯಾರಿಗೂ ಅವರ ಹಣಕಾಸಿನ ಸಮಸ್ಯೆಗಳ ಬಗ್ಗೆ ತಿಳಿದಿರಲಿಲ್ಲ ಎಂದು ರಾಜನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಬಿಹಾರ ಮೂಲದ ಶರ್ಮಾ ಅವರು 12 ವರ್ಷಗಳಿಂದ ಬೆಂಗಳೂರಿನ ಸೀಮೆನ್ಸ್ ಟೆಕ್ನಾಲಜೀಸ್‌ನಲ್ಲಿ ಹಿರಿಯ ಹುದ್ದೆಯಲ್ಲಿ ಉದ್ಯೋಗಿಯಾಗಿದ್ದರು. ಅವರು 2019 ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ವೇಳೆ ಇತರ ಕೆಲವರೊಂದಿಗೆ ವಜಾಗೊಳಿಸಲ್ಪಟ್ಟರು, ಅದಾದ ನಂತರ ಅವರು ಉದ್ಯೋಗ ಹುಡುಕಲು ಹೆಣಗಾಡುತ್ತಿದ್ದರು. ಆನೇಕಲ್-ಚಂದಾಪುರ ರಸ್ತೆಯಲ್ಲಿರುವ ಬೃಹತ್ ವಸತಿ ಸಂಕೀರ್ಣದಲ್ಲಿ ತಮ್ಮ ಕುಟುಂಬದೊಂದಿಗೆ 2BHK ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು.

ಮನೆಗೆ ಬೀಗ ಹಾಕಿರುವ ಬಗ್ಗೆ ತಿಳಿದ ನಂತರ, ನಾನು ಬಿಹಾರದಿಂದ ಬೆಳಗಿನ ಜಾವ 3 ಗಂಟೆಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದು, ಕಳೆದ 1.5 ವರ್ಷಗಳಿಂದ ಪಾವತಿಸಬೇಕಾದ 3.24 ಲಕ್ಷ ರೂ. ಕಂತು ಮೊತ್ತವನ್ನು ಪಾವತಿಸಿದೆ. ಮೊತ್ತ ಪಾವತಿಸಿ ಸೋಮವಾರ ಬ್ಯಾಂಕ್ ನಿಂದ ಅವರ ಮನೆಯ ಕೀ ಸಂಗ್ರಹಿಸಿದ್ದೆ. ನಾನು ಬ್ಯಾಂಕ್‌ನಿಂದ ಹೊರಡಲಿರುವಾಗಲೇ, ಆತನನ್ನು ಗುರುತಿಸುವಂತೆ ಹೇಳಿ ಆತನ ದೇಹದ ಚಿತ್ರದೊಂದಿಗೆ ಪೊಲೀಸರಿಂದ ವಾಟ್ಸಾಪ್ ಸಂದೇಶ ಬಂದಿತ್ತು.ಕೊನೆಗೆ ನಾನು ಬ್ಯಾಂಕ್‌ನಿಂದ ಮನೆಯ ಕೀಲಿಕೈಯನ್ನು ಪಡೆದುಕೊಂಡಿದ್ದೇನೆ ಆದರೆ ಮಾಲೀಕರು ಜೀವನ ಅಂತ್ಯಗೊಳಿಸಿದ್ದಾರೆ ಎಂದು ಸಂಬಂಧಿ ರಾಜನ್ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದೊಂದಿಗೆ ಶಸ್ತ್ರಸಜ್ಜಿತವಾದ ವಕೀಲರು, ಸಾಲ ವಸೂಲಾತಿ ಏಜೆಂಟ್ ಮತ್ತು ಕಾನ್‌ಸ್ಟೆಬಲ್ ಸೇರಿದಂತೆ ಮೂವರು ಬ್ಯಾಂಕ್ ಪ್ರತಿನಿಧಿಗಳು ಸೋಮವಾರ ಮಧ್ಯಾಹ್ನ 12.30 ಕ್ಕೆ ಅವರು ಒಬ್ಬರೇ ಇದ್ದಾಗ ಮನೆಗೆ ತಲುಪಿದರು. ಅವರ ಪತ್ನಿ ಶಾಲೆಯಲ್ಲಿದ್ದರು ಮತ್ತು ಅವರ 16 ವರ್ಷದ ಮಗ ಮತ್ತು 12 ವರ್ಷದ ಮಗಳು ಶಾಲೆಗೆ ಹೋಗಿದ್ದರು.

ಅವರು ಬಾಗಿಲು ತೆರೆಯಲು ಹೇಳಿ ಆತನನ್ನು ಮನೆಯಿಂದ ಹೊರಗೆ ಹಾಕಿದರು, ಶರ್ಮಾ ಅವರು ತಮ್ಮ ವ್ಯಾಲೆಟ್ ಅಥವಾ ಆಧಾರ್ ಕಾರ್ಡ್ ಅಥವಾ ಇನ್ನಾವುದನ್ನು ತೆಗೆದುಕೊಳ್ಳಲು ಸಹ ಅನುಮತಿಸಲಿಲ್ಲ. ಅವನ ಕೈಯಲ್ಲಿ ಫೋನ್ ಬಿಟ್ಟರೆ ಅವನ ಬಳಿ ಏನೂ ಇರಲಿಲ್ಲ ಎಂದು ನೆರೆಹೊರೆಯವರು ರಾಜನ್ ಅವರಿಗೆ ವಿಷಯ ತಿಳಿಸಿದ್ದಾರೆ. ಮನೆಯಿಂದ ಹೊರಗೆ ಹಾಕಿದರೆ ಹೆಂಡತಿ ಮಕ್ಕಳು ಬೀದಿಗೆ ಬರುತ್ತಾರೆ ಎಂದು ವಿನಂತಿಸಿದರೂ ಅಧಿಕಾರಿಗಳು ಕಿವಿಗೊಡಲಿಲ್ಲ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT