ಬಿಬಿಎಂಪಿ 
ರಾಜ್ಯ

ಬೆಂಗಳೂರು: ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ BBMP ಕಾರಣ- ಗುತ್ತಿಗೆದಾರರ ಆರೋಪ

ಈಜಿಪುರ ಮೇಲ್ಸೇತುವೆ ಯೋಜನೆಯನ್ನು ಕೈಗೆತ್ತಿಕೊಂಡಿರುವ ನಿರ್ಮಾಣ ಸಂಸ್ಥೆ ಬಿಎಸ್‌ಸಿಪಿಎಲ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಯೋಜನೆಯನ್ನು ನಿರ್ವಹಿಸಲು ಸಾಕಷ್ಟು ಕಾರ್ಮಿಕರಿದ್ದಾರೆ ಮತ್ತು ಸಿಬ್ಬಂದಿ ಕೊರತೆಯ ವರದಿಗಳು ನಿಜವಲ್ಲ ಎಂದು ಹೇಳಿದೆ.

ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಈಜಿಪುರ ಫ್ಲೈಓವರ್ ಕಾಮಗಾರಿ ಆರಂಭಗೊಂಡು ಆರು ತಿಂಗಳಾದರೂ ಕೇವಲ ಶೇ.4 ಕಾಮಗಾರಿ ನಡೆಸಿದ್ದಕ್ಕಾಗಿ ಕಂಪನಿ ಪ್ರತಿನಿಧಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾದರು. ಇತ್ತೀಚೆಗೆ ಸಿಟಿ ರೌಂಡ್ಸ್ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ, ಕಳೆದ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದು ಸಾರ್ವಜನಿಕರಿಗೆ ವಿಪರೀತ ಕಿರಿಕಿರಿ ಆಗುತ್ತಿದ್ದ 2.95 ಕಿ.ಮೀ. ಉದ್ದದ ಈಜಿಪುರ ಫ್ಲೈ ಓವರ್‌ ಕಾಮಗಾರಿ ಪರಿಶೀಲನೆ ನಡೆಸಿದರು.

ಈಜಿಪುರ ಮೇಲ್ಸೇತುವೆ ಯೋಜನೆಯನ್ನು ಕೈಗೆತ್ತಿಕೊಂಡಿರುವ ನಿರ್ಮಾಣ ಸಂಸ್ಥೆ ಬಿಎಸ್‌ಸಿಪಿಎಲ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಯೋಜನೆಯನ್ನು ನಿರ್ವಹಿಸಲು ಸಾಕಷ್ಟು ಕಾರ್ಮಿಕರಿದ್ದಾರೆ ಮತ್ತು ಸಿಬ್ಬಂದಿ ಕೊರತೆಯ ವರದಿಗಳು ನಿಜವಲ್ಲ ಎಂದು ಹೇಳಿದೆ. ಪಾಲಿಕೆ ಎಂಜಿನಿಯರ್‌ಗಳು ಕಳೆದ ನಾಲ್ಕು ವರ್ಷಗಳಿಂದ ಖಾಸಗಿ ಜಮೀನಿನಲ್ಲಿ ಬಿದ್ದಿರುವ ಪ್ರಿಕಾಸ್ಟ್ ವಿಭಾಗಗಳನ್ನು ಇನ್ನೂ ಹಸ್ತಾಂತರಿಸದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ, ಗುತ್ತಿಗೆದಾರರಿಂದಲ್ಲ ಎಂದು ಹೇಳಿದ್ದಾರೆ.

ಸೇತುವೆ ನಿರ್ಮಾಣಕ್ಕೆ ನಿರ್ಣಾಯಕವಾಗಿರುವ ಮೇಲ್ಸೇತುವೆಯ 55 ಭಾಗಗಳು ಮತ್ತು 34 ಬೇರಿಂಗ್‌ಗಳು ಕಳೆದ ನಾಲ್ಕು ವರ್ಷಗಳಿಂದ ವಿಜಯಬಾಬು ರೆಡ್ಡಿ ಅವರ ಜಮೀನಿನಲ್ಲಿ ಬನ್ನೇರುಘಟ್ಟದ ​​ಸಕಲ್ವಾರದಲ್ಲಿ ಬಿದ್ದಿದ್ದು, ಈ ವಸ್ತುಗಳನ್ನು ಹಸ್ತಾಂತರಿಸಲು ಬಿಬಿಎಂಪಿ ವಿಫಲವಾಗಿದೆ ಎಂದು ನಿರ್ಮಾಣ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈಗಾಗಲೇ ಕಾಮಗಾರಿಯನ್ನು ಕೈಬಿಟ್ಟಿದ್ದ ಹಿಂದಿನ ಗುತ್ತಿಗೆದಾರರಿಗೆ ಸಾಮಗ್ರಿಗಳ ಹಣವನ್ನು ಪಾಲಿಕೆಯ ಪಾವತಿಸಿದೆ. ಇದೀಗ ತಮ್ಮ 5.5 ಎಕರೆ ಜಮೀನಿನಲ್ಲಿ ಸಾಮಗ್ರಿಗಳನ್ನು ಸುರಿಯಲು ಅವಕಾಶ ನೀಡಿದ ಜಮೀನು ಮಾಲೀಕರ ಬಾಡಿಗೆಗೆ 2 ಕೋಟಿ ರೂ ಹಣ ನೀಡಬೇಕಾಗಿದೆ.ಅದಕ್ಕೆ ನಾವು ಹೇಗೆ ಜವಾಬ್ದಾರರು ಎಂದು ಬಿಎಸ್‌ಸಿಪಿಎಲ್ ಸಿಬ್ಬಂದಿ ಪ್ರಶ್ನಿಸಿದ್ದಾರೆ, ಅಲ್ಲದೆ, ಯೋಜನೆಯನ್ನು ಪ್ರಾರಂಭಿಸಲು IISc ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಇತ್ತೀಚೆಗೆ ನೀಡಲಾಗಿದೆ. ಈ ಬೆಳವಣಿಗೆಗಳ ಬಗ್ಗೆ ಅರಿವಿಲ್ಲದ ಬಿಬಿಎಂಪಿ ಉನ್ನತ ಅಧಿಕಾರಿಗಳು ಸಿಎಂ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸೋನಿ ವರ್ಲ್ಡ್ ಜಂಕ್ಷನ್‌ನಿಂದ ಕೋರಮಂಗಲದ ಕೇಂದ್ರೀಯ ಸದನ್‌ವರೆಗಿನ 2.5 ಕಿಮೀ ಫ್ಲೈಓವರ್ ಮೂಲಕ ಆಗ್ನೇಯದಿಂದ ಪೂರ್ವ ಮತ್ತು ಪಶ್ಚಿಮ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಕೈಬಿಟ್ಟ ಮೇಲ್ಸೇತುವೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿಗೆ ಯಾವುದೇ ಗುತ್ತಿಗೆದಾರರು ಸಿಕ್ಕಿಲ್ಲ. ಸ್ಥಳೀಯ ಶಾಸಕ ರಾಮಲಿಂಗಾ ರೆಡ್ಡಿ ಅವರ ಪ್ರಯತ್ನದಿಂದ ಹೈದರಾಬಾದ್ ಮೂಲದ ನಿರ್ಮಾಣ ದೈತ್ಯ ಬಿಎಸ್‌ಸಿಪಿಎಲ್ ಯೋಜನೆಯನ್ನು ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿತು. ಬಿಬಿಎಂಪಿಯು ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ 8.80 ಕೋಟಿ ರೂ. ಕ್ರೋಢೀಕರಣ ನಿಧಿಯನ್ನು ಕಂಪನಿಗೆ ಹಸ್ತಾಂತರಿಸಬೇಕಿದ್ದು, ಅದರಲ್ಲಿ ಶೇ.75ರಷ್ಟು ಮಾತ್ರ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಗುತ್ತಿಗೆದಾರರು, ಬಿಬಿಎಂಪಿಗೆ ಪತ್ರ ಬರೆದಿದ್ದು ಕಾಮಗಾರಿ ನಡೆಸಲು ಯಾವುದೇ ಕಾರ್ಮಿಕರು ಲಭ್ಯವಿಲ್ಲ ಎಂಬ ವರದಿಗಳು ನಿಜವಲ್ಲ ಮತ್ತು ಸಾಕಷ್ಟು ಸಿಬ್ಬಂದಿಯನ್ನು ತೊಡಗಿಸಿಕೊಂಡಿವೆ ಎಂದು ಉಲ್ಲೇಖಿಸಿದ್ದಾರೆ. ಭೂಮಾಲೀಕರಿಗೆ ಬಾಡಿಗೆಯನ್ನು ತೆರವುಗೊಳಿಸುವ ಕುರಿತು ಬಿಎಸ್‌ಸಿಪಿಎಲ್‌ನ ವಾದದ ಕುರಿತು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯಿಸಿದ್ದು, ನಾವು ಗುತ್ತಿಗೆದಾರರಿಗೆ ಕ್ರೋಢೀಕರಣ ನಿಧಿ ಲಭ್ಯವಾಗುವಂತೆ ಮಾಡಿದ್ದೇವೆ, ಅವರು ಆ ಹಣದ ಮೂಲಕ ಬಾಡಿಗೆಯನ್ನು ತೆರವುಗೊಳಿಸಿ, ವಸ್ತುಗಳನ್ನು ಪಡೆದು ಕೆಲಸವನ್ನು ಪುನರಾರಂಭಿಸುತ್ತಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT