ಬಿಡಿಎ ನಿವೇಶನ TNIE
ರಾಜ್ಯ

BDA Sites: 149 ಮೂಲೆ ನಿವೇಶನ ಇ-ಹರಾಜು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜುಲೈನಲ್ಲಿ ವಿವಿಧ ಪ್ರದೇಶಗಳಲ್ಲಿನ ಸೈಟುಗಳನ್ನು ಈ-ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಒಟ್ಟು 149 ಕಾರ್ನರ್‌ ಸೈಟುಗಳಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜುಲೈನಲ್ಲಿ ವಿವಿಧ ಪ್ರದೇಶಗಳಲ್ಲಿನ ಸೈಟುಗಳನ್ನು ಈ-ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಒಟ್ಟು 149 ಕಾರ್ನರ್‌ ಸೈಟುಗಳಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ.

ಬಿಡಿಎ ನಿವೇಶನಗಳ ಈ-ಹರಾಜು ಕೊನೆಯ ಬಾರಿ ನಡೆದಿದ್ದು ಈ ವರ್ಷದ ಮಾರ್ಚ್‌ನಲ್ಲಿ. ಈಗ ಜುಲೈ ಮೊದಲ ವಾರದಲ್ಲಿ 149 ಮೂಲೆ ನಿವೇಶನ ಮಾರಾಟಕ್ಕೆ ಬಿಡಿಎ ಪ್ರಕ್ರಿಯೆ ನಡೆಸಲಿದೆ.

ನಗರದ ವಿವಿಧ ಭಾಗದಲ್ಲಿ ಲಭ್ಯವಿರುವ ಈ ಮೂಲೆ ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದ್ದು, ಈ ನಿವೇಶನಗಳಿಗೆ ಕನಿಷ್ಠ ಬಿಡ್ ಬೆಲೆ ಎಷ್ಟು ಎಂದು ಇನ್ನೂ ಅಧಿಕೃತವಾಗಿ ಬೆಲೆ ನಿಗದಿ ಮಾಡಿಲ್ಲ.

ಕಾರ್ನರ್ ಸೈಟ್‌ಗಳು ಬಿಡಿಎಗೆ ಆದಾಯದ ಮುಖ್ಯ ಮೂಲವಾಗಿದ್ದು, ಸಾಮಾನ್ಯ ನಿವೇಶನಗಳಿಗಿಂತ ಇವುಗಳ ಬೆಲೆ ಹೆಚ್ಚಾಗಿರಲಿವೆ ಎನ್ನಲಾಗಿದೆ.

ನೇರ ಹರಾಜು ಪ್ರಕ್ರಿಯೆ ಜುಲೈ 1 ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಿ ಜುಲೈ 2 ರಂದು ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

ಬನಶಂಕರಿ 5ನೇ ಹಂತದ ವಿವಿಧ ಬ್ಲಾಕ್‌ಗಳು, ಅಂಜನಾಪುರ, ಉಳ್ಳಾಲು, ಗೌರಿನಾಯಕನಹಳ್ಳಿ, ವಾಲೇಗರಹಳ್ಳಿ ಮತ್ತು ಮಳಲಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ 74 ನಿವೇಶನಗಳಿಗೆ ಹರಾಜು ಪ್ರಕ್ಯಿಯೆ ನಡೆಯಲಿದೆ.

ಇನ್ನುಳಿದ 75 ಸೈಟ್‌ಗಳ ಹರಾಜು ಜುಲೈ 1 ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿ ಜುಲೈ 4 ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ, HBR ಮೊದಲ ಹಂತ, HRBR 2ನೇ ಬ್ಲಾಕ್ ಮತ್ತು ಬನಶಂಕರಿ 5ನೇ ಹಂತ (7ನೇ ಬ್ಲಾಕ್) ಸೇರಿದಂತೆ ಕೆಲವು ಪ್ರದೇಶಗಳನ್ನು ಇದು ಒಳಗೊಂಡಿದೆ. ಸೈಟ್‌ಗಳ ಸ್ಥಳ ಮತ್ತು ವಿವರಗಳಿಗಾಗಿ, https://kppp.karnataka.gov.in ಗೆ ಲಾಗ್ ಇನ್ ಮಾಡಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT