ಕೃಷ್ಣರಾಜ ಸಾಗರ ಅಣೆಕಟ್ಟಿನ ಚಿತ್ರ 
ರಾಜ್ಯ

ಜಲ ಹಂಚಿಕೆ ವಿವಾದ: ಪರಿಸ್ಥಿತಿ ಪರಿಶೀಲನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, CWMA ಮುಂದು

ಜೂನ್ 14 ರಂದು ನಡೆದ 97 ನೇ ಸಿಡಬ್ಲ್ಯೂಆರ್‌ಸಿ ಸಭೆಯ ಆದೇಶದ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಂದ ಸಿಡಬ್ಲ್ಯುಎಂಎ ಮತ್ತು ಜಲಶಕ್ತಿ ಸಚಿವಾಲಯದ ಅಧಿಕಾರಿಗಳು 31 ನೇ ಸಭೆಯಲ್ಲಿ ಅಹವಾಲುಗಳನ್ನು ಆಲಿಸಿದರು.

ನವದೆಹಲಿ: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು(CWMA) ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ, ಸಸ್ಯ ಮತ್ತು ಪ್ರಾಣಿಗಳ ಪೋಷಣೆಗಾಗಿ ಪರಿಸರದ ಹರಿವುಗಳಿಗಾಗಿ ಎಲ್ಲಾ ಜಲಾಶಯಗಳಲ್ಲಿ ನೀರನ್ನು ಸಂರಕ್ಷಿಸುವಂತೆ ಕೇಳಿದೆ. ಕಾವೇರಿ ಜಲಾನಯನ ಪ್ರದೇಶದ ಜಲವಿಜ್ಞಾನದ ಪರಿಸ್ಥಿತಿಯನ್ನು ಪರಿಶೀಲಿಸಲು ತಂಡವು ಕರ್ನಾಟಕಕ್ಕೆ ಭೇಟಿ ನೀಡಲಿದೆ.

ಜೂನ್ 14 ರಂದು ನಡೆದ 97 ನೇ ಸಿಡಬ್ಲ್ಯೂಆರ್‌ಸಿ ಸಭೆಯ ಆದೇಶದ ವಿರುದ್ಧ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಂದ ಸಿಡಬ್ಲ್ಯುಎಂಎ ಮತ್ತು ಜಲಶಕ್ತಿ ಸಚಿವಾಲಯದ ಅಧಿಕಾರಿಗಳು 31 ನೇ ಸಭೆಯಲ್ಲಿ ಅಹವಾಲುಗಳನ್ನು ಆಲಿಸಿದರು.

ಕರ್ನಾಟಕವು ತನ್ನ ನಾಲ್ಕು ಪ್ರಮುಖ ಜಲಾಶಯಗಳಲ್ಲಿ ಇದುವರೆಗೆ ಶೇಕಡಾ 70ರಷ್ಟು ನೀರಿನ ಕೊರತೆಯಿದೆ ಎಂದು ಹೇಳಿದೆ. ಆದ್ದರಿಂದ ಯಾವುದೇ ಆದೇಶವನ್ನು ಅನುಸರಿಸಲು ಕಷ್ಟವಾಗುತ್ತದೆ. ಜೂನ್ 1 ರಿಂದ 24 ರವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಒಳಹರಿವು 7.307 ಟಿಎಂಸಿ ಆಗಿದ್ದು, ಇದೇ ಅವಧಿಯಲ್ಲಿ ಕಳೆದ 30 ವರ್ಷಗಳ ಸರಾಸರಿ ಒಳಹರಿವು 24.448 ಟಿಎಂಸಿ ಆಗಿದೆ. ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ ಕಾವೇರಿ ಜಲವಿವಾದ ನ್ಯಾಯಮಂಡಳಿಯ (CWTA) ಅಂತಿಮ ತೀರ್ಪಿನ ಪ್ರಕಾರ ಸಾಮಾನ್ಯ ವರ್ಷದಲ್ಲಿ 9.19 ಟಿಎಂಸಿ ಅಂದರೆ ಸುಮಾರು 3,550 ಕ್ಯೂಸೆಕ್‌ಗಳ ಅಂತಾರಾಜ್ಯ ಬಿಂದು ಬಿಳಿಗುಂಡ್ಲುವಿನಲ್ಲಿ ಖಚಿತಪಡಿಸಿದೆ.

ಬಿಳಿಗುಂಡ್ಲು ಜೂನ್ 24 ಕ್ಕೆ 5.367 ಕ್ಕೆ 2 ಟಿಎಂಸಿಗಿಂತ ಕಡಿಮೆಯಾಗಿದೆ. ಜೂನ್ 24 ಕ್ಕೆ ಬಿಳಿಗುಂಡ್ಲುವಿನಲ್ಲಿ 5.367 ಟಿಎಂಸಿ ಕೊರತೆ ಹರಿಯುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕು. ಜೂನ್ 2024 ರ ಉಳಿದ ಅವಧಿಗೆ ಮತ್ತು ಜುಲೈ 2024 ಕ್ಕೆ 31.24 ಟಿಎಂಸಿ ನಿಗದಿತ ನೀರು ಹರಿಯುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ತಮಿಳುನಾಡು ಒತ್ತಾಯಿಸಿದೆ.

ಮುಂದಿನ ತಿಂಗಳು ಜುಲೈ 26 ರಂದು ನಡೆಯುವ ಮುಂದಿನ ಸಭೆಯ ವೇಳಾಪಟ್ಟಿಯಲ್ಲಿ ಜಲವಿಜ್ಞಾನದ ಪರಿಸ್ಥಿತಿಯನ್ನು ಪರಿಶೀಲಿಸಲು ತಂಡವನ್ನು ನೇಮಿಸಲು ಪ್ರಾಧಿಕಾರವು ಸ್ಪಷ್ಟವಾಗಿ ನಿರ್ಧರಿಸಿದೆ. ಕರ್ನಾಟಕದ ಜಲಾಶಯದ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಆದೇಶವನ್ನು ರವಾನಿಸಲಾಗುತ್ತದೆ.

CWMA ಅಧ್ಯಕ್ಷ ಸೌಮಿತ್ರ ಕುಮಾರ್ ಹಲ್ದಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿ, ಕಾವೇರಿ ಜಲಾನಯನ ಪ್ರದೇಶದಲ್ಲಿ 150 ದಿನಗಳ ಮುಂಗಾರಿನಲ್ಲಿ ಕೇವಲ 12 ದಿನಗಳ ಮಳೆಯಾಗಿದೆ. ಕಳೆದ ವರ್ಷದ ಸಂಕಷ್ಟದ ಪರಿಸ್ಥಿತಿಗಳಿಂದಾಗಿ ವಿವಿಧ ನದಿಗಳು ಮತ್ತು ಜಲಾಶಯಗಳ ಆರ್ದ್ರೀಕರಣ ಮಟ್ಟವನ್ನು ತಲುಪಲು ಸಮಯ ಹಿಡಿಯುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT