3 ವರ್ಷದ ಬಾಲಕನ ಶವ ಹೊರತೆಗೆದು ಪರೀಕ್ಷೆ 
ರಾಜ್ಯ

ಧಾರವಾಡ: ಮಗನ ಸಾವಿನ ಬಗ್ಗೆ ಪೋಷಕರ ಸಂಶಯ; ಹೂತಿದ್ದ 3 ವರ್ಷದ ಬಾಲಕನ ಶವ ಹೊರತೆಗೆದು ಪರೀಕ್ಷೆ!

ನವಲಗುಂದ ತಾಲೂಕಿನ ಯಮನ್ನೂರು ಗ್ರಾಮದಲ್ಲಿ ಮೂರು ವರ್ಷದ ಬಾಲಕನ ಮೃತದೇಹವನ್ನು ಆತನ ಸಮಾಧಿಯಿಂದ ಹೊರತೆಗೆಯಲಾಗಿದೆ. ಕೃಷಿ ಉಪಕರಣ ಮೇಲೆ ಬಿದ್ದು ಇತ್ತೀಚೆಗೆ ಬಾಲಕ ಮೃತಪಟ್ಟಿದ್ದನು.

ಧಾರವಾಡ: ಮಗನ ಸಾವಿನ ಸಂಬಂಧ ಪೋಷಕರು ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ಹೂತಿದ್ದ 3 ವರ್ಷದ ಬಾಲಕನ ಶವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ.

ನವಲಗುಂದ ತಾಲೂಕಿನ ಯಮನ್ನೂರು ಗ್ರಾಮದಲ್ಲಿ ಮೂರು ವರ್ಷದ ಬಾಲಕನ ಮೃತದೇಹವನ್ನು ಆತನ ಸಮಾಧಿಯಿಂದ ಹೊರತೆಗೆಯಲಾಗಿದೆ. ಕೃಷಿ ಉಪಕರಣ ಮೇಲೆ ಬಿದ್ದು ಇತ್ತೀಚೆಗೆ ಬಾಲಕ ಮೃತಪಟ್ಟಿದ್ದನು. ತಮ್ಮ ಮಗನ ಸಾವಿನಲ್ಲಿ ಏನೋ ಪಿತೂರಿ ನಡೆದಿದೆ ಎಂದು ಎಂದು ಪೋಷಕರು ದೂರಿದ್ದಾರೆ. ಭಾರೀ ಗಾತ್ರದ ಕೃಷಿ ಉಪಕರಣದ ತುಂಡು ಮಗುವಿನ ಮೇಲೆ ಬಿದ್ದಾಗ, ಮಗುವಿನ ತಲೆಗೆ ತೀವ್ರವಾದ ಗಾಯಗಳು ಮತ್ತು ಅಪಾರ ರಕ್ತಸ್ರಾವದಿಂದ ನೆರೆ ಮನೆಯಲ್ಲಿ ಮಗು ಸಾವನ್ನಪ್ಪಿತ್ತು.

ಮೃತ ಮಗುವಿನ ಪಾಲಕರಾದ ವೆಂಕಪ್ಪ ಮತ್ತು ಶಾಂತಾ ನೀಡಿದ ದೂರಿನ ಮೇರೆಗೆ ನವಲಗುಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮಣ್ಣೆತ್ತುವ ಯಂತ್ರದ ಸಹಾಯದಿಂದ ಹೊರತೆಗೆದಿದ್ದಾರೆ. ಈ ಸಂದರ್ಭದಲ್ಲಿ ತಹಶೀಲ್ದಾರ್, ಪೊಲೀಸ್ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಬಾಲಕ ಯಲ್ಲಪ್ಪ ತಮ್ಮ ನೆರೆಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಕೃಷಿ ಉಪಕರಣಗಳು ಬಿದ್ದು ಸಾವನ್ನಪ್ಪಿದ್ದಾನೆ ಎಂದು ಇಲ್ಲಿಯವರೆಗೆ ನಂಬಲಾಗಿತ್ತು, ಈಗ ಪೋಷಕರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸತ್ಯಾಂಶ ಹೊರಬೀಳಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ್ ಬೈಕೋಡ್ ತಿಳಿಸಿದ್ದಾರೆ. ಯಮನ್ನೂರಿನ ನಿವಾಸಿಯೊಬ್ಬರು ಮಾತನಾಡಿ, ಘಟನೆ ನಡೆದ ಕೂಡಲೇ ನೆರೆಮನೆಯ ನಾಗಲಿಂಗ ಗ್ರಾಮ ತೊರೆದ ನಂತರ ಯಲ್ಲಪ್ಪನ ಪೋಷಕರಿಗೆ ಅನುಮಾನ ಬಂದಿದೆ. ಆದರೆ ಕೆಲವರ ಪ್ರಕಾರ ಕೆಲಸಕ್ಕೆ ಹಾಜರಾಗಲು ಗ್ರಾಮವನ್ನು ತೊರೆದಿದ್ದಾರೆ ಎಂದು ಕೆಲವರು ಹೇಳಿದರೆ, ಖಿನ್ನತೆಯಿಂದ ಬಳಲುತ್ತಿದ್ದನಾಗಲಿಂಗ ಸಂಬಂಧಿಕರ ಮನೆಗೆ ಹೋಗಿದ್ದಾರೆ ಎಂದು ಕೆಲವರು ತಿಳಿಸಿದ್ದಾರೆ. ತಮ್ಮ ಮಗುವಿನ ಸಾವಿನ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಪೋಷಕರ ಹಕ್ಕು. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಈ ವಿಷಯದ ಬಗ್ಗೆ ನಾವು ಹೆಚ್ಚು ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಮೃತರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT