ಬಿಡಿಎ ನಿವೇಶನ TNIE
ರಾಜ್ಯ

BDA Sites: 149 ಮೂಲೆ ನಿವೇಶನ ಇ-ಹರಾಜು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜುಲೈನಲ್ಲಿ ವಿವಿಧ ಪ್ರದೇಶಗಳಲ್ಲಿನ ಸೈಟುಗಳನ್ನು ಈ-ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಒಟ್ಟು 149 ಕಾರ್ನರ್‌ ಸೈಟುಗಳಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಜುಲೈನಲ್ಲಿ ವಿವಿಧ ಪ್ರದೇಶಗಳಲ್ಲಿನ ಸೈಟುಗಳನ್ನು ಈ-ಹರಾಜಿನ ಮೂಲಕ ಮಾರಾಟ ಮಾಡಲು ಮುಂದಾಗಿದೆ. ಒಟ್ಟು 149 ಕಾರ್ನರ್‌ ಸೈಟುಗಳಿದ್ದು, ಆಸಕ್ತರು ಖರೀದಿ ಮಾಡಬಹುದಾಗಿದೆ.

ಬಿಡಿಎ ನಿವೇಶನಗಳ ಈ-ಹರಾಜು ಕೊನೆಯ ಬಾರಿ ನಡೆದಿದ್ದು ಈ ವರ್ಷದ ಮಾರ್ಚ್‌ನಲ್ಲಿ. ಈಗ ಜುಲೈ ಮೊದಲ ವಾರದಲ್ಲಿ 149 ಮೂಲೆ ನಿವೇಶನ ಮಾರಾಟಕ್ಕೆ ಬಿಡಿಎ ಪ್ರಕ್ರಿಯೆ ನಡೆಸಲಿದೆ.

ನಗರದ ವಿವಿಧ ಭಾಗದಲ್ಲಿ ಲಭ್ಯವಿರುವ ಈ ಮೂಲೆ ನಿವೇಶನಗಳನ್ನು ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದ್ದು, ಈ ನಿವೇಶನಗಳಿಗೆ ಕನಿಷ್ಠ ಬಿಡ್ ಬೆಲೆ ಎಷ್ಟು ಎಂದು ಇನ್ನೂ ಅಧಿಕೃತವಾಗಿ ಬೆಲೆ ನಿಗದಿ ಮಾಡಿಲ್ಲ.

ಕಾರ್ನರ್ ಸೈಟ್‌ಗಳು ಬಿಡಿಎಗೆ ಆದಾಯದ ಮುಖ್ಯ ಮೂಲವಾಗಿದ್ದು, ಸಾಮಾನ್ಯ ನಿವೇಶನಗಳಿಗಿಂತ ಇವುಗಳ ಬೆಲೆ ಹೆಚ್ಚಾಗಿರಲಿವೆ ಎನ್ನಲಾಗಿದೆ.

ನೇರ ಹರಾಜು ಪ್ರಕ್ರಿಯೆ ಜುಲೈ 1 ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಿ ಜುಲೈ 2 ರಂದು ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

ಬನಶಂಕರಿ 5ನೇ ಹಂತದ ವಿವಿಧ ಬ್ಲಾಕ್‌ಗಳು, ಅಂಜನಾಪುರ, ಉಳ್ಳಾಲು, ಗೌರಿನಾಯಕನಹಳ್ಳಿ, ವಾಲೇಗರಹಳ್ಳಿ ಮತ್ತು ಮಳಲಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ 74 ನಿವೇಶನಗಳಿಗೆ ಹರಾಜು ಪ್ರಕ್ಯಿಯೆ ನಡೆಯಲಿದೆ.

ಇನ್ನುಳಿದ 75 ಸೈಟ್‌ಗಳ ಹರಾಜು ಜುಲೈ 1 ರಂದು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗಿ ಜುಲೈ 4 ರಂದು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳಲಿದೆ, HBR ಮೊದಲ ಹಂತ, HRBR 2ನೇ ಬ್ಲಾಕ್ ಮತ್ತು ಬನಶಂಕರಿ 5ನೇ ಹಂತ (7ನೇ ಬ್ಲಾಕ್) ಸೇರಿದಂತೆ ಕೆಲವು ಪ್ರದೇಶಗಳನ್ನು ಇದು ಒಳಗೊಂಡಿದೆ. ಸೈಟ್‌ಗಳ ಸ್ಥಳ ಮತ್ತು ವಿವರಗಳಿಗಾಗಿ, https://kppp.karnataka.gov.in ಗೆ ಲಾಗ್ ಇನ್ ಮಾಡಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT