ಹೈಕೋರ್ಟ್  
ರಾಜ್ಯ

ಚುನಾವಣಾ ನೀತಿ ಸಂಹಿತೆ ಕಾರಣ ನೀಡಿ ಇಡಿಯಿಂದ ಮದ್ಯ ವಶ: ಅಧಿಕಾರ ದುರುಪಯೋಗ ಎಂದು ಹೈಕೋರ್ಟ್ ಆಕ್ಷೇಪ!

ಕರ್ನಾಟಕ ರಾಜ್ಯ ಪಾನೀಯಗಳ ನಿಗಮ ನಿಯಮಿತ (KSBCL)ಕ್ಕೆ ಮದ್ಯ ಪೂರೈಸಲು ಕಂಪೆನಿಗೆ ಅವಕಾಶ ನೀಡಿದ್ದರೂ ಕೂಡ ಮಾದರಿ ನೀತಿ ಸಂಹಿತೆ ಉಲ್ಲೇಖಿಸಿ ಮದ್ಯ ಬಾಟಲಿಗಳನ್ನು ತುಂಬಿದ ಎರಡು ಟ್ರಕ್‌ಗಳನ್ನು ವಶಪಡಿಸಿಕೊಂಡು ಕಂಪನಿಯ ವಿರುದ್ಧ ಕೇಸು ದಾಖಲಿಸಿರುವ ಅಬಕಾರಿ ಇಲಾಖೆಯ ನಡವಳಿಕೆಯನ್ನು ಕರ್ನಾಟಕ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ,

ಬೆಂಗಳೂರು: ಕರ್ನಾಟಕ ರಾಜ್ಯ ಪಾನೀಯಗಳ ನಿಗಮ ನಿಯಮಿತ (KSBCL)ಕ್ಕೆ ಮದ್ಯ ಪೂರೈಸಲು ಕಂಪೆನಿಗೆ ಅವಕಾಶ ನೀಡಿದ್ದರೂ ಕೂಡ ಮಾದರಿ ನೀತಿ ಸಂಹಿತೆ ಉಲ್ಲೇಖಿಸಿ ಮದ್ಯ ಬಾಟಲಿಗಳನ್ನು ತುಂಬಿದ ಎರಡು ಟ್ರಕ್‌ಗಳನ್ನು ವಶಪಡಿಸಿಕೊಂಡು ಕಂಪನಿಯ ವಿರುದ್ಧ ಕೇಸು ದಾಖಲಿಸಿರುವ ಅಬಕಾರಿ ಇಲಾಖೆಯ ನಡವಳಿಕೆಯನ್ನು ಕರ್ನಾಟಕ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ,

ಕಲ್ಪತರು ಬ್ರೂವರೀಸ್ ಮತ್ತು ಡಿಸ್ಟಿಲರೀಸ್ ವಿರುದ್ಧ ನೆಲಮಂಗಲ ಉಪವಿಭಾಗದ ಅಬಕಾರಿ ಅಧಿಕಾರಿಗಳು ದಾಖಲಿಸಿದ್ದ ಎರಡು ಎಫ್ ಐಆರ್ ಗಳನ್ನು ನ್ಯಾಯಮೂರ್ತಿ ಎಂ ಜಿ ಉಮಾ ರದ್ದುಗೊಳಿಸಿದರು.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆಯ ಲಾಭ ಪಡೆದು ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ನೀತಿ ಸಂಹಿತೆಯ ಅವಧಿಯಲ್ಲಿ ಕರ್ನಾಟಕ ಕೆಎಸ್‌ಬಿಸಿಎಲ್‌ಗೆ ಮದ್ಯವನ್ನು ತಲುಪಿಸಲು ಅರ್ಜಿದಾರರ ಕಂಪನಿಗೆ ಅನುಮತಿ ನೀಡದಿದ್ದರೆ, ಇಲಾಖೆಯು ಅರ್ಜಿದಾರರ ಪರವಾಗಿ ಪರವಾನಗಿಯನ್ನು ನೀಡಲು ಸಾಧ್ಯವಿಲ್ಲ ಎಂದರು.

30 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಒಳಗೊಂಡಿರುವ ಟ್ರಕ್‌ಗಳನ್ನು ವಶಪಡಿಸಿಕೊಳ್ಳುವುದು ಮತ್ತು ಮಾರ್ಚ್ 18 ರಂದು ಅಬಕಾರಿ ಅಧಿಕಾರಿಗಳು ಅಪರಾಧಗಳನ್ನು ದಾಖಲಿಸಿರುವುದನ್ನು ಪ್ರಶ್ನಿಸಿ ಕಲ್ಪತರು ಬ್ರೂವರೀಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಅರ್ಜಿದಾರ ಕಂಪನಿಯು ಪರವಾನಗಿ ಪ್ರಕಾರ ಮದ್ಯ ಮತ್ತು ಬಿಯರ್ ಉತ್ಪಾದಿಸಿದೆ ಮತ್ತು ಕೆಎಸ್‌ಬಿಸಿಎಲ್‌ಗೆ ಮಾತ್ರ ಪೂರೈಸಲು ಅವಕಾಶವಿದೆ ಎಂದು ಹೇಳಿದೆ.

ಮಾರ್ಚ್ 22 ರವರೆಗೆ ಮಾನ್ಯವಾಗಿರುವ ಪರವಾನಗಿಯನ್ನು ಮಾರ್ಚ್ 16 ರಂದು ನೀಡಲಾಯಿತು. ಆದರೆ ಅದರ ಅವಧಿ ಮುಗಿಯುವ ಮೊದಲು, ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಮದ್ಯ ತುಂಬಿದ ಟ್ರಕ್‌ಗಳನ್ನು ಕಂಪನಿಯ ಆವರಣದಲ್ಲಿ ನಿಲ್ಲಿಸಲಾಗಿದೆ ಎಂಬ ಕಾರಣಕ್ಕಾಗಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಅರ್ಜಿಗಳನ್ನು ವಿರೋಧಿಸಿದ ಸರ್ಕಾರಿ ವಕೀಲರು, ಕಂಪನಿಯು ತನ್ನ ಆವರಣದಲ್ಲಿ ಮದ್ಯ ತುಂಬಿದ ಟ್ರಕ್‌ಗಳನ್ನು ನಿಲ್ಲಿಸಿದೆ ಎಂದು ವಾದಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT